ನದೀಮ್ ಅಕ್ರಮ್ 
ದೇಶ

ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ವಿದ್ಯಾರ್ಥಿಗೆ ನೆರವಾಯ್ತು ಕ್ರೌಡ್ ಫಂಡಿಂಗ್!

ಈ ವರ್ಷ ಹಲವು ಸ್ಟಾರ್ಟ್ ಅಪ್, ಕಲಾವಿದರು ಸಾರ್ವಜನಿಕ ಚಳುವಳಿಗಳಿಗೆ ಕ್ರೌಡ್ ಫಂಡಿಂಗ್ ಜೀವಸೆಲೆಯಾಗಿತ್ತು. ಕಲೆ, ಸ್ಟಾರ್ಟ್ ಅಪ್ ಗಳನ್ನು ಹೊರತುಪಡಿಸಿ ಕ್ರೌಡ್ ಫಂಡಿಂಗ್ ಓರ್ವ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ನೆರವಾಗಿದೆ ಎಂಬುದು ಮತ್ತೊಂದು ವಿಶೇಷ.

ಬೆಂಗಳೂರು: ಈ ವರ್ಷ ಹಲವು ಸ್ಟಾರ್ಟ್ ಅಪ್, ಕಲಾವಿದರು ಸಾರ್ವಜನಿಕ ಚಳುವಳಿಗಳಿಗೆ ಕ್ರೌಡ್ ಫಂಡಿಂಗ್ ಜೀವಸೆಲೆಯಾಗಿತ್ತು. ಕಲೆ, ಸ್ಟಾರ್ಟ್ ಅಪ್ ಗಳನ್ನು ಹೊರತುಪಡಿಸಿ ಕ್ರೌಡ್ ಫಂಡಿಂಗ್ ಓರ್ವ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ನೆರವಾಗಿದೆ ಎಂಬುದು ಮತ್ತೊಂದು ವಿಶೇಷ.
ನ್ಯೂ ಹರೈಜನ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಸಿಎ ವ್ಯಾಸಂಗ ಮಾಡುತ್ತಿರುವ ನದೀಮ್ ಅಕ್ರಮ್ ಎಂಬ ವಿದ್ಯಾರ್ಥಿಗೆ 35,000 ಕಾಲೇಜು ಶುಲ್ಕ ಪಾವತಿ ಮಾಡಲು ಆರ್ಥಿಕ ಮುಗ್ಗಟ್ಟು ಎದುರಾಗಿತ್ತು. ದಿಕ್ಕುಕಾಣದಂತಾಗಿದ್ದ ವಿದ್ಯಾರ್ಥಿಗೆ ಕ್ರೌಡ್ ಫಂಡಿಂಗ್ ಮೊರೆ ಹೋಗುವಂತೆ ಸ್ನೇಹಿತರು ಸಲಹೆ ನೀಡಿದ್ದಾರೆ. ಸ್ನೇಹಿತರ ಸಲಹೆಯಂತೆ ನದೀಮ್ ಅಕ್ರಮ್ ಕ್ರೌಡ್ ಫಂಡಿಂಗ್ ವೇದಿಕೆ ಮಿಲಾಪ್ ನಲ್ಲಿ ಡಿ.19 ರಂದು ಪೇಜ್ ಪ್ರಾಂಭಿಸಿದ್ದಾರೆ. ಪೇಜ್ ಪ್ರಾರಂಭಿಸಿದ ಕೇವಲ ಒಂದು ದಿನದಲ್ಲೇ ನದೀಮ್ ಕಾಲೇಜಿಗೆ ಪಾವತಿ ಮಾಡಬೇಕಿದ್ದ ಹಣ ಪಡೆದಿದ್ದಾರೆ. ಕ್ರೌಡ್ ಫಂಡಿಂಗ್ ನೆರವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ನದೀಮ್ ಅಕ್ರಮ್, ನನಗೆ ಸಹಾಯ ಮಾಡಿರುವವರು ನನಗೆ ವೈಯಕ್ತಿಕವಾಗಿ ಪರಿಚಯವಿಲ್ಲ. ಆದರೆ ಅವರ ಕೊಡುಗೆಯಿಂದ ನನಗೆ ಸಹಾಯವಾಗಿದೆ ಎಂದು ಹೇಳಿದ್ದಾರೆ. 
ಭಾರತೀಯರಷ್ಟೇ ಅಲ್ಲದೇ ಅಮೆರಿಕನ್ನರೂ ಸಹ ನದೀಮ್ ಗೆ ಸಹಾಯ ಮಾಡಿದ್ದು, 400 ಡಾಲರ್ ನಷ್ಟು ಹಣವನ್ನು ಕಳಿಸಿದ್ದಾರೆ. ಅವರ ಹೆಸರು ನನಗೆ ಗೊತ್ತಿಲ್ಲ ಆದರೆ ಅವರಿಗೆ ಕೃತಜ್ಞನಾಗಿರುತ್ತೇನೆ ಎಂದು ನದೀಮ್ ಹೇಳಿದ್ದಾರೆ. ಮಗನಿಗೆ ದೊರೆತ ಸಹಾಯದಿಂದ ಸಂತೋಷಗೊಂಡಿರುವ ನದೀಪ್ ಪೋಷಕರು, ಸಮಾಜದಿಂದ ದೊರೆತ ಸಹಾಯವನ್ನು ಮುಂದೊಂದು ದಿನ ಮತ್ತೊಬ್ಬರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ವಪಾಸ್ ನೀಡುವಂತೆ ಹೇಳಿದ್ದಾರೆ. ಕ್ರೌಡ್ ಫಂಡಿಂಗ್ ಗೂ ಮುನ್ನ ದಾರಿ ಕಾಣದಾಗಿದ್ದ ನಾನು ವಿದ್ಯಾಭ್ಯಾಸ ಮುಂದುವರೆಸಲು ವಿದ್ಯಾಭ್ಯಾಸ ಮೊಟಕುಗೊಳಿಸಿ ದುಡಿಯಬೇಕೆಂಬ ಆಲೋಚನೆ ಮಾಡಿದ್ದೆ ಎಂದು ನದೀಮ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT