ದೇಶ

1 ಕೋಟಿ ಹಣಕ್ಕಾಗಿ 3 ವರ್ಷದ ಬಾಲಕಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿದ ಅಪ್ರಾಪ್ತರು

Shilpa D

ಮುಂಬಯಿ: ಮೂರು ವರ್ಷದ ಬಾಲಕಿಯನ್ನ ಅಪಹರಿಸಿದ ಅಪ್ರಾಪ್ತರು ಆಕೆಯನ್ನ ಕೊಂದು ತುಂಡು ತುಂಡು ಮಾಡಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ.

ಬಾಲಕಿಯನ್ನು ಅಪಹರಿಸಿದ್ದ ಇಬ್ಬರು ಅಪ್ರಾಪ್ತ ಬಾಲಕರು ಆಕೆಯ ಪೋಷಕರಿಂದ 1 ಕೋಟಿ ರು ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ನಿನ್ನೆ ರಾತ್ರಿ ಕಾಜಿಪುರದ ನಾಗಪಾಡ ಪ್ರದೇಶದಲ್ಲಿ ಬಾಲಕಿಯ ದೇಹ ಸಿಕ್ಕಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಂದು ಬೆಳಗ್ಗೆ ಇಬ್ಬರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 5 ರಂದು ಬಾಲಕಿ ನಾಪತ್ತೆಯಾಗಿದ್ದು, ಈ ಸಂಬಂಧ ಆಕೆ ಪೋಷಕರು ಜೆ.ಜೆ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಬಾಲಕಿಯ ಪೋಷಕರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ 1 ಕೋಟಿ ರು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಅಷ್ಟೊಂದು ಪ್ರಮಾಣದಲ್ಲಿ ಹಣ ಹೊಂದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಬಾಲಕಿ ತಂದೆ 28 ಲಕ್ಷ ರು ಹಣ ನೀಡಲು ಒಪ್ಪಿಕೊಂಡಿದ್ದರು ಎಂದು ಡಿಸಿಪಿ ಮನೋದ್ ಕುಮಾರ್ ತಿಳಿಸಿದ್ದಾರೆ.

ನಂತರ ಥಾಣೆ ಬಳಿಯ ಕಾಲ್ವಾ ಟೌನ್ ಬಳಿ ಹಣ ತರುವಂತೆ ಅಪರಹರಣ ಕಾರರು ಬಾಲಕಿ ತಂದೆಗೆ ತಿಳಿಸಿದ್ದರು. ಬಾಲಕಿಯ ನೆರೆಮನೆಯಲ್ಲಿದ್ದ 16 ವರ್ಷದ ಬಾಲಕ ಆಕೆಯನ್ನು ಅಪಹರಿಸಿ ತನ್ನ ಸ್ನೇಹಿತರೊಂದಿಗೆ ಸೇರಿ ಡಿಸೆಂಬರ್ 5 ರಂದು ಮೊಬೈಲ್ ಚಾರ್ಜರ್ ವೈರ್ ನಿಂದ ಆಕೆಯನ್ನು ಕೊಂದು ತುಂಡರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT