ಕೋಳಿಕೋಡ್: ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡಬೇಕು ಎಂಬ ವಿಷಯ ಇದೀಗ ವಿವಾದಕ್ಕೆ ಕಾರಣವಾಗಿದ್ದು ಕೇರಳ ಚಲನಚಿತ್ರ ಅಕಾಡಮಿ ಅಧ್ಯಕ್ಷ ಹಾಗೂ ಮಲಯಾಳಂ ಚಲನಚಿತ್ರರಂಗದ ನಿರ್ದೇಶಕ ಕಮಲ್ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬೆಂಬಲಿಸಿದ್ದಾರೆ.
ಸಂಘಪರಿವಾರದ ಜನರು ಕೋಮುವಾದ ಮತ್ತು ಅಸಹಿಷ್ಣುತೆಯನ್ನು ಕೆರಳಿಸಲು ರಾಷ್ಟ್ರಗೀತೆಯನ್ನು ಬಳಸಲಾಗುತ್ತಿದ್ದು ಕೇರಳದಲ್ಲಿ ಸಂಘಪರಿವಾರದವರ ಆಟ ನಡೆಯಲಾರದು ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರಗೀತೆ ಕುರಿತಂತೆ ಕಮಲ್ ಅವರ ಹೇಳಿಕೆಯಿಂದ ಕೆರಳಿಸಿರುವ ಸಂಘಪರಿವಾರದವರು ಕಮಲ್ ನಿವಾಸದೆದುರು ಪ್ರತಿಭಟನೆ ನಡೆಸುತ್ತಿದ್ದು ಸಂಘಪರಿವಾರ ಪ್ರತಿಭಟನೆ ಮೂಲಕ ವಿಷಯವನ್ನು ಕೋಮುವಾದೀಕರಣಗೊಳಿಸಿ ರಾಜಕೀಯ ಲಾಭಗಳಿಸಲು ಶ್ರಮಿಸುತ್ತಿದೆ ಎಂದರು.
ರಾಷ್ಟ್ರಗೀತೆ ಕುರಿತಂತೆ ಕೇರಳದಲ್ಲಿ ಸಮಸ್ಯೆ ಸೃಷ್ಠಿಸುವವರನ್ನು ಸರ್ಕಾರ ಮಟ್ಟಹಾಕಲಿದೆ ಎಂದು ಪಿಣರಾಯಿ ವಿಜಯ್ ಎಚ್ಚರಿಕೆಯನ್ನು ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos