ಕಾಶಿ ವಿಶ್ವನಾಥನ ಸನ್ನಿಧಿ 
ದೇಶ

ವಿದೇಶಿ ನಾರಿಯರು ಸೀರೆ ತೊಟ್ಟರಷ್ಟೇ ವಿಶ್ವನಾಥನ ದರ್ಶನ

ಕಾಶಿ ವಿಶ್ವನಾಥನ ಸನ್ನಿಧಿಯನ್ನು ಪ್ರವೇಶಿಸುವ ವಿದೇಶೀಯ ನಾರಿಯರು ಇನ್ನು ಮುಂದೆ ಸೀರೆಧರಿಸಿಯೇ ಒಳಹೋಗಬೇಕು ಎಂಬ ನಿಯಮ...

ಲಖನೌ: ಕಾಶಿ ವಿಶ್ವನಾಥನ ಸನ್ನಿಧಿಯನ್ನು ಪ್ರವೇಶಿಸುವ ವಿದೇಶೀಯ ನಾರಿಯರು ಇನ್ನು ಮುಂದೆ ಸೀರೆಧರಿಸಿಯೇ ಒಳಹೋಗಬೇಕು ಎಂಬ ನಿಯಮ  ತರಲಾಗಿದೆ ಎಂದು `ಇಂಡಿಯನ್ ಎಕ್ಸ್‍ಪ್ರೆಸ್' ವರದಿಮಾಡಿದೆ. ಆದರೆ ತಾವು ವಸ್ತ್ರ ಸಂಹಿತೆ ಜಾರಿ ಮಾಡಿಲ್ಲ, ಸಭ್ಯತೆಯಿಂದ ಬಟ್ಟೆ ಧರಿಸಿಕೊಂಡು ಬರುವಂತೆ ಹೇಳಿದ್ದೇವೆ ಅಷ್ಟೇ ಎಂದು ದೇಗುಲ ಸಮಜಾಯಿಷಿ ನೀಡಿದೆ. ಮೈತೋರಿಸುವ ಬಟ್ಟೆ ಧರಿಸುವ ದೇಶಿ ಅಥವಾವಿದೇಶಿ ಮಹಿಳೆಯರಿಗೆ ಇನ್ನು ವಿಶ್ವನಾಥನ ದರ್ಶನಕ್ಕೆಪ್ರವೇಶವಿಲ್ಲ. ದೇಗುಲದ ಹೊರಗೆ ಕಿಯೋಸ್ಕ್‍ಗಳನ್ನು ಕಟ್ಟಲಾಗಿದ್ದು, ಬೇರೆ ದಿರಿಸು ತೊಟ್ಟು ಬಂದವರು ಅಲ್ಲಿ ಸೀರೆಯುಟ್ಟು ಬರಬಹುದಾಗಿದೆ. ಸೀರೆಯುಡಲು ಗೊತ್ತಿಲ್ಲದವರು ಮಹಿಳಾ ಪೋಲೀಸರಿಂದ ಆ ಕುರಿತು ತರಬೇತಿಯನ್ನೂ ಪಡೆಯಬಹುದು. ವಿದೇಶಿ ಯಾತ್ರಿಕರು ತೊಡುವ ದಿರಿಸುಗಳು ತಮಗೆ  ಮುಜುಗರ ಉಂಟುಮಾಡುತ್ತಿವೆ ಎಂದು ದಕ್ಷಿಣ ಭಾರತದ ಪ್ರವಾಸಿಗರು ದೂರಿಕೊಂಡಿದ್ದರು. ತಿರುಪತಿ ದೇವಾಲಯದಲ್ಲಿರುವಂತೆ ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗೆ ಧೋತಿ ಕುರ್ತಾದ ವಸ್ತ್ರಸಂಹಿತೆ ಜಾರಿ ಮಾಡುವಂತೆ ಮನವಿ ಮಾಡಿದ್ದರು ಎಂದು ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ದ್ವಿವೇದಿ ಹೇಳಿದ್ದಾರೆ. ಆದರೆ, ತಾವು ವಸ್ತ್ರಸಂಹಿತೆ ಜಾರಿ ಮಾಡಿಲ್ಲ, ಸಭ್ಯವಾಗಿ ಬಟ್ಟೆ ಧರಿಸಿ ಬರುವಂತೆ ಹೇಳಿದ್ದೇವೆ ಎಂದು ಕಾಶಿ ವಿಶ್ವನಾಥ ಮಂದಿರ ನ್ಯಾಸ ಪರಿಷತ್‍ನ ಅಧ್ಯಕ್ಷ ಅಶೋಕ್ ದ್ವಿವೇದಿ
ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT