ಸಾಂದರ್ಭಿಕ ಚಿತ್ರ 
ದೇಶ

ಜನ್ ಔಷಧಿ ಮಳಿಗೆಗಳ ಪುನರ್ ನವೀಕರಣಕ್ಕೆ ಮುಂದಾದ ಕೇಂದ್ರ

ಬಡವರಿಗೆ ಹಾಗೂ ಜನ ಸಮಾನ್ಯರಿಗೆ ಔಷಧಿಗಳು ಸಾಮಾನ್ಯ ದರದಲಲ್ಲಿ ಸಿಗುವಂತೆ ಮಾಡಲು ಜನ್ ಔಷಧಿ ಮಳಿಗೆಗಳ ಪುನರ್ ನವೀಕರಣಕ್ಕೆ ಪ್ರಧಾನಿ ..

ನವದೆಹಲಿ: ಬಡವರಿಗೆ ಹಾಗೂ ಜನ ಸಮಾನ್ಯರಿಗೆ ಔಷಧಿಗಳು ಸಾಮಾನ್ಯ ದರದಲಲ್ಲಿ ಸಿಗುವಂತೆ ಮಾಡಲು ಜನ್ ಔಷಧಿ ಮಳಿಗೆಗಳ ಪುನರ್ ನವೀಕರಣಕ್ಕೆ ಪ್ರಧಾನಿ ಕಾರ್ಯಾಲಯ ಮುಂದಾಗಿದೆ.

ಉತ್ತಮ ಗುಣಮಟ್ಟದ ಔಷಧಿಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಮುಂದಾಗಿರುವ ಕೇಂದ್ರದ ಔಷಧ ಇಲಾಖೆ  2008 ರಲ್ಲಿ ಈ ಯೋಜನೆ ಜಾರಿಗೆ ತಂದಿತ್ತು. ದೇಶಾದ್ಯಂತ ಪ್ರತಿ ಜಿಲ್ಲೆಗೆ ಒಂದು ಜನ್ ಔಷಧಿ ಮಳಿಗೆ ತೆರೆಯುವುದು ಇಲಾಖೆಯ ಗುರಿಯಾಗಿತ್ತು. ಆದರೆ ಮಾರ್ಚ್ 2012 ರ ವೇಳೆಗೆ ಕೇವಲ 112 ಅಂಗಡಿಗಳು ಮಾತ್ರ ತೆರೆಯಲಾಗಿತ್ತು. ಅದರಲ್ಲಿ ಕೇವಲ 99 ಜನ್ ಔಷಧಿ ಮಳಿಗೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು.

ಈ ಜನ್ ಔಷಧಿ ಯೋಜನೆಯನ್ನು ಪರಿಣಾಮಕಾರಿಯಾಗಿ ಮತ್ತೆ ಜಾರಿಗೆ ತರಲು ಕೇಂದ್ರ ಔಷಧ ಇಲಾಖೆ ನಿರ್ಧರಿಸಿದೆ. ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಯಕ್ತಿಕವಾಗಿ ಜನ್ ಔಷದಿ ಮಳಿಗೆಗಳನ್ನು  ತೆರೆಯಲು ಆಸಕ್ತಿ ಉಳ್ಳವರು ಇದನ್ನು ಪ್ರಾರಂಭಿಸಬಹುದಾಗಿದೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನ್ ಔಷಧ ಮಳಿಗೆ ತೆರೆಯಲು ಸರ್ಕಾರ ಸುಮಾರು2.5 ಲಕ್ಷ ರುಪಾಯಿ ಧನ ಸಹಾಯ ನೀಡಲಿದೆ.ಜೊತೆಗೆ ಜಾಗವನ್ನು ಸಹ ಉಚಿತವಾಗಿ ನೀಡಲಿದೆ.

ಔಷಧಿ  ಅಂಗಡಿ ಪೀಠೋಪಕರಣಕ್ಕಾಗಿ 1 ಲಕ್ಷ, ಕಂಪ್ಯೂಟರ್ ಮತ್ತಿತರ ವಸ್ತುಗಳಿಗಾಗಿ 50 ಸಾವಿರ, ಆರಂಭದಲ್ಲಿ ಉಚಿತವಾಗಿ ಔಷದಿ ನೀಡುವ ಸಲುವಾಗಿ 1 ಲಕ್ಷ ರು. ಹಣವನ್ನು ಸರ್ಕಾರ ನೀಡುತ್ತದೆ. ಇನ್ನು  ಔಷಧಿ ಮಾರಾಟದ ಮೇಲೆ ತಿಂಗಳಿಗೆ ಸುಮಾರು 1.5 ಲಕ್ಷ ರು. ಪ್ರೋತ್ಸಾಹ ಧನ ಕೂಡ ನೀಡಲಾಗುತ್ತದೆ.

ಮುಂದಿನ ಮಾರ್ಚ್ ವೇಳೆಗೆ ಸುಮಾರು 1 ಸಾವಿರ ಜನ್ ಔಷಧಿ ಅಂಗಡಿಗಳನ್ನು ಸರ್ಕಾರದ ಮುಂದೆ ಪ್ರಸ್ತಾವನೆ ಇಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷ ಮುಗಿಯುವ ವೇಳೆಗೆ ದೇಶದ 543 ಲೋಕಸಭೆ ಕ್ಷೇತ್ರಗಳಲ್ಲಿ ಕೊನೆ ಪಕ್ಷ ಒಂದೊಂದು ಜನ್ ಔಷಧಿ ಮಳಿಗೆ ಆರಂಭಿಸಲು  ಔಷಧ ಇಲಾಖೆ ತೀರ್ಮಾನಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT