ಬಂಧಿತ ಆರೋಪಿಗಳು 
ದೇಶ

ದೆಹಲಿ ಸೆಕ್ಸ್ ರಾಕೇಟ್: 5 ಸಾವಿರ ಹುಡುಗಿಯರನ್ನು ಮಾರಿ 100 ಕೋಟಿ ಸಂಪಾದಿಸಿದ ದಂಪತಿ ಬಂಧನ

ದೆಹಲಿಯಲ್ಲಿ ಬಹುದೊಡ್ಡ ಸೆಕ್ಸ್ ರಾಕೇಟ್ ಅನ್ನು ಬಯಲು ಮಾಡಿರುವ ದೆಹಲಿ ಪೊಲೀಸರು, ಮಾನವ ಕಳ್ಳಸಾಗಣೆ ಜಾಲದಲ್ಲಿ ತೊಡಗಿದ್ದ ಮುಸ್ಲಿಂ ದಂಪತಿ ಸೇರಿದಂತೆ...

ನವದೆಹಲಿ: ದೆಹಲಿಯಲ್ಲಿ ಬಹುದೊಡ್ಡ ಸೆಕ್ಸ್ ರಾಕೇಟ್ ಅನ್ನು ಬಯಲು ಮಾಡಿರುವ ದೆಹಲಿ ಪೊಲೀಸರು, ಮಾನವ ಕಳ್ಳಸಾಗಣೆ ಜಾಲದಲ್ಲಿ ತೊಡಗಿದ್ದ ಮುಸ್ಲಿಂ ದಂಪತಿ ಸೇರಿದಂತೆ ಮಂದಿಯನ್ನು ಮಂಗಳವಾರ ಬಂಧಿಸಿದ್ದಾರೆ.
ಹುಡುಗಿಯರ ಮಾರಾಟ ಜಾಲದ ಕಿಂಗ್ ಪಿನ್ ದೆಹಲಿಯ ಜಿ.ಬಿ. ರಸ್ತೆಯ ನಿವಾಸಿ ಸಾಯಿರಾ ಬೇಗಂ(45) ಹಾಗೂ ಆಕೆಯ ಪತಿ ಆಫಾಕ್‌ ಹುಸೇನ್‌(50) ಮತ್ತು ಅವರ ಆರು ಮಂದಿ ಸಹಾಯಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಈ ಎಂಟು ಆರೋಪಿಗಳ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಗ್ರಹ ಕಾಯಿದೆ(ಮಕೋಕಾ)ಯಡಿ ಪ್ರಕರಣ ದಾಖಲಿಸಲಾಗಿದೆ.
1999ರಿಂದ ಈ ತನಕ ಮಾನವ ಕಳ್ಳಸಾಗಣೆ ಜಾಲದಲ್ಲಿ ತೊಡಗಿದ್ದ ಈ ಮುಸ್ಲಿಂ ದಂಪತಿ, ನೇಪಾಳ, ಪಶ್ಚಿಮ ಬಂಗಾಳ, ಒಡಿಶಾ, ಕರ್ನಾಟಕ, ಅಸ್ಸಾಂ ಹಾಗೂ ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳ ಸುಮಾರು 5 ಸಾವಿರ ಹುಡುಗಿಯರನ್ನು ಮಾರಾಟ ಮಾಡಿ ಕನಿಷ್ಠ ನೂರು ಕೋಟಿ ರುಪಾಯಿ ಸಂಪಾದಿಸಿರುವ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ವಿವಿಧ ರಾಜ್ಯಗಳಿಂದ ಸುಮಾರು 5 ಸಾವಿರ ಬಡ ಹುಡುಗಿಯರನ್ನು ಕಳ್ಳಸಾಗಣೆ ಮಾಡಿ 50,000 ರು.ಗಳಿಂದ ಎರಡು ಲಕ್ಷ ರು.ಗಳ ವರೆಗೆ ಮಾರಾಟ ಮಾಡಿ ನೂರು ಕೋಟಿ ರುಪಾಯಿ ಸಂಪಾದಿಸಿದ್ದಾರೆ. ಪ್ರಾಯ ಸಣ್ಣದಿದ್ದಷ್ಟು ಹುಡುಗಿಯರನ್ನು ಹೆಚ್ಚಿನ ಬೆಲೆಗೆ ಮಾರಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಅಲ್ಮೆರಾ ಮತ್ತು ಸುರಂಗಗಳ ಮೂಲಕ ಕಳ್ಳ ಸಾಗಣೆ ಮಾಡುತ್ತಿದ್ದ ದಂಪತಿಗಳು, ಸಣ್ಣಸಣ್ಣ ಕೊಣೆಗಳಲ್ಲೂ ಗ್ರಾಹಕರಿಗೆ ಸೆಕ್ಸ್ ಸೇವೆ ಒದಗಿಸುವಂತೆ ಒತ್ತಡ ಹೇರುತ್ತಿದ್ದರು ಎಂದು ಹುಡುಗಿಯರು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
ಹುಸೇನ್‌ ಮತ್ತು ಬೇಗಂ ಮಾತ್ರವಲ್ಲದೆ ಪೊಲೀಸರು, ಈ ದಂಪತಿ ವಾಹನ ಚಾಲಕನಾಗಿದ್ದ ರಮೇಶ್‌ ಮತ್ತು ಚೀಫ್ ಮ್ಯಾನೇಜರ್‌ ವಾಸು ಎಂಬವರನ್ನು ಕೂಡ ಬಂಧಿಸಿದ್ದಾರೆ. ಇತರ ಬಂಧಿತರನ್ನು ಶಂಶದ್‌, ಶಿಲ್ಪಿ, ಮುಮ್ತಾಜ್‌ ಮತ್ತು ಪೂಜಾ ಥಾಪಾ ಎಂದು ಗುರುತಿಸಲಾಗಿದೆ. ಎಲ್ಲ ಬಂಧಿತರನ್ನು ಸೆ.2ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 
ವಿಶೇಷವೆಂದರೆ ಸಾಯಿರಾ ಮತ್ತು ಆಫಾಕ್‌ ಅವರನ್ನು 1990ರಿಂದ ದಾಖಲಾಗಿದ್ದ ಹಲವಾರು ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. 2001ರಲ್ಲಿ ಆಕೆಗೆ ಏಳು ವರ್ಷಗಳ ಜೈಲು ಶಿಕ್ಷೆಯಾಗಿತ್ತು. ಆ ಶಿಕ್ಷೆಯನ್ನು ಮುಗಿಸಿ ಹೊರಬಂದ ಬಳಿಕ ಆಕೆ ಪುನಃ ಹುಡುಗಿಯರ ಮಾರಾಟ ದಂಧೆಯನ್ನು ಆರಂಭಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT