ಹಾರ್ದಿಕ್ ಪಟೇಲ್ 
ದೇಶ

ಕೋಟ್ಯಾಧಿಪತಿಯಾಗಲು ಮೀಸಲಾತಿ ಅಸ್ತ್ರ ಬಳಸಿಕೊಂಡ್ರಾ ಹಾರ್ದಿಕ್ ಪಟೇಲ್?

ಪಟೇಲ್ ಮೀಸಲಾತಿ ಹೋರಾಟದಿಂದ ರಾತ್ರೋರಾತ್ರಿ ಜನಪ್ರಿಯರಾದ ಹಾರ್ದಿಕ್‌ ಪಟೇಲ್‌ ಹಣ ಸಂಪಾದಿಸಲು ಪಟೇಲ್ ಹೋರಾಟದ ಮೀಸಲಾತಿ ಅಸ್ತ್ರ ...

ಅಹಮದಾಬಾದ್‌: ಪಟೇಲ್ ಮೀಸಲಾತಿ ಹೋರಾಟದಿಂದ ರಾತ್ರೋರಾತ್ರಿ ಜನಪ್ರಿಯರಾದ ಹಾರ್ದಿಕ್‌ ಪಟೇಲ್‌ ಹಣ ಸಂಪಾದಿಸಲು ಪಟೇಲ್ ಹೋರಾಟದ ಮೀಸಲಾತಿ ಅಸ್ತ್ರ ಬಳಸಿಕೊಂಡಿದ್ದಾರೆ ಎಂದು ಅವರ ಸ್ನೇಹಿತರು ಆರೋಪಿಸಿದ್ದಾರೆ.

ಈ ಹಿಂದೆ ಹಾರ್ದಿಕ್ ಪಟೇಲ್‌ ಜೊತೆಗಿದ್ದ ಅವರ ಸ್ನೇಹಿತರಾದ ಚಿರಾಗ್ ಪಟೇಲ್, ಕೇತನ್ ಪಟೇಲ್ ಅವರು ಹಾರ್ದಿಕ್ ವಿರುದ್ಧ ತೀವ್ರ ತೀವ್ರ ಆರೋಪ ಮಾಡಿದ್ದಾರೆ. ಹಾರ್ದಿಕ್ ಪಟೇಲ್ ತಮ್ಮ ಸಮುದಾಯದ ನಾಯಕನಾಗಿ ಬೆಳೆಯಲು ಹಾಗೂ ಕೋಟ್ಯಾಧಿಪತಿ ಆಗಲು ಮೀಸಲಾತಿ ಹೋರಾಟವನ್ನು ಬಳಸಿಕೊಂಡಿದ್ದಾರೆ  ಮೀಸಲಾತಿ ಹೋರಾಟ ಶುರು ಮಾಡಿದ ಒಂದು ವರ್ಷದಲ್ಲಿ ಹಾರ್ದಿಕ್‌ ಕೋಟ್ಯಾಧಿಪತಿಯಾಗಿದ್ದಾರೆ ಅವರು ದೂರಿದ್ದಾರೆ.

ಪಾಟಿದರ್ ಅನಮತ್ ಆಂದೋಲನ ಸಮಿತಿ ಸದಸ್ಯರಾದ ಚಿರಾಗ್, ಕೇತನ್ ಅವರು ಹಾರ್ದಿಕ್‌‌‌ಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.  
ನೀನು ಒಬ್ಬ ಸ್ವಾರ್ಥಿ, ನೀನು ನಾಯಕನಾಗಿ ಬೆಳೆಯುವ ಹಾಗೂ ಶ್ರೀಮಂತನಾಗುವ ಉದ್ದೇಶದಿಂದ ನಮ್ಮ ಮಹತ್ವಾಕಾಂಕ್ಷೆಯ ಪಟೇಲ್‌ ಮೀಸಲಾತಿ ಹೋರಾಟಕ್ಕೆ ಧಕ್ಕೆಯಾಗಿದೆ, ನೀನು ಮತ್ತು ನಿನ್ನ ಆಪ್ತ ಸ್ನೇಹಿತರು ಆದ್ದೂರಿ ಜೀವನ ನಡೆಸುತ್ತಿದ್ದೀರಿ. ಹೋರಾಟದಲ್ಲಿ ಹುತಾತ್ಮರಾದ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಸಂಗ್ರಹಿಸಿದ ಹಣದಲ್ಲಿ ನೀನು ಹಾಗೂ ನಿನ್ನ ಚಿಕ್ಕಪ್ಪ ದುಬಾರಿ ಕಾರುಗಳಲ್ಲಿ ಖರೀದಿಸಿದ್ದೀರಿ ಎಂದೂ ದೂರಿದ್ದಾರೆ.

ಈ ಪತ್ರಕ್ಕೆ ಹಾರ್ದಿಕ್ ಪಟೇಲ್ ಆಗಲಿ ಅಥವಾ ಅವರ ಸ್ನೇಹಿತರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದೇಶ ದ್ರೋಹದ ಆರೋಪದ ಮೇಲೆ ಕಳೆದ 9 ತಿಂಗಳಿಂದ ಜೈಲು ವಾಸ ಅನುಭವಿಸಿದ್ದ ಹಾರ್ದಿಕ್ ಪಟೇಲ್ ರನ್ನು ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಚಿರಾಗ್ ಹಾಗೂ ಕೇತನ್ ಪಟೇಲ್ ಕೂಡ ದೇಶ ದ್ರೋಹದ ಆರೋಪದ ಮೇಲೆ ಹಾರ್ದಿಕ್ ಪಟೇಲ್ ಜೊತೆ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT