ದೇಶ

ತಿಮ್ಮಪ್ಪನ ಭಕ್ತರಿಗೆ ವಿಶೇಷ ರಕ್ಷಣೆ

Mainashree

ತಿರುಮಲ: ಶಬರಿಮಲೆ ಮಾದರಿಯಲ್ಲಿ ತಿರುಪತಿ ವೆಂಕಟೇಶ್ವರನ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗೆ ಸದ್ಯದಲ್ಲೇ ವಿಶೇಷ ಪೊಲೀಸಿಂಗ್ ಸೇವೆ ಹಾಗೂ ರಕ್ಷಣೆ ಸಿಗಲಿದೆ.

ತಿರುಮಲ ಬೆಟ್ಟದಲ್ಲಿ ತಿರುಪತಿ ನಗರ ಜಿಲ್ಲಾ ಪೊಲೀಸರು ಯಾತ್ರಾರ್ಥಿಗಳಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಭಕ್ತಾದಿಗಳನ್ನು ಆಕರ್ಷಿಸುವ ಕೇಂದ್ರಗಳಲ್ಲಿ ತಿರುಪತಿ ಕೂಡ ಒಂದು.

ಈಗಾಗಲೇ ಶಬರಿಮಲೆಯಲ್ಲಿ ಈ ರೀತಿಯ ಪೊಲೀಸಿಂಗ್ ಸೇವೆ (ಪಿಲಿಗ್ರಿಮೇಜ್ ಪೊಲೀಸಿಂಗ್) ಕೇರಳ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದು `ದ ಟೈಮ್ಸ್ ಆಫ್ ಇಂಡಿ ಯಾ'ಶುಕ್ರವಾರ ವರದಿ ಮಾಡಿದೆ. ಈ ಹೊಸ ವ್ಯವಸ್ಥೆಗಾಗಿ ತಿರುಪತಿ ಪೊಲೀಸರು ಶಬರಿಮಲೆ ಮಾದರಿಯನ್ನು ಅಧ್ಯಯನ ನಡೆಸುತ್ತಿದ್ದಾರೆ.

SCROLL FOR NEXT