ಮಾವೋವಾದಿಗಳು(ಸಾಂದರ್ಭಿಕ ಚಿತ್ರ) 
ದೇಶ

ಅಪಹರಣಗೊಂಡಿದ್ದ ಟಿಆರ್ ಎಸ್ ಮುಖಂಡರ ಬಿಡುಗಡೆ

ನಾಲ್ಕು ದಿನಗಳ ಹಿಂದೆ ಅಪಹರಣಕ್ಕೀಡಾಗಿದ್ದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ಆರು ಮಂದಿ ನಾಯಕರನ್ನು ಮಾವೋವಾದಿಗಳು ಶನಿವಾರ...

ಹೈದರಾಬಾದ್: ನಾಲ್ಕು ದಿನಗಳ ಹಿಂದೆ ಅಪಹರಣಕ್ಕೀಡಾಗಿದ್ದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ಆರು ಮಂದಿ ನಾಯಕರನ್ನು ಮಾವೋವಾದಿಗಳು ಶನಿವಾರ ಬಿಡುಗಡೆ ಮಾಡಿದ್ದಾರೆ.

ತೆಲಂಗಾಣ ಹತ್ತಿರದ ಪುಸುಗುಪ್ಪ ಅರಣ್ಯ ಪ್ರದೇಶದ ಚಾರ್ಲಾ ಸಮೀಪ ನಾಯಕರನ್ನು ಮಾವೋವಾದಿಗಳು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ತೆಲಂಗಾಣದ ಭದ್ರಾಚಲಂ ಕ್ಷೇತ್ರದ ಟಿಆರ್ ಎಸ್ ಮುಖಂಡ ಎಂ.ರಾಮಕೃಷ್ಣ ಸೇರಿದಂತೆ ಇತರ ಐವರು ಟಿಆರ್ ಎಸ್ ನಾಯಕರನ್ನು ಮಾವೋವಾದಿಗಳು ಕಳೆದ ಬುಧವಾರ ಅಪಹರಿಸಿದ್ದರು.
ದೂರದ ಗ್ರಾಮಕ್ಕೆ ಯಾರನ್ನೋ ಭೇಟಿಯಾಗಲೆಂದು ತೆರಳಿದ್ದ ಇವರು ಎಷ್ಟು ಹೊತ್ತಾದರೂ ಹಿಂದಿರುಗಲಿಲ್ಲ. ಗುರುವಾರ ಇವರ ಅಪಹರಣದ ವಿಷಯ ಬೆಳಕಿಗೆ ಬಂದಿತು.
 
ಮಾವೋವಾದಿಗಳು ಹೆಚ್ಚಾಗಿರುವ ಛತ್ತೀಸ್ ಗರ್ ಗಡಿ ಪ್ರದೇಶದಲ್ಲಿ ಈ ಅಪಹರಣ ಆಡಳಿತಾರೂಢ ಪಕ್ಷದಲ್ಲಿ ಆತಂಕವನ್ನುಂಟುಮಾಡಿದೆ. ಅಪಹರಣಕ್ಕೀಡಾದ ಟಿಆರ್ ಎಸ್ ಮುಖಂಡರ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ.

ಈ ಸಂದರ್ಭದಲ್ಲಿ ಪತ್ರವೊಂದನ್ನು ಬಿಡುಗಡೆ ಮಾಡಿರುವ ಮಾವೋವಾದಿ ನಾಯಕರು, ನಕಲಿ ಎನ್ ಕೌಂಟರ್ ಮತ್ತು ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವುದು ಸೇರಿ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.ಅವರ ಬೇಡಿಕೆಗಳು ಈಡೇರದಿದ್ದರೆ ಟಿಆರ್ ಎಸ್ ನಾಯಕರನ್ನು ಗುರಿಯಾಗಿರಿಸಿಕೊಂಡು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಕ್ಬಾಲ್ ಹುಸೇನ್ ಮಾತು ನಂಬಬೇಡಿ, ಅವನಿಗೆ ಮಾತಾಡೋ ಚಟ: 'ಮಾನಸಪುತ್ರ'ನ ವಿರುದ್ಧ ಡಿಕೆಶಿ ಸಿಡಿಮಿಡಿ

ಬೆಂಗಳೂರು 2ನೇ ವಿಮಾನ ನಿಲ್ದಾಣ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ!

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ತಿರುವನಂತಪುರಂನಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು, 'ಬ್ಯೂಟಿ ಆಫ್ ಡೆಮಾಕ್ರಸಿ' ಎಂದ ಶಶಿ ತರೂರ್!

Video: ಜ. 6 ರಂದು ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ: ಡಿಕೆಶಿ ‘ಮಾನಸಪುತ್ರ’ನಿಂದ ಸ್ಫೋಟಕ ಹೇಳಿಕೆ

ಮನ್ರೇಗಾಗೆ ಮರು ನಾಮಕರಣ: ಕ್ರಾಂತಿಕಾರಿ ಯೋಜನೆಯ 'ಕ್ರೆಡಿಟ್' ತೆಗೆದುಕೊಳ್ಳಲು ಪ್ರಧಾನಿ ಹುನ್ನಾರ- ಕಾಂಗ್ರೆಸ್

SCROLL FOR NEXT