ಸಾಂದರ್ಭಿಕ ಚಿತ್ರ 
ದೇಶ

ಪ್ರಾಣ ಪಣಕ್ಕಿಟ್ಟು ಗೋವನ್ನು ರಕ್ಷಿಸಿದ ಮುಸ್ಲಿಂ ಯುವಕ

ಕೋಮು ಸೌಹಾರ್ದತೆಯನ್ನು ನಿರೂಪಿಸುವಂತಹ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮುಸ್ಲಿಂ ಯುವಕನೊಬ್ಬ ಪ್ರಾಣವನ್ನು ಪಣಕ್ಕಿಟ್ಟು ಗೋವನ್ನು ಬದುಕಿಸಿದ್ದಾನೆ.

ಲಖನೌ: ಕೋಮು ಸೌಹಾರ್ದತೆಯನ್ನು ನಿರೂಪಿಸುವಂತಹ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮುಸ್ಲಿಂ ಯುವಕನೊಬ್ಬ ಪ್ರಾಣವನ್ನು ಪಣಕ್ಕಿಟ್ಟು ಗೋವನ್ನು ಬದುಕಿಸಿದ್ದಾನೆ.
ಬಾವಿಯಲ್ಲಿ ಬಿದ್ದು ಜೀವನ-ಮರಣದ ನಡುವೆ ಹೋರಾಡುತ್ತಿದ್ದ ಕರುವನ್ನು ಮುಸ್ಲಿಂ ಯುವಕ ರಕ್ಷಿಸಿದ್ದಾನೆ. ಪೇಶ್‌ ಬಾಗ್‌ನಲ್ಲಿ ಬಾವಿಗೆ ಬಿದ್ದ ಕರುವನ್ನು ಮುಸ್ಲಿಂ ಯುವಕ ಮೊಹಮ್ಮದ್ ಜಾಕಿ ಬಾವಿಗೆ ಜಿಗಿದು ಕರುವನ್ನು ರಕ್ಷಿಸಿದ್ದಾನೆ, ಯುವಕನ ಕೆಲಸಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.  
ಹಸು ಬಾವಿಗೆ ಬಿದ್ದಿರುವ ಘಟನೆ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸುವ ಮುನ್ನವೇ ಮುಸ್ಲಿಂ ಯುವಕ ಹಸುವನ್ನು ರಕ್ಷಿಸಿದ್ದಾನೆ ಎಂದು ಬಜಾರ್ ಖಾಲ ಪೊಲೀಸರು ತಿಳಿಸಿದ್ದಾರೆ. 60 ಅಡಿ ಉದ್ದದ ಬಾವಿಗೆ ಕರು ಬಿದ್ದಿತ್ತು, ಅದನ್ನು ಮೇಲೆತ್ತಲು ಕ್ರೇನ್ ತರಿಸಲಾಯಿತು. ಬಾವಿಯೊಳಗೆ ಇಳಿಯಲು ಯಾರೂ ಸಿದ್ಧರಿರಲಿಲ್ಲ. ಆದರೆ ಮೊಹಮ್ಮದ್ ಜಾಕಿ ಬಾವಿಗೆ ಜಿಗಿದು ಬದುಕಿಸಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT