ದೇಶ

ಆಪರೇಷನ್ ಬ್ಲೂ ಸ್ಟಾರ್ ಕಡತಗಳನ್ನು ಬಹಿರಂಗಪಡಿಸಲು ಸುಬ್ರಹ್ಮಣಿಯನ್ ಸ್ವಾಮಿ ಆಗ್ರಹ

Srinivas Rao BV

ಪಗ್ವಾರ: ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಆಪರೇಶನ್ ಬ್ಲೂ ಸ್ಟಾರ್ ಕಾರ್ಯಾಚರಣೆಯ ಕಡತಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ(ಎಲ್ ಪಿ ಯು) ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಸರಿಯಾಗಿ ಯೋಚಿಸದೇ ಕೈಗೊಂಡ ಮೂರ್ಖತನದ ಕ್ರಮ ಎಂದು ಹೇಳಿದ್ದು ಆ ಕುರಿತು ಕಡತಗಳನ್ನು ಬಹಿರಂಗಪಡಿಸಿದರೆ ಅದರ ಬಗ್ಗೆ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ತಿಳಿಯಲಿದೆ ಎಂದಿದ್ದಾರೆ. 1984 ರಲ್ಲಿ ಗೋಲ್ಡನ್ ಟೆಂಪಲ್ ಗೆ ಸೇನೆ ಪ್ರವೇಶಿಸಿದರ ಬಗ್ಗೆ ಮಾತನಾಡಿರುವ ಸ್ವಾಮಿ, ಸೇನೆ ಪ್ರವೇಶಿಸಿದ್ದನ್ನು ನಾನು ಖಂಡಿಸಿದೆ. ಆದರೆ ಬಹುತೇಕ ಹಿಂದೂಗಳು ನನ್ನ ನಿಲುವಿನಿಂದ ಕೋಪಗೊಂಡಿದ್ದರು, ಇದರಿಂದಾಗಿ ನಾನು ಚುನಾವಣೆಯನ್ನೂ ಸೋಲಬೇಕಾಯಿತು ಆದರೆ ಅದ್ಯಾವುದಕ್ಕೂ ನಾನು ಚಿಂತೆ ಮಾಡಲಿಲ್ಲ ಎಂದು ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.

ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಗೋಲ್ಡನ್ ಟೆಂಪಲ್ ಗೆ ಸೇನೆ ಪ್ರವೇಶಿಸಿದ್ದು ತಪ್ಪು ಎಂಬುದು ಕಾಲಕ್ರಮೇಣವಾಗಿ ಎಲ್ಲರಿಗೂ ಮನವರಿಕೆಯಾಗಿದೆ ಎಂದು ಸ್ವಾಮಿ ಹೇಳಿದ್ದು ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಧಾರ್ಮಿಕ ಬೋಧಕನಾಗಿದ್ದ ಮಾದಕದ್ರವ್ಯದ ವಿರುದ್ಧ ಧ್ವನಿ ಎತ್ತಿದ್ದ ಎಂದು ತಿಳಿಸಿದ್ದಾರೆ.

SCROLL FOR NEXT