ದೆಹಲಿ-ಪಲ್ವಾಲ್ ಉಪನಗರದಲ್ಲಿ ಮಂಗಳವಾರ ಮೊಬೈಲ್ ನಲ್ಲಿ ಕಾಗದರಹಿತ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆಗೆ ಚಾಲನೆ ನೀಡಿದ ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು 
ದೇಶ

4 ಮಹಾನಗರಗಳಲ್ಲಿ ಕಾಗದರಹಿತ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ ಜಾರಿ

ಟಿಕೆಟ್ ಕೌಂಟರ್ ಗಳಲ್ಲಿ ಗಂಟೆಗಟ್ಟಲೆ ನಿಂತುಕೊಳ್ಳುವುದನ್ನು ತಪ್ಪಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ದೇಶದ ನಾಲ್ಕು...

ನವದೆಹಲಿ: ಟಿಕೆಟ್ ಕೌಂಟರ್ ಗಳಲ್ಲಿ ಗಂಟೆಗಟ್ಟಲೆ ನಿಂತುಕೊಳ್ಳುವುದನ್ನು ತಪ್ಪಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ದೇಶದ ನಾಲ್ಕು ಮಹಾನಗರಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ತಿಂಗಳ ಕಾಗದರಹಿತ ಸೀಸನ್ ಟಿಕೆಟ್ ಮತ್ತು ಪ್ಲಾಟ್ ಫಾರಂ ಟಿಕೆಟ್ ನ್ನು ಆರಂಭಿಸಲು ಮೊಬೈಲ್ ಅಪ್ಲಿಕೇಶನ್ ಒಂದನ್ನು ಪರಿಚಯಿಸುತ್ತಿದೆ.

ದೆಹಲಿ-ಪಲ್ವಾಲ್ ಉಪನಗರದಲ್ಲಿ ನಿನ್ನೆ ಕಾಗದರಹಿತ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು, ಈ ವ್ಯವಸ್ಥೆ ಆರಂಭದಲ್ಲಿ ಮುಂಬೈ, ದೆಹಲಿ, ಚೆನ್ನೈ ಮತ್ತು ಕೋಲ್ಕತ್ತಾಗಳಲ್ಲಿ ಇನ್ನು ಕೆಲವು ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದರು. ಅವರು ಈ ಸಂದರ್ಭದಲ್ಲಿ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕ್ಯಾಶ್-ಸ್ಮಾರ್ಟ್ ಕಾರ್ಡು ನಿರ್ವಹಣಾ ಟಿಕೆಟ್ ಮಾರಾಟ ಯಂತ್ರಕ್ಕೆ ಮತ್ತು ಸರಕು ಕಾರ್ಯಾಚರಣೆ ಉಸ್ತುವಾರಿ ಪರಿಚಾಲನೆಗೂ  ಚಾಲನೆ ನೀಡಿದರು.

ದಕ್ಷಿಣ ರೈಲ್ವೆಯ ಚೆನ್ನೈ-ಎಗ್ಮೋರ್ ಮತ್ತು ತಂಬರಂ ಉಪನಗರ ವಲಯಗಳಿಗೆ ಏಪ್ರಿಲ್ ನಲ್ಲಿ ಮತ್ತು ಪಶ್ಮಿಮ ರೈಲ್ವೆಯ ಚರ್ಚ್ ಗೇಟ್-ದಹನು ರಸ್ತೆ ಉಪನಗರ ವಲಯಗಳಲ್ಲಿ ಜುಲೈಯಲ್ಲಿ ಕಾಗದರಹಿತ ಟಿಕೆಟ್  ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಮುಂಬೈ ನಗರದಲ್ಲಿ ಪ್ರತಿ ತಿಂಗಳು ಸುಮಾರು 75 ಲಕ್ಷ ಜನ ಪ್ರಯಾಣಿಕರು ತಿಂಗಳ ಚಿಕೆಟ್ ಕೊಂಡುಕೊಳ್ಳುತ್ತಾರೆ. ಇವರಿಗೆ ಈ ಮೊಬೈಲ್ ಆಪ್ಲಿಕೇಶನ್ ವ್ಯವಸ್ಥೆ ಉತ್ತಮವಾಗಲಿದೆ ಎಂದರು.

ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಇದನ್ನು ಜಾರಿಗೆ ತರಲಾಗುತ್ತಿದೆ ಎಂದು ಸುರೇಶ್ ಪ್ರಭು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂದಿನಿಂದ ಚಳಿಗಾಲದ ಸಂಸತ್ ಅಧಿವೇಶನ: SIR ಕುರಿತ ಚರ್ಚೆಗೆ ವಿಪಕ್ಷಗಳಿಂದ ಪಟ್ಟು, ಸ್ಪಷ್ಟನೆ ನೀಡದ ಸರ್ಕಾರ

ಕುರ್ಚಿ ಕದನ: ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ನಡೆದ ಚರ್ಚೆ ಏನು?

' ನನ್ನ ರಾಜಕೀಯ ನೇರವಾದದ್ದು, ಯಾರ ಬೆನ್ನಿಗೂ ಚೂರಿ ಹಾಕಲ್ಲ, ನನ್ನ ಇತಿಮಿತಿ ತಿಳಿದಿದೆ- DKS ಸೈಲೆಂಟ್ ಗುಟ್ಟೇನು?

ಆತ್ಮ ನಿರ್ಭರತೆಯೆಡೆಗೆ ಮಹತ್ವದ ಮೈಲಿಗಲ್ಲು; ಕರ್ನಾಟಕ ಮೂಲದ ಸ್ಟಾರ್ಟ್ ಅಪ್ ನಿಂದ ಮೊದಲ ದೇಶೀಯ ರಕ್ಷಣಾ AI ತಂತ್ರಜ್ಞಾನ ಅಭಿವೃದ್ಧಿ!

ಶಿವಮೊಗ್ಗ: ಪಠ್ಯ ಪುಸ್ತಕಗಳಲ್ಲಿ 'ಭಗವದ್ಗೀತೆ' ಸೇರಿಸಲು ಕೇಂದ್ರಕ್ಕೆ ಎಚ್.ಡಿ. ಕುಮಾರಸ್ವಾಮಿ ಒತ್ತಾಯ!

SCROLL FOR NEXT