ದೇಶ

ನಾನು ಪ್ರಧಾನಿ ಹುದ್ದೆಯ ಹಕ್ಕುದಾರನಲ್ಲ, ಹಣೆಬರಹದಲ್ಲಿದ್ದರೆ ಪ್ರಧಾನಿಯಾಗುವೆ: ನಿತೀಶ್ ಕುಮಾರ್

Shilpa D

ಪಾಟ್ನಾ: ನಾನು ಪ್ರಧಾನಿ ಹುದ್ದೆಯ ಹಕ್ಕುದಾರನಲ್ಲ. ಆದರೆ, ಹಣೆಬರಹದಲ್ಲಿದ್ದರೆ ಒಂದು ದಿನ ಪ್ರಧಾನಿಯಾಗುವೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಪಟ್ನಾದಲ್ಲಿ ಶನಿವಾರ ನಡೆದ ಜೆಡಿಯು ರಾಷ್ಟ್ರೀಯ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಸರಿ ಪಕ್ಷವನ್ನು ಸೋಲಿಸುವುದಕ್ಕಾಗಿ ಬಿಜೆಪಿ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದಾಗಿ ಜೆಡಿಯು ನೂತನ ಮುಖ್ಯಸ್ಥ  ನಿತೀಶ್‌ ಕುಮಾರ್‌ ಹೇಳಿದರು. ಇದೇ ವೇಳೆ ಜನರಿಗೆ ಒಂದಾಗಲು ಕರೆ ನೀಡುವುದೂ ಅಪರಾಧವೇ ಎಂದು ಪ್ರಶ್ನಿಸಿದರು.

ನಾಯಕತ್ವ ವಿಚಾರವನ್ನು ಕಾಲವೇ ನಿರ್ಧರಿಸಲಿದೆ. ಮೊದಲಿಗೆ ನಾವು ಬಿಜೆಪಿ ವಿರುದ್ಧ ಒಟ್ಟಾಗಬೇಕಿದೆ. ಅದಕ್ಕಾಗಿ ಪ್ರತಿಯೊಬ್ಬರೂ ತ್ಯಾಗ ಮಾಡಬೇಕು. ಒಂದು ವೇಳೆ ನಾನು ಮತ್ತು ಲಾಲು ಪ್ರಸಾದ್‌ ಅವರು ತ್ಯಾಗ ಮಾಡದಿದ್ದರೆ ಮಹಾ ಮೈತ್ರಿಕೂಟ ರೂಪುಗೊಳ್ಳುತ್ತಿರಲಿಲ್ಲ’ ಎಂದರು.

SCROLL FOR NEXT