ದೇಶ

ಪ್ರಶಸ್ತಿ ಹಿಂತಿರುಗಿಸಿದ ರೆಹಮಾನ್

Mainashree

ಮುಂಬೈ: ದಾದ್ರಿ ಘಟನೆ ಖಂಡಿಸಿ ಮಹಾರಾಷ್ಟ್ರ ಉರ್ದು ಸಾಹಿತ್ಯ ಅಕಾಡೆಮಿ ಪುರಸ್ಕೃತ ಉರ್ದು ಕಾದಂಬರಿಕಾರ ರೆಹಮಾನ್ ಅಬ್ಬಾಸ್ ತಮಗೆ ನೀಡಲಾಗಿರುವ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ. 

``ಘಟನೆ ಬಳಿಕ ಉರ್ದು ಲೇಖಕರ ಸಮುದಾಯಕ್ಕೆ ದುಃಖವಾಗಿದೆ. ಹೀಗಾಗಿ, ನನಗೆ ಸಿಕ್ಕಿರುವ ಅಕಾಡೆಮಿ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೆ. 
ಇನ್ನೂ ಹಲವು ಮಂದಿ ಲೇಖಕರು ಪ್ರಶಸ್ತಿ ಹಿಂತಿರುಗಿಸಲು ಯೋಚಿಸುತ್ತಿದ್ದಾರೆ'' ಎಂದು ಅವರು ಹೇಳಿದ್ದಾರೆ. ಅಬ್ಬಾಸ್ ಗೆ 2011ರಲ್ಲಿ ಪ್ರಶಸ್ತಿ ನೀಡಲಾಗಿತ್ತು.
SCROLL FOR NEXT