ಮನಮೋಹನ್ ಸಿಂಗ್(ಸಂಗ್ರಹ ಚಿತ್ರ) 
ದೇಶ

ಕಲ್ಲಿದ್ದಲು ಕಾರ್ಯದರ್ಶಿ ಶಿಫಾರಸ್ಸಿನ ಪ್ರಕಾರ ಆದೇಶ ನೀಡಿದ್ದೆ: ಮನಮೋಹನ್ ಸಿಂಗ್

ಕಲ್ಲಿದ್ದಲು ಕಾರ್ಯದರ್ಶಿಯಾಗಿದ್ದ ಪಿಸಿ ಪಾರಖ್ ಅವರ ಸಲಹೆಯ ಮೇರೆಗೆ ಹಿಂಡಾಲ್ಕೊ ಕಂಪನಿಗೆ ತಲಾಬಿರಾ-2 ಕಲ್ಲಿದ್ದಲು ನಿಕ್ಷೇಪವನ್ನು ಹಂಚಿಕೆ

ನವದೆಹಲಿ: ಕಲ್ಲಿದ್ದಲು ಕಾರ್ಯದರ್ಶಿಯಾಗಿದ್ದ ಪಿಸಿ ಪಾರಖ್ ಅವರ ಸಲಹೆಯ ಮೇರೆಗೆ ಹಿಂಡಾಲ್ಕೊ ಕಂಪನಿಗೆ ತಲಾಬಿರಾ-2 ಕಲ್ಲಿದ್ದಲು ನಿಕ್ಷೇಪವನ್ನು ಹಂಚಿಕೆ ಮಾಡಲು ಅನುಮೋದನೆ ನೀಡಿದ್ದಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಹಿಂಡಾಲ್ಕೊ ಕಂಪನಿಗೆ ಕಲ್ಲಿದ್ದಲು ಹಂಚಿಕೆ ಮಾಡುವಂತೆ ಒಡಿಶಾ ಮುಖ್ಯಮಂತ್ರಿಯ ನವೀನ್ ಪಟ್ನಾಯಕ್ ಅವರ ಮನವಿಯನ್ನು ಕಲ್ಲಿದ್ದಲು ಕಾರ್ಯದರ್ಶಿಯಾಗಿದ್ದ ಪಿಸಿ ಪಾರಖ್ ಹಾಗೂ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರವೇ ಕಲ್ಲಿದ್ದಲು ಹಂಚಿಕೆಗೆ ಅನುಮೋದನೆ ನೀಡಿದ್ದೇನೆ ಎಂದಿದ್ದಾರೆ. ಹಿಂಡಾಲ್ಕೊ ಕಂಪನಿಯ ಮಹತ್ವದ ಯೋಜನೆಯೊಂದಕ್ಕೆ ಕಲ್ಲಿದ್ದಲು ಲಿಂಕೇಜ್ ಕಲ್ಪಿಸಬೇಕು ಎಂದಷ್ಟೇ ನವೀನ್ ಪಟ್ನಾಯಕ್ ಅಂದಿನ ಪ್ರಧಾನಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದರು. ಅದನ್ನು ಸರ್ಕಾರ ಮಂಜೂರು ಮಾಡಿತ್ತು, ಆದಾಗ್ಯೂ ತಲಾಬಿರಾ-2 ಕಲ್ಲಿದ್ದಿಲಿನ ಷೇರಿನಲ್ಲಿ ಹಿಂಡಾಲ್ಕೊ ಕಂಪನಿಯನ್ನು ಪರಿಗಣಿಸಿದ್ದೇಕೆ ಎಂಬ ಸಿಬಿಐ ಪ್ರಶ್ನೆಗೆ ಉತ್ತರಿಸಿರುವ ಮನಮೋಹನ್ ಸಿಂಗ್, ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ಶಿಫಾರಸ್ಸನ್ನು ಆಧರಿಸಿ ಅನುಮೋದನೆ ನೀಡಲಾಯಿತು ಎಂದಿದ್ದಾರೆ.
ಕಲ್ಲಿದ್ದಲು ಲಿಂಕೇಜ್ ಪಡೆಯುವುದಕ್ಕಿಂತಲೂ ನಿಕ್ಷೇಪ ಪಡೆಯುವುದು ಹಿಂಡಾಲ್ಕೊ ಕಂಪನಿಗೆ ಲಾಭದಾಯಕವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಟೌನ್‌ಶಿಪ್‌ ಯೋಜನೆ ಬಗ್ಗೆ BJP-JDS ಅಪಪ್ರಚಾರ, ರೈತರ ಭೂಮಿ ಬಲವಂತವಾಗಿ ಪಡೆಯಲ್ಲ: ಸಚಿವ ಯತೀಂದ್ರ

ಖಾತೆ ಹಂಚಿಕೆಗೂ ಮುನ್ನ ಸಚಿವ ನಾಗೇಂದ್ರಗೆ ಸಂಕಷ್ಟ! ವಿಶೇಷ ನ್ಯಾಯಾಲಯದ ಜಾಮೀನು ಷರತ್ತು ಉಲ್ಲಂಘಿಸಿದ ಆರೋಪ

ಮುಂಬೈ: ಬಾಲಿವುಡ್ ನಟಿಯ ಮೇಲೆ ಅತ್ಯಾಚಾರ ಆರೋಪ; 73 ವರ್ಷದ ಖ್ಯಾತ ಸಿನಿಮಾ ಡೈರೆಕ್ಟರ್ ಬಂಧನ!