ರಾಜ್ ಠಾಕ್ರೆ ಮತ್ತು ಒವೈಸಿ (ಸಂಗ್ರಹ ಚಿತ್ರ) 
ದೇಶ

ಮಹಾರಾಷ್ಟ್ರಕ್ಕೆ ಬಾ ನಿನ್ನ ಕುತ್ತಿಗೆ ಮೇಲೆ ಕತ್ತಿ ಇಡುತ್ತೇನೆ: ರಾಜ್ ಠಾಕ್ರೆ

ಒವೈಸಿ ಮಹಾರಾಷ್ಟ್ರಕ್ಕೆ ಬಂದರೆ ಆತನ ಕುತ್ತಿಗೆ ಮೇಲೆ ನಾನು ಕತ್ತಿ ಇಡುತ್ತೇನೆ ಎಂದು ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ...

ಮುಂಬೈ: ಭಾರತ ಮಾತಾ ಕೀ ಜೈ ವಿವಾದ ತಾರಕಕ್ಕೇರಿದ್ದು, ವಿವಾದಾತ್ಮಕ ಹೇಳಿಕೆ ನೀಡಿದ್ದ ಒವೈಸಿ ಮಹಾರಾಷ್ಟ್ರಕ್ಕೆ ಬಂದರೆ ಆತನ ಕುತ್ತಿಗೆ ಮೇಲೆ ನಾನು ಕತ್ತಿ ಇಡುತ್ತೇನೆ  ಎಂದು ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ ಠಾಕ್ರೆ ಬಿಜೆಪಿ, ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಶಿವಸೇನೆ ಮತ್ತು ಬಿಜೆಪಿ  ಪಕ್ಷಗಳು ಅಧಿಕಾರದ ಕಿತ್ತಾಟದಲ್ಲಿ ತೊಡಗಿದ್ದು, ರಾಜ್ಯ ಏಳ್ಗೆಯನ್ನೇ ಮರೆತುಬಿಟ್ಟಿವೆ ಎಂದು ಕಿಡಿಕಾರಿದರು. ಇದೇ ವೇಳೆ ಒವೈಸಿ ಸಹೋದರರ ವಿರುದ್ಧ ಕಿಡಿಕಾರಿದ ರಾಜ್ ಠಾಕ್ರೆ  ಒವೈಸಿ ಸಹೋದರರು ಬಿಜೆಪಿಯಿಂದ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಅಂತೆಯೇ ಭಾರತ ಮಾತಾ ಕೀ ಜೈ ವಿವಾದ ಸಂಬಂಧ ಮಾತನಾಡಿದ ರಾಜ್ ಠಾಕ್ರೆ,  ಒವೈಸಿ ಮಹಾರಾಷ್ಟ್ರಕ್ಕೆ ಬಂದರೆ ಆತನ ಕುತ್ತಿಗೆ ಮೇಲೆ ನಾನು ಕತ್ತಿ ಇಡುತ್ತೇನೆ ಎಂದು ಹೇಳಿದರು.

ಈ ಹಿಂದೆ ಇದೇ ವಿವಾದ ಸಂಬಂಧ ಹೇಳಿಕೆ ನೀಡಿದ್ದ ಎಂಐಎಂ ಸಂಸ್ಥಾಪಕ ಅಸಾದುದ್ದೀನ್ ಒವೈಸಿ, ನನ್ನ ಕುತ್ತಿಗೆ ಮೇಲೆ ಕತ್ತಿ ಇಟ್ಟರೂ ನಾನು ಭಾರತ ಮಾತಾ ಕಿ ಜೈ  ಎನ್ನಲಾರೆ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಒವೈಸಿ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT