ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಮ್ ಮತ್ತು ಯುವರಾಣಿ ಕೇಟ್ ಮಿಡ್ಲ್ ಟನ್ 
ದೇಶ

ಅಸ್ಸಾಂಗೆ ಪ್ರಿನ್ಸ್ ವಿಲಿಯಮ್ಸ್ : ಮೆನು ಪಟ್ಟಿಯಲ್ಲಿ ಹಾಟ್ ಚಿಲ್ಲಿ

ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಮ್ ಮತ್ತು ಯುವರಾಣಿ ಕೇಟ್ ಮಿಡ್ಲ್ ಟನ್ ನಾಳೆಯಿಂದ ಎರಡು ದಿನಗಳ ಕಾಲ ಅಸ್ಸಾಂ...

ಡಿಸ್ಪುರ್: ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಮ್ ಮತ್ತು ಯುವರಾಣಿ ಕೇಟ್ ಮಿಡ್ಲ್ ಟನ್ ನಾಳೆಯಿಂದ ಎರಡು ದಿನಗಳ ಕಾಲ ಅಸ್ಸಾಂ ರಾಜ್ಯಕ್ಕೆ ಭೇಟಿ ನೀಡಲಿದ್ದು, ಅವರನ್ನು ಸ್ವಾಗತಿಸಲು ರಾಜ್ಯ ಸಜ್ಜಾಗಿದೆ.

ರಾಜಕುಮಾರ ಮತ್ತು ರಾಣಿಯ ಭೇಟಿಯನ್ನು ಸ್ಮರಣೀಯ ಕ್ಷಣವನ್ನಾಗಿಸಲು ಮತ್ತು ಅವರು ಹಿಂತಿರುಗಿ ಹೋಗುವಾಗ ಅಸ್ಸಾಂನಲ್ಲಿ ಕಳೆದ ಉತ್ತಮ ನೆನಪುಗಳನ್ನು ಕೊಂಡೊಯ್ಯುವಂತೆ ನೋಡಿಕೊಳ್ಳಲು ಎಲ್ಲಾ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ತರುಣ್ ಗೋಗೊಯ್ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್ ಟನ್ ಅವರು ವಿಶ್ವ ಪಾರಂಪರಿಕ ಖಡ್ಗಮೃಗ ತಾಣವಾದ ಕಜ್ಹಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲಿದ್ದಾರೆ. ನಂತರ ಕಜ್ಹಿರಂಗದ ರೆಸಾರ್ಟ್ ವೊಂದರಲ್ಲಿ ಉಳಿದುಕೊಳ್ಳಲಿದ್ದು, ಅಲ್ಲಿ ಅವರನ್ನು ಅಸ್ಸಾಂನ ಸಾಂಪ್ರದಾಯಿಕ ಬಿಹು ಮತ್ತು ಜುಮುರ್ ನೃತ್ಯದ ಮೂಲಕ ಬರಮಾಡಿಕೊಳ್ಳಲಾಗುತ್ತಿದೆ. ಹೊಟೇಲ್ ನ ನೌಕರರು ರಾಜಕುಮಾರ ಮತ್ತು ರಾಣಿ ದಂಪತಿಗೆ ಆತಿಥ್ಯ ನೀಡಲು ಸಾಂಪ್ರದಾಯಿಕ ಆಹಾರಗಳ ಮೆನುವನ್ನು ಸಿದ್ಧಪಡಿಸಿದ್ದಾರೆ. ಖಾದ್ಯದ ಜೊತೆ ವಿಶ್ವದ ಖಾರವಾದ ಮೆಣಸು ಜೊಲಾಕಿಯಾವನ್ನು ಉಣಬಡಿಸಲಿದ್ದಾರೆ.ಅವರ ಬರುವಿಕೆಗಾಗಿ ಕಾಯುತ್ತಿದ್ದೇವೆ ಎಂದು ಹೊಟೇಲ್ ನ ಮುಖ್ಯ ವ್ಯವಸ್ಥಾಪಕ ಪ್ರಶಾಂತ್ ಕುಮಾರ್ ಶರ್ಮ ಹೇಳುತ್ತಾರೆ.

ಪ್ರಿನ್ಸ್ ವಿಲಿಯಮ್ ನಂತರ ಮಾಧ್ಯಮದವರ ಜೊತೆ ಸಂವಾದ ನಡೆಸಲಿದ್ದಾರೆ. ಅವರ ಜೊತೆ ಬ್ರಿಟನ್ ಪೊಲೀಸರು, ಪ್ರಚಾರಾಧಿಕಾರಿ, ಇಬ್ಬರು ಪತ್ರಕರ್ತರು ಇರಲಿದ್ದಾರೆ. ಉದ್ಯಾನವನ, ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಸಂಘರ್ಷ, ಪ್ರಾಣಿಗಳನ್ನು ಬೇಟೆಗಾರರಿಂದ ಹೇಗೆ ರಕ್ಷಿಸಬಹುದು ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಬ್ರಿಟನ್ ರಾಜಕುಮಾರ ಮತ್ತು ರಾಜಕುಮಾರಿ ಭೇಟಿ ನೀಡುವ ಸುದ್ದಿ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲ ಗ್ರಾಮಗಳ ಜನರಿಗೆ ಕಾಡ್ಗಿಚ್ಚಿನಂತೆ ಹಬ್ಬಿದ್ದು, ನೋಡಲು ಕಾತರರಿಂದ ಪುಳಕಿತರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT