ದೇಶ

ಗಲ್ಲು ಶಿಕ್ಷೆ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ, ಅದನ್ನು ರದ್ದುಗೊಳಿಸಿ: ಶಶಿ ತರೂರ್

Lingaraj Badiger

ನವದೆಹಲಿ: ಗಲ್ಲು ಶಿಕ್ಷೆ ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಒಂದು ಕಪ್ಪು ಚುಕೆ ಎಂದಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು, ಅದನ್ನು ರದ್ದುಗೊಳಿಸಬೇಕು ಎಂದು ಮಂಗಳವಾರ ಒತ್ತಾಯಿಸಿದ್ದಾರೆ.

ಲೋಕಸಭೆಯ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಕೇಂದ್ರ ಸಚಿವ, ಜನರನ್ನು ತಲ್ಲಿಗೇರಿಸುವುದರಿಂದ ಅಪರಾಧ ತಡೆಯಲು ಸಾಧ್ಯವಿಲ್ಲ. ಗಲ್ಲು ಶಿಕ್ಷೆ ಬದಲು ಬೇರೆ ಕಠಿಣ ಶಿಕ್ಷೆ ನೀಡಬಹುದು ಎಂದಿದ್ದಾರೆ.

ಮಹಾತ್ಮ ಗಾಂಧಿ ಅವರ ಆದರ್ಶಗಳನ್ನು ಎತ್ತಿಹಿಡಿಯಬೇಕಾದರ ನಾವು ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕು. ನನ್ನ ಪ್ರಕಾರ ಶೇ.70ರಷ್ಟು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿವೆ ಎಂದು ತರೂರ್ ತಿಳಿಸಿದರು.

SCROLL FOR NEXT