ಯಾತ್ರಾ ಡಾಟ್ ಕಾಂ ಜಾಹೀರಾತು 
ದೇಶ

ಸಾಮಾಜಿಕ ತಾಣದಲ್ಲಿ ಯಾತ್ರಾ ಡಾಟ್ ಕಾಂನ ಹೊಸ 'ಆಜಾದಿ' ಜಾಹೀರಾತು ವೈರಲ್

ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ವಿವಾದಗಳು ಭುಗಿಲೆದ್ದಿದ್ದ ವೇಳೆ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ನಮಗೆ ಸ್ವಾತಂತ್ರ್ಯ ಬೇಕು...

ನವದೆಹಲಿ: ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ವಿವಾದಗಳು ಭುಗಿಲೆದ್ದಿದ್ದ ವೇಳೆ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ನಮಗೆ ಸ್ವಾತಂತ್ರ್ಯ ಬೇಕು (ಹಮೇ ಆಜಾದಿ ಚಾಹಿಯೇ) ಎಂದು ಘೋಷಣೆ ಕೂಗಿ ಮಾಡಿದ ಭಾಷಣ ಎಲ್ಲೆಡೆ ಸಂಚಲನ ಸೃಷ್ಟಿಸಿತ್ತು.
ಇದೀಗ ಆ ಆಜಾದಿ ಮಂತ್ರವನ್ನೇ ಬಳಸಿ ಟ್ರಾವೆಲ್ ಪೋರ್ಟಲ್ ಯಾತ್ರಾ ಡಾಟ್ ಕಾಂ ಹೊಸತೊಂದು ಜಾಹೀರಾತು ನಿರ್ಮಿಸಿದೆ.
ಏರ್‌ಪೋರ್ಟ್‌ಗೆ ಬಂದ ಕನಯ್ಯಾ ಕುಮಾರ್‌ನ್ನೇ ಹೋಲುವ ಯುವಕನೊಬ್ಬ ತನಗೆ ವಿಂಡೋ ಸೀಟು ಬೇಕು ಎಂದು ಕೇಳಿದಾಗ ಅದು ಇಲ್ಲ ಎಂಬ ಉತ್ತರ ಸಿಗುತ್ತದೆ. ಅಷ್ಟಕ್ಕೆ ಸಿಟ್ಟಿಗೆದ್ದ ಯುವಕ ಭಾಯಿಯೋ ಬೆಹನೋ ಎಂದು ಹೇಳಿ ತನ್ನ ಭಾಷಣ ಶುರು ಮಾಡುತ್ತಾನೆ. ನಮಗೆ ನಮ್ಮ ಸೀಟು ಆಯ್ಕೆ ಮಾಡುವ ಸ್ವಾತಂತ್ರ್ಯ ಬೇಕು, ವಿಂಡೋ ಸೀಟು ಬೇಕೆಂದು ಕೇಳುವ ಸ್ವಾತಂತ್ರ್ಯ ಬೇಕು ಎಂದು ಹೇಳುವಾಗ, ಅಲ್ಲಿರುವ ಪ್ರಯಾಣಿಕರೆಲ್ಲರೂ ನಮಗೂ ಆಜಾದಿ ಬೇಕು ಎಂದು ಘೋಷಣೆ ಕೂಗುವ ದೃಶ್ಯಗಳು ಜಾಹೀರಾತಿನಲ್ಲಿದೆ.
ಕನಯ್ಯಾ ಅವರ ಭಾಷಣದ ಧಾಟಿಯಲ್ಲಿಯೇ ಈ ಜಾಹೀರಾತಿನಲ್ಲಿರುವ ಯುವಕ ಭಾಷಣ ಮಾಡುತ್ತಿದ್ದು, ಈ ಜಾಹೀರಾತು ಸಾಮಾಜಿಕ ತಾಣದಲ್ಲೀಗ ವೈರಲ್ ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

SCROLL FOR NEXT