ಸಾವನ್ನಪ್ಪಿದ ಹೈದರಾಬಾದ್ ಮೂಲದ ಮಿರ್ ಬಕಾರ್ ರಿಜ್ವಿ 
ದೇಶ

ಹೈದರಾಬಾದ್ ಮೂಲದ ವ್ಯಕ್ತಿ ಲಂಡನ್'ನಲ್ಲಿ ಅನುಮಾನಾಸ್ಪದ ಸಾವು

ಹೈದರಾಬಾದ್ ಮೂಲದ ಭಾರತೀಯ ವ್ಯಕ್ತಿ ಲಂಡನ್ ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ...

ಹೈದರಾಬಾದ್ (ತೆಲಂಗಾಣ); ಹೈದರಾಬಾದ್ ಮೂಲದ ಭಾರತೀಯ ವ್ಯಕ್ತಿ ಲಂಡನ್ ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಮಿರ್ ಬಕಾರ್ ರಿಜ್ವಿ (34) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಭಾರತೀಯ ವ್ಯಕ್ತಿಯಾಗಿದ್ದು, ಶಿಕ್ಷಣ ವೀಸಾ ಮೂಲದ 2009ರಲ್ಲಿ ಲಂಡನ್ ಗೆ ಹೋಗಿದ್ದ ಎಂದು ರಿಜ್ವಿ ಸಹೋದರ ಹೇಳಿಕೊಂಡಿದ್ದಾರೆ.

ಮೂರು ವರ್ಷದ ಹಿಂದೆ ರಿಜ್ವಿ ಲಂಡನ್ ನಲ್ಲಿ ಅಪಘಾತಕ್ಕೀಡಾಗಿದ್ದ. ಚಿಕಿತ್ಸೆ ಪಡೆದ ಬಳಿಕ 2014ರಲ್ಲಿ 45 ದಿನಗಳ ಕಾಲ ಭಾರತಕ್ಕೆ ಬಂದಿದ್ದ. ನಂತರ ಲಂಡನ್ ಮತ್ತೆ ಹೋಗಿದ್ದ. ಇದಾದ ಕೆಲವು ದಿನಗಳ ಬಳಿಕ ಲಂಡನ್ ನ್ಯಾಯಾಲಯದಲ್ಲಿ ರಿಜ್ವಿ ವಿರುದ್ಧವೇ ಅರ್ಜಿಯೊಂದು ಸಲ್ಲಿಸಲಾಗಿತ್ತು. ವಿಚಾರಣೆ ನಂತರ ರಿಜ್ವಿ ಪ್ರಕರಣದಲ್ಲಿ ಜಯಗಳಿಸಿದ್ದ ಎಂದು ರಿಜ್ವಿ ಸಹೋದರ ಹೈದರ್ ಹೇಳಿಕೊಂಡಿದ್ದಾರೆ.

ಇನ್ನು ಏಪ್ರಿಲ್. 14 ಸಹೋದರನೊಬ್ಬನ ಆರತಕ್ಷತೆ ಇದ್ದರಿಂದ ರಿಜ್ವಿ ಫೋನಿನ ಮೂಲಕ ಶುಭಾಶಯ ಕೋರಿದ್ದ. ಶುಭಾಶಯ ಕೋರಿದ ಮರುದಿನವೇ ಪೊಲೀಸರು ನಮಗೆ ಕರೆ ಮಾಡಿ ರಿಜ್ವಿ ಸಾವನ್ನಪ್ಪಿದ್ದಾನೆಂದು ಮಾಹಿತಿ ನೀಡಿದ್ದರು ಎಂದು ಹೇಳಿದ್ದಾರೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕೂಡಲೇ ಪ್ರಕರಣ ಸಂಬಂಧ ಗಮನ ಹರಿಸಬೇಕು. ನಮಗೆ ನ್ಯಾಯವನ್ನು ಒದಗಿಸಬೇಕು ಹಾಗೂ ರಿಜ್ವಿ ಮೃತದೇಹವನ್ನು ಶೀಘ್ರಗತಿಯಲ್ಲಿ ನಮ್ಮ ವಶಕ್ಕೆ ನೀಡಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಮೂಲಗಳ ಪ್ರಕಾರ ಮಿರ್ ಬಕಾರ್ ರಿಜ್ವಿ ಲಂಡನ್ ನಲ್ಲಿ ಎಂಬಿಎ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದು, ಏ.12 ರಂದು ಲಂಡನ್ ನ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಆಸ್ಟರ್ಲಿ ಭೂಗರ್ಭ ರೈಲ್ವೆ ನಿಲ್ದಾಣದಲ್ಲಿ ಸಿಲುಕಿ ಹಾಕಿಕೊಂಡ ಕಾರಣ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಇನ್ನು ಈ ಕುರಿತಂತೆ ಲಂಡನ್ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ರಿಜ್ವಿ ಅವರ ಸಾವು ಅನುಮಾನಾಸ್ಪದ ಸಾವಲ್ಲ. ಅವರು ಭೂಗರ್ಭ ರೈಲ್ವೆ ನಿಲ್ದಾಣದಲ್ಲಿ ಸಿಲುಕಿ ಹಾಕಿಕೊಂಡು ಸಾವನ್ನಪ್ಪಿದ್ದಾರೆ. ರಿಜ್ವಿ ಸಾವಿನ ಹಿಂದೆ ಯಾವುದೇ ಮೂರನೇ ವ್ಯಕ್ತಿ ಕೈವಾಡವಿಲ್ಲ ಎಂದು ಹೇಳಿಕೊಂಡಿದೆ.

ಏಪ್ರಿಲ್ 12ರಂದು ರಾತ್ರಿ 7.45ರ ಸುಮಾರಿಗೆ ಲಂಡನ್ ನ ಆಸ್ಟರ್ಲಿ ಭೂಗರ್ಭ ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರನ್ನು ಸಿಕ್ಕಿಹಾಕಿಕೊಂಡಿದ್ದಾರೆಂದು ಕರೆ ಬಂದಿತ್ತು. ಈ ವೇಳೆ ಪೊಲೀಸರು, ಆಂಬ್ಯುಲೆನ್ಸ್ ಜೊತೆಗೆ ಅಗ್ನಿ ಶಾಮಕ ದಳದೊಂದಿಗೆ ಸ್ಥಳಕ್ಕೆ ಹೋಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಆ ವ್ಯಕ್ತಿ ಸಾವನ್ನಪ್ಪಿದ್ದರು ಎಂದು ಬ್ರಿಟಿಷ್ ಸಾರಿಗೆ ಪೊಲೀಸರು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT