ಸಾಂದರ್ಭಿಕ ಚಿತ್ರ 
ದೇಶ

ಸಾಲ ತೀರಿಸಲಾಗದೆ, ಮಗುವನ್ನು ಅಡವಿಟ್ಟ ದಂಪತಿ

ಸಾಲ ಪಡೆದುಕೊಂಡ ಹಣವನ್ನು ಹಿಂತಿರುಗಿಸಲಾರದೆ ವ್ಯಕ್ತಿಯೊಬ್ಬ ತನ್ನ ಆರು ತಿಂಗಳ ನವಜಾತ ಶಿಶುವನ್ನು ಅಡವಿಟ್ಟ ಪ್ರಕರಣ ರಾಜಸ್ತಾನದ...

ಜೈಪುರ: ಸಾಲ ಪಡೆದುಕೊಂಡ ಹಣವನ್ನು ಹಿಂತಿರುಗಿಸಲಾರದೆ ವ್ಯಕ್ತಿಯೊಬ್ಬ ತನ್ನ ಆರು ತಿಂಗಳ ನವಜಾತ ಶಿಶುವನ್ನು ಅಡವಿಟ್ಟ ಪ್ರಕರಣ ರಾಜಸ್ತಾನದ ಟಾಂಕ್ ಜಿಲ್ಲೆಯಲ್ಲಿ ನಡೆದಿದೆ.
ಸಾಲ ನೀಡಿದಾತ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ನೀಡಿದ್ದು, ಅದು ಮಕ್ಕಳ ಪಾಲನೆ ವಸತಿಗೆ ನೋಡಿಕೊಳ್ಳಲು ಕಳುಹಿಸಿದೆ.
ಕಾಲು ರಾಮ್ ಎಂಬ ವ್ಯಕ್ತಿ ಬಾಲು ರಾಮ್ ಎಂಬವನಿಂದ 20 ಸಾವಿರ ರೂಪಾಯಿ ಸಾಲ ಪಡೆದಿದ್ದ. ಕಳೆದ ಏಪ್ರಿಲ್ 11ರಂದು ಬಾಲು ರಾಮ್ ಬಳಿ ಬಂದ ಕಾಲು ರಾಮ್ ಮತ್ತವನ ಪತ್ನಿ ಬಂದು ತಮಗೆ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ತಮ್ಮ ನವಜಾತ ಶಿಶುವನ್ನು ಅಡವು ನೀಡಿ ಹೊರಟುಹೋದರು.
ಬಾಲು ರಾಮು ಅದೇ ದಿನ ಶಿಶುವನ್ನು ಮಕ್ಕಳ ಪಾಲನಾ ಸಮಿತಿ ಪೀಠದ ಮುಂದೆ ಹಾಜರುಪಡಿಸಿ ಇಡೀ ಘಟನೆಯನ್ನು ವಿವರಿಸಿದರು. ನ್ಯಾಯಪೀಠ ಶಿಶುವಿಗೆ ಬರ್ದಾನ್ ಎಂದು ಹೆಸರಿಟ್ಟು ಅದನ್ನು ಮಕ್ಕಳ ವಸತಿಗೆ ಕಳುಹಿಸಿದ್ದೇವೆ ಎಂದು ಸಮಿತಿಯ ಅಧ್ಯಕ್ಷೆ ಮಾಯಾ ಸುಬಲ್ಕ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿ ಅಲ್ಲಿನ ಪೊಲೀಸ್ ವರಿಷ್ಠರಿಗೆ ಮತ್ತು ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಿ ಮಗುವಿನ ಪೋಷಕರನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT