ಲೈವ್ ಕಾರ್ಯಕ್ರಮದಲ್ಲಿ ದೇವಮಾನವ-ಮಹಿಳಾ ಜ್ಯೋತಿಷಿ ಬಡಿದಾಟ 
ದೇಶ

ರಾಧೆ ಮಾ ಗಾಗಿ ಟಿವಿಯ ಲೈವ್ ಶೋನಲ್ಲಿ ಬಡಿದಾಡಿಕೊಂಡ ಜ್ಯೋತಿಷಿಗಳು

ವಾದಿತ ದೇವ ಮಹಿಳೆ ರಾಧೆ ಮಾ ಬಗ್ಗೆ ನಡೆಯುತ್ತಿದ್ದ ಚರ್ಚೆಯಲ್ಲಿ ಇಬ್ಬರು ಜ್ಯೋತಿಷಿಗಳು ಲೈವ್ ಕಾರ್ಯಕ್ರಮದಲ್ಲೇ ಬಡಿದಾಡಿಕೊಂಡಿರುವ ಘಟನೆ ನಡೆದಿದೆ. ..

ನವದೆಹಲಿ: ವಿವಾದಿತ ದೇವ ಮಹಿಳೆ ರಾಧೆ ಮಾ ಬಗ್ಗೆ ನಡೆಯುತ್ತಿದ್ದ ಚರ್ಚೆಯಲ್ಲಿ ಇಬ್ಬರು ಜ್ಯೋತಿಷಿಗಳು ಲೈವ್ ಕಾರ್ಯಕ್ರಮದಲ್ಲೇ ಬಡಿದಾಡಿಕೊಂಡಿರುವ ಘಟನೆ ನಡೆದಿದೆ.  

ಆಂಗ್ಲ ವಾಹಿನಿಯೊಂದರಲ್ಲಿ  ವಿವಾದಿತ ದೇವಮಹಿಳೆ ರಾಧೆ ಮಾ ಬಗ್ಗೆ ಚರ್ಚೆ ನಡೆಯುವಾಗಲೇ ಇಬ್ಬರು ಪರಸ್ಪರ ಜಗಳವಾಡಿ ಹಲ್ಲೆ ಮಾಡಿಕೊಂಡ ಘಟನೆ ವರದಿಯಾಗಿದೆ.ಸ್ವಯಂ ಘೋಷಿತ ದೇವಮಾನವ ಹಾಗೂ ಮಹಿಳಾ ಜ್ಯೋತಿಷಿಯೊಬ್ಬರು ಹೊಡೆದಾಡಿಕೊಂಡಿದ್ದಾರೆ. ಸ್ವಯಂ ಘೋಷಿತ ದೇವಮಹಿಳೆ ರಾಧೇ ಮಾ ಕುರಿತಂತೆ ಹಿಂದೂ ಮಹಾಸಭಾದ ಓಂ ಹಾಗೂ ಮಹಿಳಾ ಜ್ಯೋತಿಷಿ ದೀಪಾ ಶರ್ಮ ನಡುವೆ ಚರ್ಚೆ ನಡೆಯುವಾಗ ಈ ರೀತಿಯಾಗಿದೆ.

ಆಂಗ್ಲ ಟಿವಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜ್ಯೋತಿಷಿ ದೀಪಾ ಶರ್ಮ ಅವರ ಬಗ್ಗೆ ಓಂ ಆಡಿದ ಮಾತು ಜಗಳಕ್ಕೆ ಕಾರಣವಾಗಿದೆ. ದೀಪಾ ಶರ್ಮ ಮರ್ಯಾದೆಯಿಂದ ಮಾತನಾಡು ಎಂದು ಓಂ ಅವರಿಗೆ ಹೊಡೆಯಲು ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡ ಓಂ, ಆಕೆಯ ಕಪಾಳಕ್ಕೆ ಬಾರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ

ಹೀಗೆ ಇಬ್ಬರೂ ಕೆಲಕಾಲ ತಾವು ಎಲ್ಲಿದ್ದೇವೆ ಎಂಬುದನ್ನು ಅರಿಯದೇ ಬಡಿದಾಡಿಕೊಂಡರು. ಬಳಿಕ ಅಲ್ಲಿದ್ದವರು ಇಬ್ಬರನ್ನೂ ಸಮಾಧಾನಗೊಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT