ಮಾವೋವಾದಿ(ಸಂಗ್ರಹ ಚಿತ್ರ) 
ದೇಶ

ಮಹಾರಾಷ್ಟ್ರ: 10 ವರ್ಷಗಳಲ್ಲಿ 502 ನಕ್ಸಲರ ಶರಣಾಗತಿ

ಮಹಾರಾಷ್ಟ್ರದ ನಕ್ಸಲ್ ಶರಣಾಗತಿಯ ನೀತಿ ಸಕಾರಾತ್ಮಕ ಫಲಿತಾಂಶ ನೀಡಿದ್ದು ಕಳೆದ 10 ವರ್ಷಗಳಲ್ಲಿ 502 ಮಾವೋವಾದಿಗಳು ಶಸ್ತಾಸ್ತ್ರ ತ್ಯಜಿಸಿ ಸರ್ಕಾರದಿಂದ ಪುನರ್ವಸತಿ ಪಡೆದಿದ್ದಾರೆ.

ನಾಗ್ಪುರ: ಮಹಾರಾಷ್ಟ್ರದ ನಕ್ಸಲ್ ಶರಣಾಗತಿಯ ನೀತಿ ಸಕಾರಾತ್ಮಕ ಫಲಿತಾಂಶ ನೀಡಿದ್ದು ಕಳೆದ 10 ವರ್ಷಗಳಲ್ಲಿ 502 ಮಾವೋವಾದಿಗಳು ಶಸ್ತಾಸ್ತ್ರ ತ್ಯಜಿಸಿ ಸರ್ಕಾರದಿಂದ ಪುನರ್ವಸತಿ ಪಡೆದಿದ್ದಾರೆ.
ಶರಣಾಗಿರುವವರ ಪೈಕಿ 482 ಜನರು ನಕ್ಸಲ್ ಪೀಡಿತ ಗಡ್ಚಿರೋಲಿ ಜಿಲ್ಲೆಯವರಾಗಿದ್ದಾರೆ. 2005 ರ ಆಗಸ್ಟ್ 29 ರಂದು ಅಂದಿನ ಮಹಾರಾಷ್ಟ್ರ ಸರ್ಕಾರ ನಕ್ಸಲ್ ಶರಣಾಗತಿ ನೀರಿಯನ್ನು ಜಾರಿಗೊಳಿಸಿತ್ತು, ಅದನ್ನು ಈವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.    
ಮದನ್ ಅಣ್ಣಾ ಅಲಿಯಾಸ್ ಬಾಲನ್ ಬಾಳ್ಯಾ ಸರ್ಕಾರದ ಯೋಜನೆಯಡಿ ಶರಣಾದ ಮೊದಲ ಮಾವೊವಾದಿಯಾಗಿದ್ದಾರೆ. 2013 ರಲ್ಲಿ 49 ನಕ್ಸಲರು  ಹಾಗೂ 2014 ರಲ್ಲಿ 40 ನಕ್ಸಲರು ಶರಣಾಗಿದ್ದು 2015 ರ ಸೆಪ್ಟೆಂಬರ್ ನಲ್ಲಿ 25 ನಕ್ಸಲರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  
16 ಕಮಾಂಡರ್ ಗಳು, 24 ಡೆಪ್ಯುಟಿ ಕಮಾಂಡರ್ ಗಳು ಹಾಗೂ 218 ಸದಸ್ಯರು 110 ರಾಮ ರಕ್ಷಕರು, 127 ಸಂಗಮ್ ಸದಸ್ಯರು ಶರಣಾಗಿದ್ದಾರೆ. ಶರಣಾಗಿರುವವರ ಪ್ರಕಾರ ನಕ್ಸಲರಿಗೆ ಕುಶಲ್ಯ ತರಬೇತಿ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT