ರೋಹನ್ ನಾರಾಯಣ ಮೂರ್ತಿ (ಸಂಗ್ರಹ ಚಿತ್ರ) 
ದೇಶ

ಸಿಎಬಿಇ: ರೋಹನ್ ಹೆಸರು ಕೈ ಬಿಟ್ಟ ಕೇಂದ್ರ

ಕೇಂದ್ರ ಶಿಕ್ಷಣ ಸಲಹಾ ಮಂಡಳಿ(ಸಿಎಬಿಇ) ರಚನೆ ಅಂತಿಮವಾಗಿದ್ದು, ಇನ್ಫಿ ನಾರಾಯಣಮೂರ್ತಿ ಅವರ ಪುತ್ರ ರೋಹನ್ ನಾರಾಯಣ ಮೂರ್ತಿ ಅವರ ಹೆಸರನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಅವರ ಸ್ಥಾನಕ್ಕೆ ಮನೀಷ್ ಸಬರ್ವಾಲ್‍ರನ್ನು ನೇಮಿಸಿದೆ....

ನವದೆಹಲಿ: ಕೇಂದ್ರ ಶಿಕ್ಷಣ ಸಲಹಾ ಮಂಡಳಿ(ಸಿಎಬಿಇ) ರಚನೆ ಅಂತಿಮವಾಗಿದ್ದು, ಇನ್ಫಿ ನಾರಾಯಣಮೂರ್ತಿ ಅವರ ಪುತ್ರ ರೋಹನ್ ನಾರಾಯಣ ಮೂರ್ತಿ ಅವರ ಹೆಸರನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಅವರ ಸ್ಥಾನಕ್ಕೆ ಮನೀಷ್ ಸಬರ್ವಾಲ್‍ರನ್ನು ನೇಮಿಸಿದೆ.

ಮಿಕ್ಕಂತೆ ಎಲ್ಲ ಸದಸ್ಯರ ಹೆಸರುಗಳನ್ನು ಪ್ರಧಾನಮಂತ್ರಿ ಕಚೇರಿ ಅನುಮೋದಿಸಿದೆ. ಮಂಡಳಿ ಅಧ್ಯಕ್ಷೆಯಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಂತಿಮಗೊಳಿಸಿದ್ದ ಪಟ್ಟಿಯಲ್ಲಿ
ರೋಹನ್ ಅವರ ಹೆಸರಿತ್ತು. ಅವರ ಕೈಬಿಟ್ಟಿರುವುದಕ್ಕೆ ಕಾರಣ ತಿಳಿದುಬಂದಿಲ್ಲ.

ಮಿಕ್ಕಂತೆ ಐಐಟಿ ದೆಹಲಿಯ ಅಧ್ಯಕ್ಷ ವಿಜಯ್ ಭಟ್ಕರ್, ಗುಜರಾತ್ ಸೆಂಟ್ರಲ್ ವಿವಿಯ ಎಸ್‍ಎ ಬಾರಿ, ಡಿಎನ್ ಬೇಜ್ ಬೋರುವಾ, ಜವಾಹರ್ ಲಾಲ್ ಕೌರ್ ಹಾಗೂ ಶಿಕ್ಷಣ ತಜ್ಞ ಇಂದು ಮತಿ ರಾವ್ ಮಂಡಳಿಯಲ್ಲಿದ್ದಾರೆ. ಮಂಡಳಿಯ ಅವಧಿ 3 ವರ್ಷಕ್ಕೆ ಸೀಮಿತವಾಗಿರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Modi ma*****ch**: ರಾಹುಲ್ ಗಾಂಧಿ Voter Adhikar Yatra ವೇದಿಕೆಯಲ್ಲಿ ಅಶ್ಲೀಲ ನಿಂದನೆ, BJP ಕೆಂಡಾಮಂಡಲ!

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

SCROLL FOR NEXT