ಅಂಕಣಗಾರ್ತಿ ಶೋಭಾ ಡೇ (ಸಂಗ್ರಹ ಚಿತ್ರ) 
ದೇಶ

"ಹತಾಶೆಯಿಂದಾಡಿದ ಮಾತಿಗೆ ತಕ್ಕಶಾಸ್ತಿ": ಶೋಭಾ ಡೇ ವಿಷಾದ

ರಿಯೊ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಕಳಪೆ ಸಾಧನೆ ಕುರಿತಂತೆ ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದ ಖ್ಯಾತ ಲೇಖಕಿ ಶೋಭಾ ಡೇ ತಮ್ಮ ಟ್ವೀಟ್ ಗೆ ಸಂಬಂಧಿಸಿದಂತೆ ವಿಷಾಧ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ರಿಯೊ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಕಳಪೆ ಸಾಧನೆ ಕುರಿತಂತೆ ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದ ಖ್ಯಾತ ಲೇಖಕಿ ಶೋಭಾ ಡೇ ತಮ್ಮ ಟ್ವೀಟ್ ಗೆ ಸಂಬಂಧಿಸಿದಂತೆ ವಿಷಾದ ವ್ಯಕ್ತಪಡಿಸಿದ್ದಾರೆ.

ಭಾರತೀಯ ಒಲಿಂಪಿಕ್ಸ್ ಆಟಗಾರರು ನಿಷ್ಪ್ರಯೋಜಕ ಎಂಬರ್ಥದಲ್ಲಿ ಟ್ವೀಟ್ ಮಾಡಿ ಎಲ್ಲರ ಟೀಕೆಗೆ ಗುರಿಯಾಗಿದ್ದ ಶೋಭಾ ಡೇ ಕೊನೆಗೂ ಈ ಬಗ್ಗೆ ಮೌನ ಮುರಿದಿದ್ದು, ಭಾರತಕ್ಕೆ ಪದಕ  ಸಿಗುತ್ತಿಲ್ಲವಲ್ಲವೆಂಬ ಹತಾಶೆಯಲ್ಲಿ ತಾನು ಟ್ವೀಟ್ ಮಾಡಿದ್ದೆನಷ್ಟೇ..ಅದಕ್ಕೆ ನನಗೆ ಸರಿಯಾದ ಶಿಕ್ಷೆ ಸಿಕ್ಕಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿವಾಹಿನಿಯೊಂದರಲ್ಲಿ ಈ ಬಗ್ಗೆ ಮಾತನಾಡಿದ ಶೋಭಾ ಡೇ, ನನ್ನ ಟ್ವೀಟ್ ನಲ್ಲಿ ಯಾವುದೇ ದುರುದ್ದೇಶ ಅಥವಾ ಕೆಡುಕಿನ ಭಾವನೆ ಇರಲಿಲ್ಲ. ಆಗಸ್ಟ್ 8ರಂದು ನಾನು ಮಾಡಿದ್ದು  ಇದೀಗ ವಿವಾದಕ್ಕೆ ಕಾರಣವಾಗಿದೆ. ಟ್ವೀಟ್ ಮಾಡುವಾಗ ನಾನು ಪ್ರತಿಕ್ರಿಯೆಗಳ ಲೆಕ್ಕಾಚಾರ ಮಾಡುವುದಿಲ್ಲ. ನನ್ನ ಹೃದಯದಿಂದ ನೇರವಾಗಿ ಹೇಳುತ್ತೇನೆ. ನನ್ನ ಹೇಳಿಕೆ ಕೆಲವೊಮ್ಮೆ  ಸರಿಯಾಗಿರುತ್ತದೆ. ಕೆಲವೊಮ್ಮೆ ಸರಿ ಇರುವುದಿಲ್ಲ. ಆದರೆ ಭಾರತ ಒಲಿಂಪಿಕ್ಸ್ ತಂಡ ಕುರಿತು ತಾನು ಮಾಡಿದ್ದ ಟ್ವೀಟ್ ತಿರುಗುಬಾಣವಾಯಿತು. ಅದಕ್ಕಾಗಿ ನನಗೆ ಶಿಕ್ಷೆಯಾಗುತ್ತಿದೆ. ನನ್ನ ಮಾನ  ಹರಾಜಾಗುತ್ತಿದೆ. ಟ್ವಿಟರ್ ನಲ್ಲಿ ನನ್ನ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಸಾರ್ವಜನಿಕ ನಿಂದನೆಗಿಂತ ದೊಡ್ಡ ಶಿಕ್ಷೆ ಇನ್ನೇನು ಬೇಕು?" ಎಂದು ಶೋಭಾ ಡೇ ಹೇಳಿದ್ದಾರೆ.

ನಾನು ಕೂಡ ಓರ್ವ ಅಥ್ಲೀಟ್, ಹೀಗಾಗಿ ಭಾರತ ತಂಡ ಪದಕ ಗಳಿಸುತ್ತಿಲ್ಲವಲ್ಲ ಎಂಬ ಹತಾಶೆಯಲ್ಲಿ ಆ ಮಾತುಗಳನ್ನ ಆಡಿದ್ದೆನಷ್ಟೇ..ಎಂದು ಶೋಭಾ ಹೇಳಿದ್ದಾರೆ.

ಇದೇ ವೇಳೆ ಭಾರತ ತಂಡ ಎರಡು ಪದಕಗಳನ್ನು ಗಳಿಸಿರುವುದನ್ನು ಸ್ವಾಗತಿಸಿರುವ ಶೋಭಾ, "ಎರಡು ಮೂರು, ಐದಾರು ಪದಕಗಳಿಂದ ತಾನು ತೃಪ್ತಿಪಡುವುದಿಲ್ಲ. ಈ ಬಾರಿ ನಮ್ಮ  ಸಾಮರ್ಥ್ಯವನ್ನು ಸಾಬೀತು ಮಾಡಿಕೊಳ್ಳುವ ಅವಕಾಶವಿತ್ತು... ಇದಕ್ಕಾಗಿ ನಮ್ಮ ಅಥ್ಲೀಟ್'ಗಳು ಕೂಡ ಶ್ರಮ ಹಾಕುತ್ತಿದ್ದಾರೆ. ಆದರೆ, ನಾನು ಟೀಕಿಸುತ್ತಿರುವುದು ಅಧಿಕಾರಿಗಳು,  ರಾಜಕಾರಣಿಗಳನ್ನ" ಎಂದು ಖ್ಯಾತ ಅಂಕಣಗಾರ್ತಿ ಹೇಳಿದ್ದಾರೆ.

ಕಳೆದ ಆಗಸ್ಟ್ 8ರಂದು ಭಾರತದ ಪುರುಷರ ಹಾಕಿ ತಂಡ ಜರ್ಮನಿ ವಿರುದ್ಧ ಸೋಲನುಭವಿಸಿ ರಿಯೊ ಒಲಿಂಪಿಕ್ಸ್ ನಿಂದ ಹೊರಬಿದ್ದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಶೋಭಾ ಡೇ, "ಒಲಿಂಪಿಕ್ಸ್'ನಲ್ಲಿ  ಟೀಂ ಇಂಡಿಯಾದ ಗುರಿ ಇದು: ರಿಯೋಗೆ ಹೋಗಿ, ಸೆಲ್ಫೀ ತೆಗೆಯಿರಿ. ಬರಿಗೈಲಿ ವಾಪಸ್ ಬನ್ನಿ. ಹಣ ಮತ್ತು ಅವಕಾಶ ಎಲ್ಲಾ ವ್ಯರ್ಥ.." ಎಂದು ಟ್ವೀಟ್ ಮಾಡಿದ್ದರು. ಶೋಭಾ ಅವರ ಈ ಟ್ವೀಟ್'ಗೆ  ಟ್ವಿಟರ್ ನಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸ್ವತಃ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹಾಗೂ ಕಳೆದ ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಅಭಿನವ್ ಬಿಂದ್ರಾ ಶೋಭಾ ಅವರನ್ನು ಟೀಕಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!