ಸಾಂದರ್ಭಿಕ ಚಿತ್ರ 
ದೇಶ

ಇಸಿಎಸ್ ಸೇರಲು ಬಯಸಿದ್ದ ಮಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ ಮಾಜಿ ಸೈನಿಕ

ವಿಲಕ್ಷಣ ಘಟನೆಯೊಂದರಲ್ಲಿ, ಭಾರತೀಯ ಸೇನೆಯ ಮಾಜಿ ಯೋಧರೊಬ್ಬರ ಮಗಳು ಇಸಿಎಸ್ ಉಗ್ರಗಾಮಿ ಸಂಘಟನೆಗೆ ಸೇರಲು...

ನವದೆಹಲಿ: ವಿಲಕ್ಷಣ ಘಟನೆಯೊಂದರಲ್ಲಿ, ಭಾರತೀಯ ಸೇನೆಯ ಮಾಜಿ ಯೋಧರೊಬ್ಬರ ಮಗಳು ಇಸಿಎಸ್ ಉಗ್ರಗಾಮಿ ಸಂಘಟನೆಗೆ ಸೇರಲು ಬಯಸಿದ್ದಳು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದ ಮಾಜಿ ಸೇನಾಧಿಕಾರಿಯ ಮಗಳು ಸಿರಿಯಾಕ್ಕೆ ತೆರಳಿ ಅಲ್ಲಿ ಯುದ್ಧದಲ್ಲಿ ಭಾಗವಹಿಸುವ ಯೋಜನೆ ಹಾಕಿಕೊಂಡಿದ್ದಳು. ಇದು ಅವಳ ತಂದೆಗೆ ವಿಷಯ ಗೊತ್ತಾಗಿ ಕೂಡಲೇ ರಾಷ್ಟ್ರೀಯ ತನಿಖಾ ಸಂಸ್ಥೆಗೆ ತಿಳಿಸಿದರು. ಇದೀಗ ಭದ್ರತಾ ಸಂಸ್ಥೆಯ ಅಧಿಕಾರಿಗಳು ವಿಷಯವನ್ನು ಕೈಗೆತ್ತಿಕೊಂಡಿದ್ದು, ಯುವತಿಯ ಮನಪರಿವರ್ತನೆಗೆ ಸಲಹೆ ನೀಡಲು ಪ್ರಯತ್ನಿಸುತ್ತಿದ್ದಾರೆ.

ಹಿಂದೂ ಧರ್ಮಕ್ಕೆ ಸೇರಿದವಳಾದ ಈ ಯುವತಿ ಪದವಿ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಗೆ ತೆರಳಿದ್ದಳು. ಅಲ್ಲಿ ಇಸಿಎಸ್ ಉಗ್ರಗಾಮಿಗಳ ಸಂಪರ್ಕವಾಗಿ ಸಂಪೂರ್ಣ ಬದಲಾಗಿಬಿಟ್ಟಳು. ಸಾಧು ಸ್ವಭಾವ ಹೋಗಿ ಮೂಲಭೂತವಾದ ಆಕೆಯ ಮನಸ್ಸಿನಲ್ಲಿ ಬೇರುಬಿಟ್ಟಿತು.ಆಸ್ಟ್ರೇಲಿಯಾದಲ್ಲಿ ಮೂಲಭೂತವಾದ ಒಂದು ಬೆಳೆಯುತ್ತಿರುವ ಸಮಸ್ಯೆ.
ಸ್ವದೇಶಕ್ಕೆ ಬಂದಿದ್ದ ಯುವತಿಯ ಚಲನವಲನಗಳನ್ನು ನೋಡಿ ಸಂಶಯಪಟ್ಟ ತಂದೆ ಭದ್ರತಾಧಿಕಾರಿಗಳಿಗೆ ತಿಳಿಸಿದ್ದಾರೆ.ತನಿಖೆ ನಡೆಸಿದಾಗ ಯುವತಿ ಇಸಿಎಸ್ ಗೆ ಸದಸ್ಯರನ್ನು ನೇಮಕ ಮಾಡುವವರೊಂದಿಗೆ ಸಂಪರ್ಕ ಹೊಂದಿದ್ದಳು ಎಂದು ತಿಳಿದು ಬಂದಿದೆ. ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡು ಆಸ್ಟ್ರೇಲಿಯಾ ಮೂಲಕ ಸಿರಿಯಾಕ್ಕೆ ಪ್ರಯಾಣ ಬೆಳೆಸಲು ಯೋಜನೆ ರೂಪಿಸಿದ್ದಳು ಎಂಬುದು ತಿಳಿದುಬಂದಿದೆ.

ಇಸಿಎಸ್ ಉಗ್ರಗಾಮಿ ಸಂಘಟನೆಗೆ ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಮೂಲಕ ಭಾರತೀಯ ಯುವಜನತೆಯನ್ನು ನೇಮಕಾತಿ ಮಾಡಿಕೊಳ್ಳುವ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದೆ, ಇಸಿಎಸ್ ನೇಮಕಾತಿ ಸದಸ್ಯೆ ಎಂದು ಆರೋಪಿಸಿ ಭಾರತೀಯ ಮಹಿಳೆಯೊಬ್ಬಳನ್ನು ಅರಬ್ ರಾಷ್ಟ್ರದಿಂದ ಗಡೀಪಾರು ಮಾಡಲಾಗಿತ್ತು. ಕಳೆದ ವಾರ ನಾಲ್ವರು ಭಾರತೀಯರು ಗಲ್ಫ್ ನಿಂದ ಗಡೀಪಾರಾಗಿ ಬಂದಿದ್ದರು.

ಇಂತಹ ಘಟನೆ ಮರುಕಳಿಸುತ್ತಿರುವುದು ನೋಡಿದರೆ ಯುವಜನತೆಯನ್ನು ಉಗ್ರವಾದಿಗಳನ್ನಾಗಿ ಬದಲಾಯಿಸುತ್ತಿರುವ ಸಮಸ್ಯೆ ಭಾರತ ದೇಶದಲ್ಲಿ ಆಳವಾಗಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಭದ್ರತಾ ಸಂಸ್ಥೆ ಪರಿಗಣಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT