ದೇಶ

ಕಾಶ್ಮೀರದ ವೈಷ್ಣೋದೇವಿ ಬಳಿ ಭೂಕುಸಿತ, ಸಿಆರ್ ಪಿಎಫ್ ಯೋಧ ಸಾವು

Lingaraj Badiger
ಜಮ್ಮು: ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದೇವಾಸ್ಥಾನದ ಬಳಿ ಬುಧವಾರ ಭೂಕುಸಿತ ಸಂಭವಿಸಿ ಸಿಆರ್ ಪಿಎಫ್ ಯೋಧರೊಬ್ಬರು ಮೃತಪಟ್ಟಿದ್ದಾರೆ.
ಮೃತ ಯೋಧ ಪಂಜಾಬ್ ನ ಹೊಸಿಯಾರ್ಪುರದ ಮುಖ್ಯ ಪೊಲೀಸ್ ಪೇದೆ ಹರಿವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ.
ವೈಷ್ಣೋದೇವಿ ದೇವಸ್ಥಾನದ ಮೂರನೇ ಗೇಟ್ ಬಳಿ ಈ ಭೂಕುಸಿತ ಸಂಭವಿಸಿದ್ದು, ಅಲ್ಲಿಯೇ ಕಾವಲು ಕಾಯುತ್ತಿದ್ದ ಯೋಧ ಹರಿವಿಂದರ್ ಸಿಂಗ್ ಮೃತಪಟ್ಟಿದ್ದಾರೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದಾಗಿ ಕೆಲಹೊತ್ತು ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಸ್ಥಳದಿಂದ ಯೋಧನ ಮೃತದೇಹ ಹೊರ ತೆಗೆದ ನಂತರ ಪುನಾ ಯಾತ್ರೆಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
SCROLL FOR NEXT