ರಾಷ್ಟ್ರಪತಿ ಪ್ರಣಬ್ ಮುಖರ್ಜಿ (ಸಂಗ್ರಹ ಚಿತ್ರ) 
ದೇಶ

ಸಂಪುಟ ಒಪ್ಪಿಗೆ ಇಲ್ಲದೇ ಸುಗ್ರೀವಾಜ್ಞೆ; ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿ ಪ್ರಣಬ್ ಚಾಟಿ!

ಕೇಂದ್ರ ಸಂಪುಟ ಸಭೆಯ ಒಪ್ಪಿಗೆ ಇಲ್ಲದೇ ಸಹಿಗೆ ಕಳುಹಿಸಿದ ಸುಗ್ರೀವಾಜ್ಞೆ ಕುರಿತಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮತ್ತೆ ಹೀಗೆ ಆಗದಂತೆ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ: ಕೇಂದ್ರ ಸಂಪುಟ ಸಭೆಯ ಒಪ್ಪಿಗೆ ಇಲ್ಲದೇ ಸಹಿಗೆ ಕಳುಹಿಸಿದ ಸುಗ್ರೀವಾಜ್ಞೆ ಕುರಿತಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮತ್ತೆ ಹೀಗೆ ಆಗದಂತೆ  ಎಚ್ಚರಿಕೆ ನೀಡಿದ್ದಾರೆ.

ಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಕೇಂದ್ರ ಸಂಪುಟದ ಒಪ್ಪಿಗೆ ಇಲ್ಲದೇ ಸುಗ್ರೀವಾಜ್ಞೆಯೊಂದನ್ನು ರಾಷ್ಟ್ರಪತಿಗಳ ಸಹಿಗೆ ಕಳುಹಿಸಿದ್ದು, ಕೇಂದ್ರ ಸರ್ಕಾರದ  ಈ ನಡೆಯಿಂದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಸಮಾಧಾನಗೊಂಡಿದ್ದಾರೆ. 48 ವರ್ಷ ಹಳೆಯ ಶತ್ರು ಆಸ್ತಿ ಕಾಯ್ದೆ (ಚೀನಾ- ಪಾಕಿಸ್ತಾನ ಯುದ್ಧ ವೇಳೆ ಭಾರತ ತೊರೆದಿದ್ದ ನಾಗರಿಕರ ಆಸ್ತಿಯನ್ನು  ಇತರರು ವಶ/ವರ್ಗಾವಣೆ ಮಾಡದಂತೆ ಇರುವ ಕಾಯ್ದೆ)ಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದ್ದು, ಅದನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ ಕೆಲವೊಂದು ಬದಲಾವಣೆಗೆ ವಿಪಕ್ಷಗಳು  ಬಯಸಿದ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಈ ತಿದ್ದುಪಡೆ ಕಾಯ್ದೆಗೆ ಅನುಮೋದನೆ ದೊರೆತಿರಲಿಲ್ಲ.

ಹೀಗಾಗಿ ಈ ಬಗ್ಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಗೆ ಉದ್ದೇಶಿಸಿತ್ತು. ಇದೇ ಸುಗ್ರೀವಾಜ್ಞೆಯನ್ನು ಹಿಂದೆ ನಾಲ್ಕು ಬಾರಿ ಹೊರಡಿಸಲಾಗಿತ್ತು. ಇದೇ ಭಾನುವಾರ ಈ ಆದೇಶದ ಅವಧಿ  ಅಂತ್ಯಗೊಳ್ಳುತ್ತಿತ್ತು. ಹೀಗಾಗಿ ಇದರ ನವೀಕರಣಕ್ಕೆ ಕೇಂದ್ರ ಸರ್ಕಾರ ರಾಷ್ಟ್ರಪತಿಗೆ ಸುಗ್ರೀವಾಜ್ಞೆಯನ್ನು ಸಹಿಗಾಗಿ ರವಾನಿಸಿತ್ತು. ಆದರೆ, ಸಂಪುಟ ಅನುಮೋದನೆ ರಹಿತವಾಗಿ ತಮ್ಮ ಬಳಿ  ಸಹಿಗೆ ಕಳಿಸಿದ್ದನ್ನು ನೋಡಿದ ಪ್ರಣಬ್‌, "ಜನಹಿತಕ್ಕಾಗಿ ಸಹಿ ಹಾಕ್ತಿದ್ದೇನೆ. "ಮುಂದೆಂದೂ ಈ ರೀತಿ ಮಾಡಬೇಡಿ' ಎಂದು ಶರಾ ಬರೆದು ಕಳಿಸಿದ್ದಾರೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಕೇಂದ್ರ ಸಂಪುಟದ ಒಪ್ಪಿಗೆ ಇಲ್ಲದೇ ಸರ್ಕಾರವೊಂದು ರಾಷ್ಟ್ರಪತಿಗಳ ಅಂಕಿತಕ್ಕೆ ಸುಗ್ರೀವಾಜ್ಞೆಯನ್ನು ಕಳುಹಿಸಿರುವುದು ಇದೇ ಮೊದಲಾಗಿದ್ದು,  ಸಂಪುಟದ ಒಪ್ಪಿಗೆ ಇಲ್ಲದೇ ರಾಷ್ಟ್ರಪತಿಗಳು ಅನುಮೋದನೆ ನೀಡಿರುವುದು ಕೂಡಿ ಇದೇ ಮೊದಲ ಬಾರಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

SCROLL FOR NEXT