ಅಂಕಣಗಾರ್ತಿ ಶೋಭಾ ಡೇ (ಸಂಗ್ರಹ ಚಿತ್ರ) 
ದೇಶ

"ಹತಾಶೆಯಿಂದಾಡಿದ ಮಾತಿಗೆ ತಕ್ಕಶಾಸ್ತಿ": ಶೋಭಾ ಡೇ ವಿಷಾದ

ರಿಯೊ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಕಳಪೆ ಸಾಧನೆ ಕುರಿತಂತೆ ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದ ಖ್ಯಾತ ಲೇಖಕಿ ಶೋಭಾ ಡೇ ತಮ್ಮ ಟ್ವೀಟ್ ಗೆ ಸಂಬಂಧಿಸಿದಂತೆ ವಿಷಾಧ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ರಿಯೊ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಕಳಪೆ ಸಾಧನೆ ಕುರಿತಂತೆ ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದ ಖ್ಯಾತ ಲೇಖಕಿ ಶೋಭಾ ಡೇ ತಮ್ಮ ಟ್ವೀಟ್ ಗೆ ಸಂಬಂಧಿಸಿದಂತೆ ವಿಷಾದ ವ್ಯಕ್ತಪಡಿಸಿದ್ದಾರೆ.

ಭಾರತೀಯ ಒಲಿಂಪಿಕ್ಸ್ ಆಟಗಾರರು ನಿಷ್ಪ್ರಯೋಜಕ ಎಂಬರ್ಥದಲ್ಲಿ ಟ್ವೀಟ್ ಮಾಡಿ ಎಲ್ಲರ ಟೀಕೆಗೆ ಗುರಿಯಾಗಿದ್ದ ಶೋಭಾ ಡೇ ಕೊನೆಗೂ ಈ ಬಗ್ಗೆ ಮೌನ ಮುರಿದಿದ್ದು, ಭಾರತಕ್ಕೆ ಪದಕ  ಸಿಗುತ್ತಿಲ್ಲವಲ್ಲವೆಂಬ ಹತಾಶೆಯಲ್ಲಿ ತಾನು ಟ್ವೀಟ್ ಮಾಡಿದ್ದೆನಷ್ಟೇ..ಅದಕ್ಕೆ ನನಗೆ ಸರಿಯಾದ ಶಿಕ್ಷೆ ಸಿಕ್ಕಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿವಾಹಿನಿಯೊಂದರಲ್ಲಿ ಈ ಬಗ್ಗೆ ಮಾತನಾಡಿದ ಶೋಭಾ ಡೇ, ನನ್ನ ಟ್ವೀಟ್ ನಲ್ಲಿ ಯಾವುದೇ ದುರುದ್ದೇಶ ಅಥವಾ ಕೆಡುಕಿನ ಭಾವನೆ ಇರಲಿಲ್ಲ. ಆಗಸ್ಟ್ 8ರಂದು ನಾನು ಮಾಡಿದ್ದು  ಇದೀಗ ವಿವಾದಕ್ಕೆ ಕಾರಣವಾಗಿದೆ. ಟ್ವೀಟ್ ಮಾಡುವಾಗ ನಾನು ಪ್ರತಿಕ್ರಿಯೆಗಳ ಲೆಕ್ಕಾಚಾರ ಮಾಡುವುದಿಲ್ಲ. ನನ್ನ ಹೃದಯದಿಂದ ನೇರವಾಗಿ ಹೇಳುತ್ತೇನೆ. ನನ್ನ ಹೇಳಿಕೆ ಕೆಲವೊಮ್ಮೆ  ಸರಿಯಾಗಿರುತ್ತದೆ. ಕೆಲವೊಮ್ಮೆ ಸರಿ ಇರುವುದಿಲ್ಲ. ಆದರೆ ಭಾರತ ಒಲಿಂಪಿಕ್ಸ್ ತಂಡ ಕುರಿತು ತಾನು ಮಾಡಿದ್ದ ಟ್ವೀಟ್ ತಿರುಗುಬಾಣವಾಯಿತು. ಅದಕ್ಕಾಗಿ ನನಗೆ ಶಿಕ್ಷೆಯಾಗುತ್ತಿದೆ. ನನ್ನ ಮಾನ  ಹರಾಜಾಗುತ್ತಿದೆ. ಟ್ವಿಟರ್ ನಲ್ಲಿ ನನ್ನ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಸಾರ್ವಜನಿಕ ನಿಂದನೆಗಿಂತ ದೊಡ್ಡ ಶಿಕ್ಷೆ ಇನ್ನೇನು ಬೇಕು?" ಎಂದು ಶೋಭಾ ಡೇ ಹೇಳಿದ್ದಾರೆ.

ನಾನು ಕೂಡ ಓರ್ವ ಅಥ್ಲೀಟ್, ಹೀಗಾಗಿ ಭಾರತ ತಂಡ ಪದಕ ಗಳಿಸುತ್ತಿಲ್ಲವಲ್ಲ ಎಂಬ ಹತಾಶೆಯಲ್ಲಿ ಆ ಮಾತುಗಳನ್ನ ಆಡಿದ್ದೆನಷ್ಟೇ..ಎಂದು ಶೋಭಾ ಹೇಳಿದ್ದಾರೆ.

ಇದೇ ವೇಳೆ ಭಾರತ ತಂಡ ಎರಡು ಪದಕಗಳನ್ನು ಗಳಿಸಿರುವುದನ್ನು ಸ್ವಾಗತಿಸಿರುವ ಶೋಭಾ, "ಎರಡು ಮೂರು, ಐದಾರು ಪದಕಗಳಿಂದ ತಾನು ತೃಪ್ತಿಪಡುವುದಿಲ್ಲ. ಈ ಬಾರಿ ನಮ್ಮ  ಸಾಮರ್ಥ್ಯವನ್ನು ಸಾಬೀತು ಮಾಡಿಕೊಳ್ಳುವ ಅವಕಾಶವಿತ್ತು... ಇದಕ್ಕಾಗಿ ನಮ್ಮ ಅಥ್ಲೀಟ್'ಗಳು ಕೂಡ ಶ್ರಮ ಹಾಕುತ್ತಿದ್ದಾರೆ. ಆದರೆ, ನಾನು ಟೀಕಿಸುತ್ತಿರುವುದು ಅಧಿಕಾರಿಗಳು,  ರಾಜಕಾರಣಿಗಳನ್ನ" ಎಂದು ಖ್ಯಾತ ಅಂಕಣಗಾರ್ತಿ ಹೇಳಿದ್ದಾರೆ.

ಕಳೆದ ಆಗಸ್ಟ್ 8ರಂದು ಭಾರತದ ಪುರುಷರ ಹಾಕಿ ತಂಡ ಜರ್ಮನಿ ವಿರುದ್ಧ ಸೋಲನುಭವಿಸಿ ರಿಯೊ ಒಲಿಂಪಿಕ್ಸ್ ನಿಂದ ಹೊರಬಿದ್ದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಶೋಭಾ ಡೇ, "ಒಲಿಂಪಿಕ್ಸ್'ನಲ್ಲಿ  ಟೀಂ ಇಂಡಿಯಾದ ಗುರಿ ಇದು: ರಿಯೋಗೆ ಹೋಗಿ, ಸೆಲ್ಫೀ ತೆಗೆಯಿರಿ. ಬರಿಗೈಲಿ ವಾಪಸ್ ಬನ್ನಿ. ಹಣ ಮತ್ತು ಅವಕಾಶ ಎಲ್ಲಾ ವ್ಯರ್ಥ.." ಎಂದು ಟ್ವೀಟ್ ಮಾಡಿದ್ದರು. ಶೋಭಾ ಅವರ ಈ ಟ್ವೀಟ್'ಗೆ  ಟ್ವಿಟರ್ ನಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸ್ವತಃ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹಾಗೂ ಕಳೆದ ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಅಭಿನವ್ ಬಿಂದ್ರಾ ಶೋಭಾ ಅವರನ್ನು ಟೀಕಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT