ಸಾಂದರ್ಭಿಕ ಚಿತ್ರ 
ದೇಶ

ಪ್ರಶಸ್ತಿ ವಾಪಸಿಗೊಂದು ಪಾಲಿಸಿ?

ದೇಶದಲ್ಲಿನ ಅಸಹಿಷ್ಣುತೆಗಾಗಿ ಲೇಖಕರಿಂದ ಪ್ರಶಸ್ತಿ ವಾಪಸು ಚಳವಳಿಯ ಬಿಸಿ ಎದುರಿಸುತ್ತಿರುವ ಸಾಹಿತ್ಯ ಅಕಾಡೆಮಿ...

ನವದೆಹಲಿ: ದೇಶದಲ್ಲಿನ ಅಸಹಿಷ್ಣುತೆಗಾಗಿ ಲೇಖಕರಿಂದ ಪ್ರಶಸ್ತಿ ವಾಪಸು ಚಳವಳಿಯ ಬಿಸಿ ಎದುರಿಸುತ್ತಿರುವ ಸಾಹಿತ್ಯ ಅಕಾಡೆಮಿ, ಡಿ.17ರಂದು ನಡೆಯಲಿರುವ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ವಿಚಾರವನ್ನು ಎತ್ತಿಕೊಳ್ಳಲಿದೆ. ಭವಿಷ್ಯದಲ್ಲಿ ಪ್ರಶಸ್ತಿ ಮರಳಿಸುವವರಿಗಾಗಿ ನೀತಿಯೊಂದನ್ನು ರೂಪಿಸುವ ಕುರಿತು ಕೂಡ ಚರ್ಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 
ನಮ್ಮ ಕಾರ್ಯಕಾರಿ ಸಭೆಯಲ್ಲಿ, ಪ್ರಶಸ್ತಿ ವಾಪಸಿ ಕುರಿತು ನಮ್ಮ ಸದಸ್ಯರೇನು ಮಾಡಬಹುದು ಎಂಬುದನ್ನು ಚರ್ಚಿಸಲಿದ್ದೇವೆ. ಹೀಗೆ ಪ್ರಶಸ್ತಿಗಳನ್ನು ಮರಳಿಸಬಹುದೇ, ಮರಳಿಸುವುದಾದರೆ ಅದರ ಕುರಿತು ಲಿಖಿತ ನಿಯಮಗಳನ್ನು ರಚಿಸಬಹುದೇ ಎಂಬುದರ ಕುರಿತೂ ಚರ್ಚಿಸಲಾಗುವುದು ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಶ್ವನಾಥ ಪ್ರಸಾದ್ ತಿವಾರಿ ಹೇಳಿದ್ದಾರೆ. 
ಪ್ರಶಸ್ತಿಯನ್ನೇನೋ ಸುಲಭವಾಗಿ ಮರಳಿಸಬಹುದು. ಆದರೆ ಅದರಿಂದ ಗಳಿಸಿದ ಘನತೆಯನ್ನು ಮರಳಿಸಬಹುದೇ? ಮುಂದೆಯೂ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಅಕಾಡೆಮಿ ಅವರ ಹೆಸರನ್ನು ಪ್ರದರ್ಶಿಸಬಹುದೇ? ಎಂಬಿತ್ಯಾದಿ ವಿಚಾರಗಳು ಚರ್ಚೆಯಾಗಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಪ್ರಶಸ್ತಿ ಹಾಗೂ ಪ್ರಶಸ್ತಿ ಹಣವನ್ನು ಮರಳಿಸುವ ಬಗ್ಗೆ ಯಾವುದೇ ಲಿಖಿತ ನಿಯಮವಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲಡಾಖ್ ಗಡಿ ಸಂಘರ್ಷ: ಮಾಜಿ ಸೇನಾಧಿಕಾರಿ ನರವಾಣೆ ಅಪ್ರಕಟಿತ ಪುಸ್ತಕ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಸಂಸತ್ ನಲ್ಲಿ ಕೋಲಾಹಲ, ಕಲಾಪ ಮುಂದೂಡಿಕೆ

ಔಟಾಗಿ ಹೋಗುತ್ತಿದ್ದ Pak ಆಟಗಾರನ ಕಡೆ ಕೋಪದಿಂದ ನುಗ್ಗಿದ ಸೂರ್ಯವಂಶಿ, ಕೂಡಲೇ ಮಧ್ಯಪ್ರವೇಶಿಸಿದ ವಿಹಾನ್, Video!

ಜನವರಿಯಲ್ಲಿ ಭಾರತದ ಉತ್ಪಾದನಾ ವಲಯದ ಚಟುವಟಿಕೆಗಳಲ್ಲಿ ಸ್ವಲ್ಪ ಚೇತರಿಕೆ

CCL: 12 ವರ್ಷಗಳ ಬಳಿಕ 3ನೇ ಬಾರಿಗೆ 'ಕರ್ನಾಟಕ' ಚಾಂಪಿಯನ್, ಕಿಚ್ಚಾ ಸುದೀಪ್ ಗೆ ಬಿಗ್ ಗಿಫ್ಟ್! ಸಿಕ್ಕ ಬಹುಮಾನವೆಷ್ಟು?

BLA ಯಲ್ಲಿ ಸುಶಿಕ್ಷಿತ ಹೆಣ್ಣು ಮಕ್ಕಳು! ಪಾಕ್ ವಿರುದ್ಧ ರಾತ್ರಿಯಿಡೀ ಹೋರಾಡಿ ಪ್ರಾಣತೆತ್ತ ಫಿದಾಯೀನ್': ಅಂತಿಮ ಕ್ಷಣದ Video!

SCROLL FOR NEXT