ಸಂಜೀವ್ ಬಲ್ಯಾಣ್ 
ದೇಶ

ಕೇರಳದಲ್ಲಿ ಗೋಮಾಂಸ ನಿಷೇಧಿಸಲು ಧೈರ್ಯವಿದೆಯೆ?

ಗೋಮಾಂಸ ಭಕ್ಷಿಸಿದ್ದಾರೆ ಎಂಬ ಶಂಕೆ ಮೇರೆಗೆ ದಾದ್ರಿಯಲ್ಲಿ ನಡೆದ ಹತ್ಯೆಯ ಬೆನ್ನಲ್ಲೇ ಗೋಮಾಂಸ ನಿಷೇಧದ ದನಿಯೂ ಏರತೊಡಗಿದೆ. ಕೇರಳದಲ್ಲಿ...

ನವದೆಹಲಿ: ಗೋಮಾಂಸ ಭಕ್ಷಿಸಿದ್ದಾರೆ ಎಂಬ ಶಂಕೆ ಮೇರೆಗೆ ದಾದ್ರಿಯಲ್ಲಿ ನಡೆದ ಹತ್ಯೆಯ ಬೆನ್ನಲ್ಲೇ ಗೋಮಾಂಸ ನಿಷೇಧದ ದನಿಯೂ ಏರತೊಡಗಿದೆ. ಕೇರಳದಲ್ಲಿ ಗೋಮಾಂಸ ನಿಷೇಧಿಸಲು ಧೈರ್ಯವಿದೆಯೆ? ಹೀಗೆ ಕೇಳುವ ಮೂಲಕ  ಕೇಂದ್ರ ಸರ್ಕಾರ ಕಾಂಗ್ರೆಸ್ ಆಡಳಿತವಿರುವ ಕೇರಳ ಸರ್ಕಾರಕ್ಕೆ  ಪ್ರಶ್ನೆಯೆಸಿದಿದೆ.
 ಕೇರಳದಲ್ಲಿ ಗೋಮಾಂಸ ನಿಷೇಧ ಮಾಡಿ ನೋಡೋಣ ಎಂದು ಕೇಂದ್ರ ಕೃಷಿ ಸಹಮಂತ್ರಿ ಸಂಜೀವ್  ಬಲ್ಯಾಣ್ ಕೇರಳ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಗೋಮಾಂಸ ನಿಷೇಧಕ್ಕೆ ಮುಂದಡಿಯಿಟ್ಟಿದ್ದು ಕಾಂಗ್ರೆಸ್ ಪಕ್ಷವೇ ಎಂದು ಪಕ್ಷದ ಜನರಲ್ ಸೆಕ್ರೆಟರಿ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಬಲ್ಯಾಣ್ ಈ ರೀತಿ ಉತ್ತರಿಸಿದ್ದಾರೆ.
ಅದೇ ವೇಳೆ ಗೋಮಾಂಸ ನಿಷೇಧವನ್ನು ಇನ್ನಷ್ಟು ಶಕ್ತಗೊಳಿಸುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸಚಿವರು ಆದೇಶಿಸಿದ್ದಾರೆ. ಹೋರಿಯ ಮಾಂಸ ಎಂದು ಹಸುವಿನ ಮಾಂಸವನ್ನು ರಫ್ತುಗೊಳಿಸುತ್ತಿದ್ದಾರೆಯೇ? ಎಂದು  ಪರಿಶೀಲಿಸಲು ಕೃಷಿ ಸಚಿವಾಲಯ  ಭಕ್ಷ್ಯ ಉತ್ಪನ್ನಗಳ ರಫ್ತು ಇಲಾಖೆಯ ಸಭೆಯನ್ನೂ ಕರೆದಿದೆ.  
ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಗೋಮಾಂಸ ನಿಷೇಧ ಮಾಡಲಾಗಿದೆ. ಆದರೆ ಆಹಾರ ಕ್ರಮದ ಮೇಲೆ ಕೇಂದ್ರ ಸರ್ಕಾರ ಹೇರಿಕೆ ಸಲ್ಲ ಎಂದು ಕೆಲವು ರಾಜಕೀಯ ಪಕ್ಷಗಳು ಅಖಾಡಕ್ಕಿಳಿದಿದ್ದು, ಗೋಮಾಂಸ ನಿಷೇಧದ ವಿರುದ್ಧ ದನಿಯೆತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT