ಶ್ರೀನಗರ: ಮತ್ತೆ ಆರು ದಿನಗಳವರೆಗೆ ರದ್ದುಕೊಂಡಿದ್ದ ಪೋಸ್ಟ್ ಪೇಯ್ಡ್ ಮೊಬೈಲ್ ಫೋನ್ ಸೇವೆಗಳು ಕಾಶ್ಮೀರ ಕಣಿವೆಯಲ್ಲಿ ಮರುಪ್ರಾರಂಭವಾಗಿವೆ. 43 ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ-ಘರ್ಷಣೆಯಲ್ಲಿ 64 ಜನ ಮೃತಪಟ್ಟಿದ್ದು, ವದಂತಿಗಳು ಹರಡದಂತೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿತ್ತು.
ಸುಮಾರು ಬೆಳಗ್ಗೆ 11 ಘಂಟೆಗೆ ಎಲ್ಲ ಮೊಬೈಲ್ ಫೋನ್ ಸೇವೆಗಳನ್ನು ಮರುಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಪ್ರೀ ಪೇಯ್ಡ್ ಮೊಬೈಲ್ ಫೋನುಗಳ ಹೊರಹೋಗುವ ದೂರವಾಣಿ ಕರೆಗಳನ್ನು ಇನ್ನೂ ತಡೆಹಿಡಿಯಲಾಗಿದೆ ಎಂದು ಅವರು ಹೇಳಿದ್ದಾರೆ.
ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರತ್ಯೇಕವಾದಿಗಳು ನಗರ ಕೇಂದ್ರದಲ್ಲಿ ರ್ಯಾಲಿ ನಡೆಸಬಹುದಾಗಿದ್ದನ್ನು ತಪ್ಪಿಸಲು ಭದ್ರತಾ ಕ್ರಮವಾಗಿ ಆಗಸ್ಟ್ 13 ರಿಂದ ಮೊಬೈಲ್ ಸೇವೆಗಳನ್ನು ರದ್ದುಮಾಡಲಾಗಿತ್ತು.
ಶ್ರೀನಗರ ಮತ್ತು ಕಣಿವೆಯ ಇತರ ಕೆಲವು ಭಾಗಗಳಲ್ಲಿ ಕರ್ಫ್ಯೂ ಮುಂದುವರೆದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos