ತಾಜ್‌ಮಹಲ್‌ 
ದೇಶ

ಅಂದಗೆಟ್ಟ ತಾಜ್ ಮಹಲ್‌ನ್ನು ಶುಭ್ರಗೊಳಿಸಲು 9 ವರ್ಷಗಳೇ ಬೇಕು!

ಚಂದ್ರಕಾಂತ ಶಿಲೆಯಿಂದ ನಿರ್ಮಿಸಲ್ಪಟ್ಟ ತಾಜ್‌ಮಹಲ್‌ನ ಬಣ್ಣ ವಾಯು ಮಾಲಿನ್ಯದಿಂದಾಗಿ ಮಾಸಿ ಹೋಗಿದೆ. ಬಿಳಿ ಬಣ್ಣದಿಂದ ಹೊಳೆಯುತ್ತಿದ್ದ ತಾಜ್ ...

ನವದೆಹಲಿ: ಚಂದ್ರಕಾಂತ ಶಿಲೆಯಿಂದ ನಿರ್ಮಿಸಲ್ಪಟ್ಟ ತಾಜ್‌ಮಹಲ್‌ನ ಬಣ್ಣ ವಾಯು ಮಾಲಿನ್ಯದಿಂದಾಗಿ ಮಾಸಿ ಹೋಗಿದೆ. ಬಿಳಿ ಬಣ್ಣದಿಂದ ಹೊಳೆಯುತ್ತಿದ್ದ ತಾಜ್ ಮಹಲ್ ಈಗ ಅಂದಗೆಟ್ಟು ನಸು ಹಳದಿ ಬಣ್ಣಕ್ಕೆ ತಿರುಗಿದೆ. ಈ ಹಳದಿ ಬಣ್ಣದ ಕಲೆಗಳನ್ನು ತೆಗೆಯಲು ಕನಿಷ್ಠ 9 ವರ್ಷಗಳೇ ಬೇಕು ಅಂತಿದ್ದಾರೆ ಪುರಾತತ್ವ ಶಾಸ್ತ್ರ ಇಲಾಖೆಯ ತಜ್ಞರು.

ಆಗ್ರಾದಲ್ಲಿ 17 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಈ ಐತಿಹಾಸಿಕ ಸ್ಮಾರಕವು ಅಲ್ಲಿರುವ ಕಲ್ಲಿದ್ದಲು ಕಾರ್ಖಾನೆಗಳಿಂದ ಹೊರ ಸೂಸುವ ಮಲಿನ ಗಾಳಿಯಿಂದಾಗಿ ಅಂದ ಕಳೆದುಕೊಂಡಿದೆ.

ಮಡ್ ಪ್ಯಾಕ್ ಬಳಸಿ ತಾಜ್‌ನ್ನು ಶುಭ್ರಗೊಳಿಸುವ ಯೋಜನೆಯನ್ನು ಕಳೆದ ವರ್ಷವೇ ಘೋಷಿಸಲಾಗಿತ್ತು. ಆದರೆ ಇನ್ನೂ ಈ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ.

ಭಾರತದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ತಾಜ್ ಮಹಲ್ ನ್ನು  1631ರಲ್ಲಿ ಮೊಘಲ್ ಚಕ್ರವರ್ತಿ ಶಾಹ್‌ಜಹಾನ್ ತನ್ನ ಪ್ರೀತಿಯ ಮಡದಿ ಮುಮ್ತಾಜ್ ಮಹಲ್‌ಳ ನೆನಪಿಗೋಸ್ಕರ ನಿರ್ಮಿಸಿದ್ದನು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT