ದಲಿತ ದಂಪತಿಯನ್ನು ವಿವಸ್ತ್ರಗೊಳಿಸಿರುವುದು (ಕೃಪೆ :ಫೇಸ್ ಬುಕ್ ) 
ದೇಶ

ದಲಿತ ದಂಪತಿಯನ್ನು ಥಳಿಸಿ, ವಿವಸ್ತ್ರಗೊಳಿಸಿದ ಪೊಲೀಸರು!

ಗ್ರೇಟರ್ ನೋಯ್ಡಾದ ಗೌತಮ್ ಬುದ್ ನಗರದಲ್ಲಿ ಗುರುವಾರ ಪೊಲೀಸರು ದಲಿತ ದಂಪತಿಗಳನ್ನು ಥಳಿಸಿ ವಿವಸ್ತ್ರಗೊಳಿಸಿದ ಅಮಾನವೀಯ ಘಟನೆ...

ಉತ್ತರ ಪ್ರದೇಶ: ಗ್ರೇಟರ್ ನೋಯ್ಡಾದ ಗೌತಮ್ ಬುದ್ ನಗರದಲ್ಲಿ ಗುರುವಾರ ಪೊಲೀಸರು ದಲಿತ ದಂಪತಿಗಳನ್ನು ಥಳಿಸಿ ವಿವಸ್ತ್ರಗೊಳಿಸಿದ ಅಮಾನವೀಯ ಘಟನೆ ನಡೆದಿದೆ. 
ನಡೆದದ್ದೇನು?: ನೋಯ್ಡಾದ ಬಳಿ ಅಟ್ಟಾ ಎಂಬ ಪ್ರದೇಶದಲ್ಲಿ ಬುಧವಾರ ರಾತ್ರಿ ಮನೆಗೆ ಬರುತ್ತಿದ್ದ ವೇಳೆ ಸುನಿಲ್ ಗೌತಂ ಎಂಬಾತನನ್ನು ದರೋಡೆಕೋರರು ಲೂಟಿ ಮಾಡಿದ್ದರು. ದರೋಡೆ ನಡೆದಿರುವ ಬಗ್ಗೆ ಕೇಸು ದಾಖಲಿಸಲೆಂದು ಆತ ಗುರುವಾರ ಬೆಳಗ್ಗೆ ತನ್ನ ಮಗು ಮತ್ತು ಪತ್ನಿಯೊಂದಿಗೆ ಗ್ರೇಟರ್ ನೋಯ್ಡಾ ಪೊಲೀಸ್ ಠಾಣೆಗೆ ಹೋಗಿದ್ದಾನೆ .
ಆದರೆ ಕೇಸು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ. ಪೊಲೀಸರ ಈ ನಿರಾಕರಣೆಗೆ ಸುನಿಲ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಸುನಿಲ್‌ನ ಪ್ರತಿಭಟನೆಯಿಂದ ಕೆರಳಿದ ಪೊಲೀಸರು ಆ ದಂಪತಿಗಳಿಗೆ ಹಿಗ್ಗಾಮುಗ್ಗ ಥಳಿಸಿ ವಿವಸ್ತ್ರಗೊಳಿಸಿದ್ದಾರೆ.
ಪೊಲೀಸರು ದಂಪತಿಗೆ ಥಳಿಸಿ ವಿವಸ್ತ್ರಗೊಳಿಸುತ್ತಿದ್ದಂತೆ ಅಲ್ಲಿಗೆ ಜನರ ಗುಂಪು ದೌಡಾಯಿಸಿದೆ. ಅಲ್ಲಿಯೂ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಪೊಲೀಸರು ದಲಿತ ದಂಪತಿಗಳ ಮೇಲೆ ದೌರ್ಜನ್ಯವೆಸಗುತ್ತಿರುವ ವೀಡಿಯೋ ಈಗ ಸೋಷ್ಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಏತನ್ಮಧ್ಯೆ, ದಲಿತ ದಂಪತಿಗಳೇ ಈ ಘಟನೆಗೆ ಕಾರಣ, ಅವರು ಈ ವಿಷಯವನ್ನು ವೈಭವೀಕರಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT