ದೇಶ

ಜಾಕಿರ್ ನಾಯ್ಕ್ ವಿರುದ್ಧ ಭಯೋತ್ಪಾದನೆ ವಿರೋಧಿ ಪ್ರಕರಣ ದಾಖಲಿಸಿ: ಸಾಲಿಸಿಟರ್ ಜನರಲ್

Srinivas Rao BV

ನವದೆಹಲಿ: ಇಸ್ಲಾಮ್ ನ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಸಾಲಿಸಿಟರ್ ಜನರಲ್ ಗೃಹ ಸಚಿವಾಲಾಯಕ್ಕೆ ಸಲಹೆ ನೀಡಿದೆ.

ಜಾಕಿರ್ ನಾಯ್ಕ್ ನ ಚಿಂತನೆಗಳು ಒಡಕುಂಟು ಮಾಡುವಂಥದ್ದಾಗಿದ್ದು, ಭಾರತದ ವಿವಿಧತೆ, ಜಾತ್ಯಾತೀತತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಸಾಲಿಸಿಟರ್ ಜನರಲ್ ಗೃಹ ಸಚಿವಾಲಯಕ್ಕೆ ಹೇಳಿದ್ದಾರೆ. ಪೀಸ್ ಟಿವಿ ಎಂಬ ಚಾನಲ್ ನ್ನು ನಡೆಸುತ್ತಿರುವ ಜಾಕಿರ್ ನಾಯ್ಕ್ ವಿರುದ್ಧ ಭಯೋತ್ಪಾದಕರಿಗೆ ಸ್ಫೂರ್ತಿ ನೀಡುವ ಆರೋಪ ಕೇಳಿಬಂದಿದೆ. ಢಾಕಾದಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಜಾಕಿರ್ ನಾಯ್ಕ್ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಗುಪ್ತಚರ ಇಲಾಖೆ ಅಧಿಕಾರಿಗಳು ಜಾಕಿರ್ ನಾಯ್ಕ್ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದರು. 

SCROLL FOR NEXT