ಮಾವೋವಾದಿ(ಸಂಗ್ರಹ ಚಿತ್ರ) 
ದೇಶ

ಮಹಾರಾಷ್ಟ್ರ: 10 ವರ್ಷಗಳಲ್ಲಿ 502 ನಕ್ಸಲರ ಶರಣಾಗತಿ

ಮಹಾರಾಷ್ಟ್ರದ ನಕ್ಸಲ್ ಶರಣಾಗತಿಯ ನೀತಿ ಸಕಾರಾತ್ಮಕ ಫಲಿತಾಂಶ ನೀಡಿದ್ದು ಕಳೆದ 10 ವರ್ಷಗಳಲ್ಲಿ 502 ಮಾವೋವಾದಿಗಳು ಶಸ್ತಾಸ್ತ್ರ ತ್ಯಜಿಸಿ ಸರ್ಕಾರದಿಂದ ಪುನರ್ವಸತಿ ಪಡೆದಿದ್ದಾರೆ.

ನಾಗ್ಪುರ: ಮಹಾರಾಷ್ಟ್ರದ ನಕ್ಸಲ್ ಶರಣಾಗತಿಯ ನೀತಿ ಸಕಾರಾತ್ಮಕ ಫಲಿತಾಂಶ ನೀಡಿದ್ದು ಕಳೆದ 10 ವರ್ಷಗಳಲ್ಲಿ 502 ಮಾವೋವಾದಿಗಳು ಶಸ್ತಾಸ್ತ್ರ ತ್ಯಜಿಸಿ ಸರ್ಕಾರದಿಂದ ಪುನರ್ವಸತಿ ಪಡೆದಿದ್ದಾರೆ.
ಶರಣಾಗಿರುವವರ ಪೈಕಿ 482 ಜನರು ನಕ್ಸಲ್ ಪೀಡಿತ ಗಡ್ಚಿರೋಲಿ ಜಿಲ್ಲೆಯವರಾಗಿದ್ದಾರೆ. 2005 ರ ಆಗಸ್ಟ್ 29 ರಂದು ಅಂದಿನ ಮಹಾರಾಷ್ಟ್ರ ಸರ್ಕಾರ ನಕ್ಸಲ್ ಶರಣಾಗತಿ ನೀರಿಯನ್ನು ಜಾರಿಗೊಳಿಸಿತ್ತು, ಅದನ್ನು ಈವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.    
ಮದನ್ ಅಣ್ಣಾ ಅಲಿಯಾಸ್ ಬಾಲನ್ ಬಾಳ್ಯಾ ಸರ್ಕಾರದ ಯೋಜನೆಯಡಿ ಶರಣಾದ ಮೊದಲ ಮಾವೊವಾದಿಯಾಗಿದ್ದಾರೆ. 2013 ರಲ್ಲಿ 49 ನಕ್ಸಲರು  ಹಾಗೂ 2014 ರಲ್ಲಿ 40 ನಕ್ಸಲರು ಶರಣಾಗಿದ್ದು 2015 ರ ಸೆಪ್ಟೆಂಬರ್ ನಲ್ಲಿ 25 ನಕ್ಸಲರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  
16 ಕಮಾಂಡರ್ ಗಳು, 24 ಡೆಪ್ಯುಟಿ ಕಮಾಂಡರ್ ಗಳು ಹಾಗೂ 218 ಸದಸ್ಯರು 110 ರಾಮ ರಕ್ಷಕರು, 127 ಸಂಗಮ್ ಸದಸ್ಯರು ಶರಣಾಗಿದ್ದಾರೆ. ಶರಣಾಗಿರುವವರ ಪ್ರಕಾರ ನಕ್ಸಲರಿಗೆ ಕುಶಲ್ಯ ತರಬೇತಿ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಂದ್ರದಿಂದ MGNREGA ಯೋಜನೆ 'ಬುಲ್ಡೋಜ್'; 'ಕರಾಳ ಕಾನೂನಿನ' ವಿರುದ್ಧ ಹೋರಾಡಲು ಸೋನಿಯಾ ಪ್ರತಿಜ್ಞೆ

ಬಾಗಲಕೋಟೆ: ಬುದ್ಧಿಮಾಂದ್ಯ ಮಕ್ಕಳ ಮೇಲೆ ಕ್ರೌರ್ಯ; ಕಣ್ಣಿಗೆ ಖಾರದಪುಡಿ ಎರಚಿ, ಬೆಲ್ಟ್, ಪೈಪ್‌ನಿಂದ ಹೊಡೆದು ಶಿಕ್ಷಕರಿಂದ ಹಿಂಸೆ!

ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ವ್ಯವಸಾಯ: 'ಭೂಮಿ'ಯನ್ನು ಬಂಜೆ ಮಾಡಬಾರದು- ಸಿಎಂ ಸಿದ್ದರಾಮಯ್ಯ

ಅಗಸ್ಟಾವೆಸ್ಟ್‌ಲ್ಯಾಂಡ್: ಇಡಿ ಪ್ರಕರಣದಲ್ಲಿ ಕ್ರಿಶ್ಚಿಯನ್ ಮೈಕೆಲ್ ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶ

ಟಿ20 ವಿಶ್ವಕಪ್ 2026 ನಿಂದ ಶುಭ್ಮನ್ ಗಿಲ್ ಕೈಬಿಟ್ಟಿದ್ದೇಕೆ?: ಅಜಿತ್ ಅಗರ್ಕರ್ ಕೊಟ್ರು ಕಾರಣ

SCROLL FOR NEXT