ದೇಶ

ಡೆಹ್ರಾಡೂನ್ ಪೆಟ್ರೋಲ್ ಪಂಪ್ ಗೆ ಶಕ್ತಿಮಾನ್ ಹೆಸರು

Manjula VN

ಡೆಹ್ರಾಡೂನ್: ಡೆಹ್ರಾಡೂನ್ ನಲ್ಲಿನ ಪೆಟ್ರೋಲ್ ಪಂಪ್ ಒಂದಕ್ಕೆ ಬಿಜೆಪಿ ಶಾಸಕನಿಂದ ಹಲ್ಲೆಗೊಳಗಾಗಿ ಪ್ರಾಣ ತ್ಯಜಿಸಿದ್ದ ಪೊಲೀಸ್ ಕುದುರೆ ಶಕ್ತಿಮಾನ್ ಹೆಸರನ್ನು ಇಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತಂತೆ ಡೆಹ್ರಾಡೂನ್ ಹಿರಿಯ ಪೊಲೀಸ್ ಅಧಿಕಾರಿ ಸದಾನಂದ ಅವರು ಮಾಹಿತಿ ನೀಡಿದ್ದು, ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದ ಶಕ್ತಿಮಾನ್ ಹೆಸರನ್ನು ನೆನಪಿನ ಅಂಗವಾಗಿ ಪೆಟ್ರೋಲ್ ಪಂಪ್'ವೊಂದಕ್ಕೆ ಇಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮಾ.14 ರಂದು ಪ್ರತಿಭಟನೆಯೊಂದರಲ್ಲಿ ಬಿಜೆಪಿ ಶಾಸಕ ಗಣೇಶ್ ಜೋಶಿಯವರಿಂದ ಹಲ್ಲೆಗೊಳಗಾಗಿದ್ದ ಪೊಲೀಸ್ ಕುದುರೆ ಶಕ್ತಿಮಾನ್ ಕಾಲೊಂದನ್ನು ಕಳೆದುಕೊಂಡಿತ್ತು. ಇದರಂತೆ ಶಸ್ತ್ರಚಿಕಿತ್ಸೆಮಾಡಿ ಶಕ್ತಿಮಾನ್ ಗೆ ಕೃತಕ ಕಾಲನ್ನು ಒದಗಿಸಲಾಗಿತ್ತು. ಆದರೆ, ಸೋಂಕು ತೀವ್ರಗೊಂಡ ಕಾರಣ ಗುಣಮುಖವಾಗದೆ ಏ.21 ರಂದು ಕೊನೆಯುಸಿರೆಳೆದಿತ್ತು.

SCROLL FOR NEXT