ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ 
ದೇಶ

ಜನ್'ಧನ್ ಖಾತೆ ಹಣ ಜಮಾವಣೆ ಕುರಿತ ಮೋದಿ ಹೇಳಿಕೆ ಆಘಾತ, ನಾಚಿಕೆಗೇಡು: ರಂದೀಪ್ ಸುರ್ಜೇವಾಲಾ

ಜನ್'ಧನ್ ಖಾತೆಗೆ ಬೇರೆಯವರು ಹಾಕಿರುವ ಹಣ ಬಡವರದ್ದೇ ಆಗಿದ್ದು, ಆ ಹಣವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಬೇಡಿ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆ ಅತ್ಯಂತ ಆಘಾತ ಮತ್ತು ನಾಚಿಕೆಗೇಡಿತನದ ಹೇಳಿಕೆಯಾಗಿದೆ...

ನವದೆಹಲಿ: ಜನ್'ಧನ್ ಖಾತೆಗೆ ಬೇರೆಯವರು ಹಾಕಿರುವ ಹಣ ಬಡವರದ್ದೇ ಆಗಿದ್ದು, ಆ ಹಣವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಬೇಡಿ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆ ಅತ್ಯಂತ ಆಘಾತ ಮತ್ತು ನಾಚಿಕೆಗೇಡಿತನದ ಹೇಳಿಕೆಯಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಅವರು ಶನಿವಾರ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಜನ್'ಧನ್ ಖಾತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಕಪ್ಪುಹಣವನ್ನು ಬಳಕೆ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಪ್ರಧಾನಮಂತ್ರಿಗಳ ಈ ಹೇಳಿಕೆ ನಿಜಕ್ಕೂ ಆಘಾತವನ್ನುಂಟು ಮಾಡಿದ್ದು, ಇದೊಂದು ನಾಚಿಕೆಗೇಡಿತನದ ಹೇಳಿಕೆಯಾಗಿದೆ. ಮೋದಿಯವರು ಕ್ರಿಮಿನಲ್ ಗಳನ್ನು ಪ್ರೋತ್ಸಾಹಿಸುತ್ತಿದ್ದು, ಪ್ರಾಮಾಣಿಕ ಭಾರತೀಯರು ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.

ನೋಟುಗಳ ಮೇಲೆ ನಿಷೇಧ ಹೇರಿದ ಬಳಿಕ ಕೇವಲ 25 ದಿನಗಳಲ್ಲಿ ಜನ್'ಧನ್ ಖಾತೆಗಳಿಗೆ 75000 ಕೋಟಿ ಹಣ ಜಮಾವಣೆಯಾಗಿದೆ. ಈಗಲೂ ಶೇ.25 ರಷ್ಟು ಖಾತೆಗಳಲ್ಲಿ ರು.5 ಕ್ಕಿಂತ ಕಡಿಮೆ ಇದೆ. ಕಪ್ಪುಹಣವನ್ನು ಬಿಳಿಹಣವಾಗಿ ಪರಿವರ್ತಿಸಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನಮ್ಮ ಪ್ರಧಾನಿ ಕ್ರಿಮಿನಲ್ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.

130ಕೋಟಿ ಭಾರತೀಯರು ತಮ್ಮ ಖಾತೆಗಳಿಗೆ ಯಾವಾಗ ರು.15 ಲಕ್ಷ ಹಣ ಜಮಾವಣೆಯಾಗುತ್ತದೆ ಎಂದು ಕಾದುಕುಳಿತಿದ್ದಾರೆ. ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ತರುವಲ್ಲಿ ವಿಫಲವಾಗಿದ್ದು, ಇದನ್ನು ಮರೆಮಾಚಲು ಯತ್ನಗಳನ್ನು ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.

ಉತ್ತರಪ್ರದೇಶ ವಿಧಾನ ಸಭೆ ಚುನಾವವಣೆ ಹಿನ್ನೆಲೆಯಲ್ಲಿ ಬಿಜೆಪಿ ಆಯೋಜಿಸಿದ್ದ ಪರಿವರ್ತನಾ ರ್ಯಾಲಿಯಲ್ಲಿ ನಿನ್ನೆ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ರು.500 ಹಾಗೂ 1,000 ಮುಖಬೆಲೆಯ ನೋಟುಗಳ ರೂಪದಲ್ಲಿದ್ದ ಕಪ್ಪುಹಣವನ್ನು ರಕ್ಷಿಸಿಕೊಳ್ಳಲು ಬಡವರ ಜನ್'ಧನ್ ಖಾತೆಗಳಿಗೆ ಜಮೆ ಮಾಡಿರುವ ಕಾಳಧನಿಕರಿಗೆ ದೊಡ್ಡದೊಂದು ಶಾಕ್ ನೀಡಿದ್ದರು. ಜನ್'ಧನ್ ಖಾತೆಗೆ ಬೇರೆಯವರು ಹಾಕಿರುವ ಹಣ ಬಡವರದ್ದೇ ಆಗಿದ್ದು, ಆ ಹಣವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಬೇಡಿ. ಜನ್'ಧನ್ ಖಾತೆಗೆ ಜಮೆ ಮಾಡಿರುವ ಶ್ರೀಮಂತರ ಕಪ್ಪು ಹಣವನ್ನು ಬಡವರಿಗೆ ಸೇರುವಂತೆ ಮಾಡಲು ಹೊಸ ಸೂತ್ರವೊಂದನ್ನು ರೂಪಿಸುತ್ತಿದ್ದೇವೆಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

SCROLL FOR NEXT