ಮುಂಬೈ-ಗೋವಾ ಹೆದ್ದಾರಿಯಲ್ಲಿ ರಾಯಗಢ ಜಿಲ್ಲೆಯಲ್ಲಿರುವ ಸಾವಿತ್ರಿ ನದಿಯಲ್ಲಿ ಪ್ರವಾಹಕ್ಕೆ ಕುಸಿದ ಮಹದ್-ಪೊಲದ್ಪುರ್ ಸೇತುವೆಯ ಉಳಿದ ಭಾಗದ ನೋಟ. 
ದೇಶ

ಮಹದ್ ಸೇತುವೆ ಕುಸಿತ: ಮುಳುಗಿದ ಬಸ್ಸುಗಳ ಅವಶೇಷ ಪತ್ತೆ

ಕಳೆದ ಎಂಟು ದಿನಗಳ ತೀವ್ರ ಹುಡುಕಾಟದ ನಂತರ ಮಹದ್ ನ ಸಾವಿತ್ರಿ ನದಿಯ ಸೇತುವೆ ಕುಸಿದು ಮುಳುಗಿ...

ಮುಂಬೈ: ಕಳೆದ ಎಂಟು ದಿನಗಳ ತೀವ್ರ ಹುಡುಕಾಟದ ನಂತರ ಮಹದ್ ನ ಸಾವಿತ್ರಿ ನದಿಯ ಸೇತುವೆ ಕುಸಿದು ಮುಳುಗಿ ಹೋಗಿದ್ದ ಬಸ್ಸುಗಳು ಅವಶೇಷಗಳು ಪತ್ತೆಯಾಗಿವೆ. ಸುದೀರ್ಘ ಹುಡುಕಾಟದ ನಂತರ ನೌಕಾಪಡೆ ತಂಡದವರು ಬಸ್ಸಿನ ಬಿಡಿಭಾಗಗಳನ್ನು ಪತ್ತೆಹಚ್ಚಿದ್ದಾರೆ.
ಸೇತುವೆ ಕುಸಿದ 170ರಿಂದ 200 ಮೀಟರ್ ದೂರದಲ್ಲಿ ಬಸ್ಸಿನ ಬಿಡಿ ಭಾಗಗಳು ಪತ್ತೆಯಾಗಿವೆ. ಪತ್ತೆಯಾದ ಬಸ್ಸಿನ ಭಾಗಗಳು ಒಂದು ಬಸ್ಸಿನದ್ದೇ ಅಥವಾ ಎರಡರದ್ದೇ ಎಂದು ತಿಳಿದುಬಂದಿಲ್ಲ.
ನದಿಯಲ್ಲಿ ಪರಿಸ್ಥಿತಿ ಕಠಿಣವಾಗಿದ್ದರೂ, ತೀವ್ರ ಅಲೆಯಿದ್ದರೂ, ಮೊಸಳೆಗಳಿದ್ದರೂ ಕೂಡ ನೌಕಾ ಪಡೆ ತಂಡ ಸ್ಪಾಟ್ ಡೈವಿಂಗ್ ನಡೆಸಿದೆ. 
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕ್ರೇನ್ ಬಳಸಿ ಭಗ್ನಾವಶೇಷಗಳ ಹುಡುಕಾಟ ನಡೆಸಿತು. ಈ ಸಂದರ್ಭದಲ್ಲಿ ಬಸ್ಸಿನ ಬಿಡಿ ಭಾಗಗಳು ಸಿಕ್ಕಿವೆ. ಡೈವಿಂಗ್ ನಲ್ಲಿ ವಿಶೇಷ ಪರಿಣತಿ ಪಡೆದ ಭಾರತೀಯ ನೌಕಾಪಡೆಯ ಸಿಬ್ಬಂದಿಗಳ ತಂಡ ಹುಡುಕಾಟದಲ್ಲಿ ನಿರತವಾಗಿದೆ. 
ಸೇತುವೆ ಕುಸಿತದಲ್ಲಿ ಕಣ್ಮರೆಯಾದವರ ಹುಡುಕಾಟ ನಡೆಸುವಂತೆ ಮಹಾರಾಷ್ಟ್ರ ಸರ್ಕಾರ ಭಾರತೀಯ ನೌಕಾಪಡೆಯನ್ನು ಕೋರಿತ್ತು. 
ಇದುವರೆಗೆ 26 ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದ್ದು, ಒಟ್ಟು 41 ಮಂದಿ ಕಣ್ಮರೆಯಾಗಿದ್ದಾರೆ. ದುರ್ಘಟನೆಯಲ್ಲಿ ಎರಡು ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಮತ್ತು ಎರಡು ಖಾಸಗಿ ಕಾರುಗಳು ಮತ್ತ 38 ಪ್ರಯಾಣಿಕರು ಸಾವಿತ್ರಿ ನದಿಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ ಬೃಹತ್ ಸೇನಾ ಕಾರ್ಯಾಚರಣೆ: ಹಲವು ಮಿಲಿಟರಿ ನಾಯಕರ ಹತ್ಯೆ- ಡೊನಾಲ್ಡ್ ಟ್ರಂಪ್! Video

ಲೋಕಸಭಾ ಸ್ಥಾನಗಳ ಹೆಚ್ಚಳ ಪ್ರಸ್ತಾವನೆ: ದಕ್ಷಿಣ ರಾಜ್ಯಗಳಿಗೆ ಅನ್ಯಾಯ, ‘ದಿಕ್ಕು ತಪ್ಪಿಸುವ ಅಸ್ತ್ರ’; ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

ಇದೇ ಮೊದಲು, ಶತ್ರು ರಾಷ್ಟ್ರದ ಪ್ರಾಂತ್ಯದಲ್ಲಿ ಇಬ್ಬರು US ಪೈಲಟ್‌ ರಕ್ಷಣೆ, ಡೊನಾಲ್ಡ್ ಟ್ರಂಪ್!

48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕ ಸೃಷ್ಟಿಸುತ್ತೇವೆ: ಅಮೆರಿಕಾ ಬೆದರಿಕೆಗೆ ಕ್ಯಾರೆ ಎನ್ನದ ಇರಾನ್; ಇಸ್ರೇಲ್-ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿ..!

ಹಾವೇರಿ ವಿಶ್ವವಿದ್ಯಾಲಯ: ಗೌರವ ಡಾಕ್ಟರೇಟ್ ಸ್ವೀಕರಿಸಲು ಸಂಸದ ಬಸವರಾಜ ಬೊಮ್ಮಾಯಿ ನಕಾರ!

SCROLL FOR NEXT