ಮೋದಿಯವರಿಂದ ಧನ್ಯವಾದ ಪತ್ರ ಪಡೆದ ಬಾಲಕಿ ಅದಿತಿ (ಫೋಟೋ ಕೃಪೆ: ಎಎನ್ಐ) 
ದೇಶ

10 ವರ್ಷದ ಬಾಲೆಗೆ ಧನ್ಯವಾದ ಹೇಳಿ ಪತ್ರ ಬರೆದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಕಾನ್ಪುರ ನಗರದ 10 ವರ್ಷದ ಬಾಲಕಿಯೊಬ್ಬಳಿಗೆ ಧನ್ಯವಾದ ಹೇಳಿ ಪತ್ರವೊಂದನ್ನು ಬರೆದಿದ್ದಾರೆ...

ಕಾನ್ಪುರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಕಾನ್ಪುರ ನಗರದ 10 ವರ್ಷದ ಬಾಲಕಿಯೊಬ್ಬಳಿಗೆ ಧನ್ಯವಾದ ಹೇಳಿ ಪತ್ರವೊಂದನ್ನು ಬರೆದಿದ್ದಾರೆ.

10 ವರ್ಷದ ಅದಿತಿ ಮೋದಿಯವರಿಂದ ಧನ್ಯವಾದ ಪತ್ರ ಪಡೆದ ಬಾಲಕಿಯಾಗಿದ್ದು, ಈಕೆ ಹಲವು ದಿನಗಳಿಂದಲೂ ಪ್ರಧಾನಿ ಮೋದಿಯವರು ದೇಶದ ಜನತೆಗೆ ಹೊರ ತರುವ ಯೋಜನೆಗಳ ಕುರಿತಂತೆ ಪ್ರಶಂಸೆ ಹಾಗೂ ಸಲಹೆಗಳನ್ನು ನೀಡಿ ಪತ್ರಗಳನ್ನು ಬರೆದಿದ್ದಾಳೆ. ಇದರಂತೆ ಬಾಲಕಿಯ ಪ್ರತಿಕ್ರಿಯೆ ನೋಡಿ ಮೋದಿಯವರು ಬಾಲಕಿಗೆ ಧನ್ಯವಾದ ಪತ್ರವೊಂದನ್ನು ಬರೆದಿದ್ದಾರೆ.

ಇನ್ನು ಪತ್ರದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅದಿತಿ, ಮೋದಿಯವರು ಪ್ರತಿಕ್ರಿಯೆ ನೀಡುತ್ತಾರೆಂದು ನನಗೆ ನಂಬಿಕೆಯಿತ್ತು. ನನ್ನ ನಂಬಿಕೆಯಂತೆಯೇ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಮೋದಿಯವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಜಾರಿಗೆ ತರುವ ಯೋಜನೆಗಳ ಕುರಿತಂತೆ ಪತ್ರಗಳನ್ನು ಬರೆಯುತ್ತಿದ್ದೆ. ಪತ್ರದಲ್ಲಿ ಯೋಜನೆ ಜಾರಿಗೆ ತಂದಿದ್ದಕ್ಕೆ ಧನ್ಯವಾದ ಹಾಗೂ ಕೆಲವು ಸಲಹೆಗಳನ್ನು ತಿಳಿಸುತ್ತಿದ್ದೆ. ಇದರಂತೆ ಏಪ್ರಿಲ್. 11 ರಂದು ಮೋದಿಯವರಿಂದ ನನಗೆ ಧನ್ಯವಾದ ಪತ್ರ ಬಂದಿತು, ಮೋದಿಯವರು ಇದೇ ರೀತಿಯಲ್ಲಿ ತಮ್ಮ ಕಾರ್ಯವನ್ನು ಮುಂದುವರೆಸಬೇಕೆಂದು ಕೇಳಿಕೊಳ್ಳುತ್ತೇನೆಂದು ಹೇಳಿದ್ದಾಳೆ.

ಇನ್ನು ಅದಿತಿ ಬರವಣಿಗೆ ಕೌಶಲ್ಯ ಕುರಿತಂತೆ ಸ್ವತಃ ಆಕೆಯ ತಾಯಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದು, ಮಗಳಿಗೆ ಸರ್ಕಾರ ಕೆಲಸ ಹಾಗೂ ಯೋಜನೆಯ ಕುರಿತಂತೆ ಇಷ್ಟೆಲ್ಲಾ ತಿಳುವಳಿಕೆಯಿದೆ ಎಂಬುದು ತಿಳಿದಿರಲಿಲ್ಲ. ಮೋದಿಯವರು ಪ್ರತಿಕ್ರಿಯೆ ನೀಡುತ್ತಾರೆಂದು ನಾವು ನಿರೀಕ್ಷಿಸಿರಲಿಲ್ಲ. ಸರ್ಕಾರದ ಯೋಜನೆ ಕುರಿತಂತೆ ಪತ್ರದಲ್ಲಿ ತುಂಬಾ ಚೆನ್ನಾಗಿ ಬರೆದಿದ್ದಾಳೆಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

19 ವರ್ಷಗಳ ಹಳೆಯ ದಾಖಲೆ ಉಡೀಸ್: ಅಭಿಷೇಕ್, ಪಾಂಡ್ಯ ಅಬ್ಬರ; ಜಿಂಬಾಬ್ವೆಗೆ 257 ರನ್‌ ಬೃಹತ್ ಮೊತ್ತದ ಗುರಿ ನೀಡಿದ ಭಾರತ!

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT