ಸಾಂದರ್ಭಿಕ ಚಿತ್ರ 
ದೇಶ

12 ತಾಸು ಕೆಲಸ ಮಾಡಲು ನಾವು ಗುಲಾಮರಲ್ಲ: ನೋಟು ಮುದ್ರಣ ನೌಕರರ ಅಸಮಾಧಾನ

ಪ್ರತಿದಿನ 9 ಗಂಟೆಗಳಿಗೂ ಹೆಚ್ಚಿನ ಸಮಯ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಸಲ್ಬೋನಿಯಲ್ಲಿರುವ ನೋಟು ಮುದ್ರಣ ಕೇಂದ್ರದ ನೌಕರರು ...

ಕೊಲ್ಕೋತಾ: ಪ್ರತಿದಿನ 9 ಗಂಟೆಗಳಿಗೂ ಹೆಚ್ಚಿನ ಸಮಯ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಸಲ್ಬೋನಿಯಲ್ಲಿರುವ ನೋಟು ಮುದ್ರಣ ಕೇಂದ್ರದ ನೌಕರರು ತಿಳಿಸಿದ್ದಾರೆ. 12 ಗಂಟೆಗಳ ಕಾಲ ಕೆಲಸ ಮಾಡಲು ನಾವು ಗುಲಾಮರಲ್ಲ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್‌ 14ರಿಂದ ನಿರಂತರವಾಗಿ ಹೆಚ್ಚಿನ ಅವಧಿಗೆ ಕೆಲಸ ಮಾಡಿದ ಕಾರಣ ಕೆಲವು ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ (ಬಿಆರ್‌ಬಿಎನ್‌ಎಂಪಿಎಲ್) ನೌಕರರ ಸಂಘವು ಅಧಿಕಾರಿಗಳಿಗೆ ನೀಡಿರುವ ನೋಟಿಸ್‌ನಲ್ಲಿ ಹೇಳಿದೆ.

ಸಲ್ಬೋನಿ ಮುದ್ರಣ ಕೇಂದ್ರದ ಹಲವು ನೌಕರರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಂತರ ಹೊಸ ನೋಟುಗಳಿಗೆ ಎದುರಾದ ಭಾರಿ ಬೇಡಿಕೆ ಪೂರೈಸಲು ಪ್ರತಿದಿನ 12 ತಾಸು ಕೆಲಸ ಮಾಡಲು ಅಧಿಕಾರಿಗಳು ನೌಕರರ ಮೇಲೆ ಒತ್ತಡ ಹೇರಿದ್ದರು ಪ್ರಯೋಜನಕ್ಕೆ ಬರಲಿಲ್ಲ. 12 ತಾಸು ಕೆಲಸ ಮಾಡಲು ನೌಕರರೇನೂ ಗುಲಾಮರಲ್ಲ ಎಂದು ಅವರು ಆಕ್ರೋಶದಿಂದ ಹೇಳಿದರು. ಸಲ್ಬೋನಿ ಮುದ್ರಣಾಲಯದಲ್ಲಿ ಪ್ರತಿದಿನ ಅಂದಾಜು 9.6 ಕೋಟಿ ನೋಟುಗಳನ್ನು ಮುದ್ರಿಸಲಾಗುತ್ತಿದೆ.

12 ಗಂಟೆಗಳ ಪಾಳಿ ಬದಲು 9 ಗಂಟೆಗಳ ಎರಡು ಪಾಳಿಗಳಲ್ಲಿ ಕೆಲಸ ಮಾಡಿದರೆ ದಿನಕ್ಕೆ ಒಟ್ಟು 6.8 ಕೋಟಿ ನೋಟುಗಳನ್ನು ಮುದ್ರಿಸಲು ಸಾಧ್ಯವಾಗುತ್ತದೆ  ನೋಟುಗಳ ಕೊರತೆಯಿಂದಾಗಿ ಜನತೊಂದರೆ ಅನುಭವಿಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ, 'ಸಮಸ್ಯೆ ಆಗುತ್ತದೆ ಎಂಬುದು ನಮಗೆ ಗೊತ್ತಿದೆ. ಸಮಸ್ಯೆಯನ್ನು ಸರ್ಕಾರ ಬಗೆಹರಿಸಬೇಕು. ನೋಟು ರದ್ದು ಮಾಡುವ ತೀರ್ಮಾನ ಕೈಗೊಂಡಿದ್ದು ಸರ್ಕಾರವಲ್ಲವೇ?' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಿನದಲ್ಲಿ 12 ಗಂಟೆ ದುಡಿಯಲು ನಾವು ಗುಲಾಮರಲ್ಲ, ಅಥವಾ ರೋಬೋಟ್ ಗಳಲ್ಲ, 12 ಗಂಟೆ ಕೆಲಸ ಮಾಡುವುದು ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಬಹುದು, ಆದರೆ ನಾವು ಮನುಷ್ಯರು, ನಮಗೂ ವಿಶ್ರಾಂತಿ ಬೇಕು, ನಮ್ಮ ಕುಟುಂಬಕ್ಕೂ ಕೆಲ ಸಮಯ ನೀಡುವ ಅವಶ್ಯಕತೆ ಇದೆ ಎಂದು ನೋಟು ಮುದ್ರಣ ನೌಕರರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT