ದೇಶ

ವ್ರತಭಂಗ ಕಾರಣ: ವೈದ್ಯಕೀಯ ಪರೀಕ್ಷೆಗೆ ರಾಘವೇಶ್ವರ ಶ್ರೀ ಗೈರು

Vishwanath S
ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇಂದು ವೈದ್ಯಕೀಯ ಪರೀಕ್ಷೆಗೆ ಹಾಜರಾಗದಿರಲು ರಾಘವೇಶ್ವರ ಶ್ರೀ ನಿರ್ಧಾರಿಸಿದ್ದಾರೆ ಎಂದು ಬೆಂಗಳೂರಲ್ಲಿ ಮಠದ ಕಾರ್ಯದರ್ಶಿ ಡಾ.ಕೃಷ್ಣ ಪ್ರಸಾದ್ ಹೇಳಿಕೆ ನೀಡಿದ್ದಾರೆ.
ಶ್ರೀಗಳು ಚಾತುರ್ಮಾಸ ವ್ರತದಲ್ಲಿದ್ದು, ವೈದ್ಯಕೀಯ ಪರೀಕ್ಷೆಗೆ ಬಂದರೆ ಶ್ರೀಗಳ ವ್ರತಭಂಗವಾಗುತ್ತೆ ಆ ಕಾರಣಕ್ಕೆ ಮೆಡಿಕಲ್ ಟೆಸ್ಟ್​ಗೆ ಶ್ರೀಗಳು ಬರುವುದಿಲ್ಲ ಎಂದು ರಾಘವೇಶ್ವರ ಸ್ವಾಮೀಜಿ ಪರ ಮಠಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. 
ಚಾತುರ್ಮಾಸ ವ್ರತದಲ್ಲಿ ಶ್ರೀಗಳು 60 ದಿನಗಳ ಕಾಲ ಪೂಜೆ ಪುನಸ್ಕಾರ ಮಾಡಿ ದೈಹಿಕವಾಗಿ ಬಳಲಿದ್ದಾರೆ ಈ ಹಿನ್ನೆಲೆ ರಾಘವೇಶ್ವರ ಶ್ರೀಗಳು ವಿಶ್ರಾಂತಿ ಪಡೆಯಲಿದ್ದಾರೆ ಎಂದಿದ್ದಾರೆ. 
ಈಗಾಗಲೇ ನಾವು ಕಾನೂನು ಸಲಹೆ ಪಡೆದುಕೊಂಡಿದ್ದೇವೆ ಎಂದಿರುವ ಅವರು, ಮುಂದಿನ ದಿನಗಳಲ್ಲಿ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ ಪಕ್ಷದಲ್ಲಿ ಮತ್ತೆ ಕಾನೂನು ಸಲಹೆ ಪಡೆದು ಪರೀಕ್ಷೆಗೆ ಹಾಜರಾಗುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ.
SCROLL FOR NEXT