ಲೈವ್ ಕಾರ್ಯಕ್ರಮದಲ್ಲಿ ದೇವಮಾನವ-ಮಹಿಳಾ ಜ್ಯೋತಿಷಿ ಬಡಿದಾಟ 
ದೇಶ

ರಾಧೆ ಮಾ ಗಾಗಿ ಟಿವಿಯ ಲೈವ್ ಶೋನಲ್ಲಿ ಬಡಿದಾಡಿಕೊಂಡ ಜ್ಯೋತಿಷಿಗಳು

ವಾದಿತ ದೇವ ಮಹಿಳೆ ರಾಧೆ ಮಾ ಬಗ್ಗೆ ನಡೆಯುತ್ತಿದ್ದ ಚರ್ಚೆಯಲ್ಲಿ ಇಬ್ಬರು ಜ್ಯೋತಿಷಿಗಳು ಲೈವ್ ಕಾರ್ಯಕ್ರಮದಲ್ಲೇ ಬಡಿದಾಡಿಕೊಂಡಿರುವ ಘಟನೆ ನಡೆದಿದೆ. ..

ನವದೆಹಲಿ: ವಿವಾದಿತ ದೇವ ಮಹಿಳೆ ರಾಧೆ ಮಾ ಬಗ್ಗೆ ನಡೆಯುತ್ತಿದ್ದ ಚರ್ಚೆಯಲ್ಲಿ ಇಬ್ಬರು ಜ್ಯೋತಿಷಿಗಳು ಲೈವ್ ಕಾರ್ಯಕ್ರಮದಲ್ಲೇ ಬಡಿದಾಡಿಕೊಂಡಿರುವ ಘಟನೆ ನಡೆದಿದೆ.  

ಆಂಗ್ಲ ವಾಹಿನಿಯೊಂದರಲ್ಲಿ  ವಿವಾದಿತ ದೇವಮಹಿಳೆ ರಾಧೆ ಮಾ ಬಗ್ಗೆ ಚರ್ಚೆ ನಡೆಯುವಾಗಲೇ ಇಬ್ಬರು ಪರಸ್ಪರ ಜಗಳವಾಡಿ ಹಲ್ಲೆ ಮಾಡಿಕೊಂಡ ಘಟನೆ ವರದಿಯಾಗಿದೆ.ಸ್ವಯಂ ಘೋಷಿತ ದೇವಮಾನವ ಹಾಗೂ ಮಹಿಳಾ ಜ್ಯೋತಿಷಿಯೊಬ್ಬರು ಹೊಡೆದಾಡಿಕೊಂಡಿದ್ದಾರೆ. ಸ್ವಯಂ ಘೋಷಿತ ದೇವಮಹಿಳೆ ರಾಧೇ ಮಾ ಕುರಿತಂತೆ ಹಿಂದೂ ಮಹಾಸಭಾದ ಓಂ ಹಾಗೂ ಮಹಿಳಾ ಜ್ಯೋತಿಷಿ ದೀಪಾ ಶರ್ಮ ನಡುವೆ ಚರ್ಚೆ ನಡೆಯುವಾಗ ಈ ರೀತಿಯಾಗಿದೆ.

ಆಂಗ್ಲ ಟಿವಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜ್ಯೋತಿಷಿ ದೀಪಾ ಶರ್ಮ ಅವರ ಬಗ್ಗೆ ಓಂ ಆಡಿದ ಮಾತು ಜಗಳಕ್ಕೆ ಕಾರಣವಾಗಿದೆ. ದೀಪಾ ಶರ್ಮ ಮರ್ಯಾದೆಯಿಂದ ಮಾತನಾಡು ಎಂದು ಓಂ ಅವರಿಗೆ ಹೊಡೆಯಲು ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡ ಓಂ, ಆಕೆಯ ಕಪಾಳಕ್ಕೆ ಬಾರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ

ಹೀಗೆ ಇಬ್ಬರೂ ಕೆಲಕಾಲ ತಾವು ಎಲ್ಲಿದ್ದೇವೆ ಎಂಬುದನ್ನು ಅರಿಯದೇ ಬಡಿದಾಡಿಕೊಂಡರು. ಬಳಿಕ ಅಲ್ಲಿದ್ದವರು ಇಬ್ಬರನ್ನೂ ಸಮಾಧಾನಗೊಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT