ಮಮತಾ ಬ್ಯಾನರ್ಜಿ 
ದೇಶ

'ಚಾಯ್ ವಾಲಾ ಆಗಿದ್ದ ಮೋದಿ ಈಗ ಪೇಟಿಎಂ ವಾಲಾ': ಮಮತಾ ಲೇವಡಿ

ನರೇಂದ್ರ ಮೋದಿ ಸರ್ಕಾರ ಕಿವುಡ ಹಾಗೂ ಮೂಕ ಸರ್ಕಾರವಾಗಿದೆ. ಚಾಯ್ ವಾಲಾ ಆಗಿದ್ದವರು ಈಗ ಪೇಟಿಎಂ ವಾಲಾ ಆಗಿದ್ದಾರೆ ಎಂದು ಮೋದಿ ವಿರುದ್ಧ ...

ಕೊಲ್ಕೋತಾ; ನರೇಂದ್ರ ಮೋದಿ ಸರ್ಕಾರ ಕಿವುಡ ಹಾಗೂ ಮೂಕ ಸರ್ಕಾರವಾಗಿದೆ. ಚಾಯ್ ವಾಲಾ ಆಗಿದ್ದವರು ಈಗ ಪೇಟಿಎಂ ವಾಲಾ ಆಗಿದ್ದಾರೆ ಎಂದು ಮೋದಿ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಬಾಂಕುರ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಮೊದಲು ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ಚಾಯ್ ವಾಲಾ ಎಂದು ಕರೆದು ಕೊಳ್ಳುತ್ತಿದ್ದರು. ಈಗ ಅವರು ಮಿಲಿಯನೇರ್ ಪೇಟಿಮ್ ವಾಲಾ ಆಗಿದ್ದಾರೆ ಎಂದು ಟೀಕಿಸಿದ್ದಾರೆ.

ಜನ ಸಾಮಾನ್ಯರು ತಾವು ಕಷ್ಟ ಪಟ್ಟು ದುಡಿದ ಹಣವನ್ನು ಎಲ್ಲಿ ಕೂಡಿಡಬೇಕು ಎಂದು ಆಗ್ರಹಿಸುವ ಹಕ್ಕು ಮೋದಿಗಿಲ್ಲ, ನೋಟು ನಿಷೇಧ ಕ್ರಮ ದೇಶದಲ್ಲಿ ದೊಡ್ಡ ತಲೆನೋವಾಗಿದೆ ಎಂದ ಮಮತಾ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ದೇಶದಲ್ಲಿರುವ ಸರ್ಕಾರ ಕಿವುಡ ಹಾಗೂ ಮೂಕವಾಗಿದೆ. ಒತ್ತಾಯದ ಆಡಳಿತಕ್ಕೆ ಇಡೀ ದೇಶವನ್ನೇ ಬಲವಂತವಾಗಿ ತಳ್ಳುತ್ತಿದ್ದಾರೆ ಎಂದು ಮಮತಾ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT