ಮುಸ್ಲಿಂ ಸಮುದಾಯದ ಪ್ರಮುಖ ನಾಯಕರ ಜತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
ನವದೆಹಲಿ: ದೇಶದ ಮುಸ್ಲಿಂ ಯುವಕರು ಇಸಿಸ್ ನಂತಹ ಉಗ್ರ ಸಂಘಟನೆಯತ್ತ ಆಕರ್ಷಣೆಗೆ ಒಳಗಾಗದೇ ಇರಲು ಮುಸ್ಲಿಂ ಧರ್ಮ ಗುರುಗಳು ತಿಳಿಹೇಳಬೇಕೆಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.
ಭಾರತದ ಹಲವಾರು ರಾಜ್ಯಗಳಿಂದ ಮುಸ್ಲಿಂ ಯುವಕರು ಉಗ್ರ ಸಂಘಟನೆ ಐಎಸ್ ನತ್ತ ಆಕರ್ಷಣೆಗೆ ಒಳಗಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮಂಗಳವಾರ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರ ಜತೆ ಚರ್ಚೆ ನಡೆಸಿತು.
ಧಾರ್ಮಿಕ ನಾಯಕರ ಜೊತೆಗೆ ರಾಜಕಾರಣಿಗಳೂ ಕೂಡ ಸಮುದಾಯದ ಯುವಕರು ಮನವೊಲಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಆಶಿಸುತ್ತಿದೆ. ಅದಕ್ಕಾಗಿ ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಸೇರಿದಂತೆ ಪ್ರಮುಖರನ್ನೂ ಓಲೈಸಲೂ ಸರ್ಕಾರ ಮುಂದಾಗಿ ಎಂದು ತಿಳಿದು ಬಂದಿದೆ.
ಗುಪ್ತಚರ ಸಂಸ್ಥೆಗಳ ಮಾಹಿತಿ ಪ್ರಕಾರ ಮುಂಬೈ ಸಮೀಪದ ಕಲ್ಯಾಣ್ ನ ಇಬ್ಬರು, ಆಸ್ಟ್ರೇಲಿಯಾ ಮೂಲದ ಕಾಶ್ಮೀರಿ ಯುವಕ, ಕರ್ನಾಟಕ ಮತ್ತು ತೆಲಂಗಾಣದ ತಲಾ ಒಬ್ಬ, ಒಮನ್ ಮತ್ತು ಸಿಂಗಾಪುರದಲ್ಲಿರುವ ಭಾರತೀಯ ಮೂಲದ ಯುವಕರು ಐಎಸ್ ಸಂಘಟನೆಗಾಗಿ ಹೋರಾಡುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆ ನಿಗಾ ಇರಿಸಿದೆ.
ಇದೇ ವೇಳೆ ಹಲವು ಸಂದರ್ಭಗಳಲ್ಲಿ ಭಯೋತ್ಪಾದನೆ ಹೆಸರಿನಲ್ಲಿ ಸಮುದಾಯದ ಯುವಕರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುವುದನ್ನು ಧಾರ್ಮಿಕ ಮುಖಂಡರು ಪ್ರಸ್ತಾಪಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos