ರಾಷ್ಟ್ರಗೀತೆಗೆ ಅಗೌರವ ತೋರಿಸಿದ ಕುಟುಂಬದ ವಿರುದ್ಧ ದನಿಯೆತ್ತಿದ ಜನರು 
ದೇಶ

ರಾಷ್ಟ್ರಗೀತೆಗೆ ಅಗೌರವ ತೋರಿಸಿದ ಕುಟುಂಬವನ್ನು ಥಿಯೇಟರ್‌ನಿಂದಲೇ ಹೊರಕಳಿಸಿದ್ರು!

ರಾಷ್ಟ್ರಗೀತೆಗೆ ಅಗೌರವ ಸೂಚಿಸಿದರೆ ನಾವು ಸುಮ್ಮನಿರಲ್ಲ ಎಂಬುದನ್ನು ಮುಂಬೈಯ ಜನ ತೋರಿಸಿಕೊಟ್ಟಿರುವ ಈ ವೀಡಿಯೋ ಈಗ...

ಮುಂಬೈ:  ರಾಷ್ಟ್ರಗೀತೆಗೆ ಅಗೌರವ ತೋರಿಸಿದರೆ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ. ಮುಂಬೈ ಕುರ್ಲಾದ ಪಿವಿಆರ್ ಮಲ್ಟಿಪ್ಲೆಕ್ಸ್  ಒಂದರಲ್ಲಿ ರಣ್‌ಬೀರ್ ಮತ್ತು ದೀಪಿಕಾ ನಟಿಸಿರುವ 'ತಮಾಷಾ' ಸಿನಿಮಾ ನೋಡಲು ಕುಟುಂಬವೊಂದು ಬಂದಿತ್ತು. ಸಿನಿಮಾ ಆರಂಭವಾಗುವ ಮುನ್ನ ರಾಷ್ಟ್ರಗೀತೆ ಮೊಳಗಿದಾಗ ಆ ಕುಟುಂಬ ಮಾತ್ರ ಸೀಟು ಬಿಟ್ಟು ಎದ್ದು ನಿಲ್ಲಲಿಲ್ಲ. ಇನ್ನೇನು ರಾಷ್ಟ್ರಗೀತೆ ಮುಗಿಯುತ್ತಾ ಬಂದಾಗ ಜನರು ಸೀಟು ಬಿಟ್ಟೇಳದ ಆಲಸಿ ಕುಟುಂಬವನ್ನು ನೋಡಿದ್ದು, ಕೂಡಲೇ ಆ ಕುಟುಂಬವನ್ನು  ತರಾಟೆಗೆ ತೆಗೆದು ಕೊಂಡಿದ್ದಾರೆ. 
ಸಿನಿಮಾ ಥಿಯೇಟರ್ ನಲ್ಲಿ ನೆರೆದಿದ್ದ ಜನರೆಲ್ಲರೂ ಆ ಕುಟುಂಬದವರನ್ನು ಬೈದಿದ್ದು, ಸಿಟ್ಟಿಗೆದ್ದ ವ್ಯಕ್ತಿಯೊಬ್ಬರು ಅವರಿಗೆ ಹೊಡೆಯುವುದಕ್ಕೂ ಮುಂದಾಗಿದ್ದಾರೆ.
ರಾಷ್ಟ್ರಗೀತೆಗೆ ಅಗೌರವ ಸೂಚಿಸಿದ ಆ ಕುಟುಂಬವನ್ನು ಥಿಯೇಟರ್ ನಿಂದ ಹೊರ ಕಳಿಸಿ ಎಂದು ಎಲ್ಲರೂ ಬೊಬ್ಬೆ ಹಾಕಿದ್ದು, ಕೊನೆಗೆ ಥಿಯೇಟರ್ ನೌಕರು ಜನರ ಒತ್ತಾಯಕ್ಕೆ ಮಣಿದು ಆ ಕುಟುಂಬವನ್ನು ಥಿಯೇಟರ್ ನಿಂದ ಹೊರಕಳಿಸಲಾಯಿತು.
ರಾಷ್ಟ್ರಗೀತೆಗೆ ಅಗೌರವ ಸೂಚಿಸಿದರೆ ನಾವು ಸುಮ್ಮನಿರಲ್ಲ ಎಂಬುದನ್ನು ಮುಂಬೈಯ ಜನ ತೋರಿಸಿಕೊಟ್ಟಿರುವ ಈ ವೀಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT