ದೇಶ

ದೇಶಾದ್ಯಂತ ಶಿವಾಜಿ ಜಯಂತಿ ಆಚರಣೆ

Sumana Upadhyaya

ಮುಂಬೈ: ಮರಾಠ ದೊರೆ ಛತ್ರಪತಿ ಶಿವಾಜಿ ಜಯಂತಿಯನ್ನು ದೇಶಾದ್ಯಂತ ಶುಕ್ರವಾರ ಆಚರಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ವಿಶೇಷ ಶ್ರದ್ಧಾ ಭಕ್ತಿಯಿಂದ ಜನರು ಆಚರಿಸುತ್ತಿದ್ದಾರೆ.

ಶಿವಾಜಿ ಹುಟ್ಟಿದ ಸ್ಥಳ ಪುಣೆಯ ಶಿವ್ನೇರಿ ಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಾಗವಹಿಸಿ ಗೌರವ ಸಲ್ಲಿಸಿದರು. ಮುಂಬೈಯಲ್ಲಿ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಶಿವಾಜಿ ಪಾರ್ಕ್ ನಲ್ಲಿ ಮರಾಠ ಯೋಧ ದೊರೆ ಶಿವಾಜಿ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿದರು. ಶಿವಾಜಿ ಜಯಂತಿಯನ್ನು ಮಹಾರಾಷ್ಟ್ರ ಸರ್ಕಾರ ಸಾರ್ವಜನಿಕ ರಜೆ ಘೋಷಿಸುವ ಮೂಲಕ ಆಚರಣೆ ಮಾಡುತ್ತದೆ. ಶಿವಾಜಿ ಜಯಂತಿ ಆಚರಣೆ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಗಳು ಹಾಜರಿದ್ದರು.

SCROLL FOR NEXT