ಸೋನಿ ಸೋರಿ 
ದೇಶ

ಆಮ್ ಆದ್ಮಿ ಪಕ್ಷದ ನೇತಾರೆ ಮೇಲೆ ಆ್ಯಸಿಡ್ ದಾಳಿ

ಛತ್ತೀಸ್‌ಗಢ್‌ದ ಆಮ್ ಆದ್ಮಿ ಪಕ್ಷದ ನೇತಾರೆ ಸೋನಿ ಸೋರಿ ಎಂಬವರ ಮೇಲೆ ಶನಿವಾರ ಆ್ಯಸಿಡ್ ದಾಳಿ ನಡೆದಿದೆ...

ರಾಯ್‌ಪುರ್: ಛತ್ತೀಸ್‌ಗಢ್‌ದ ಆಮ್ ಆದ್ಮಿ ಪಕ್ಷದ ನೇತಾರೆ ಸೋನಿ ಸೋರಿ ಎಂಬವರ ಮೇಲೆ ಶನಿವಾರ ಆ್ಯಸಿಡ್ ದಾಳಿ ನಡೆದಿದೆ.
ಮಾವೋವಾದಿಗಳ ಪ್ರಾಬಲ್ಯವಿರುವ ದಾಂಟೇವಾಡ ಜಿಲ್ಲೆಯಲ್ಲಿ ಮೂವರು ಆಗಂತುಕರು ಸೋನಿ ಅವರ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. 
ಆದಿವಾಸಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಸೋನಿ, ನಂತರ ರಾಜಕಾರಣಿಯಾಗಿದ್ದರು. ಶನಿವಾರ ಬಂಜಾರಿನ್ ಘಾಟಿಯಿಂದ ಜಗ್ದಾಲ್‌ಪುರ್‌ಗೆ ಇಬ್ಬರು ಆಪ್ತರೊಂದಿಗೆ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದ ವೇಳೆ ಜವಾಂಗ ಗ್ರಾಮದಲ್ಲಿ ಸೋನಿ ಅವರ ಮೇಲೆ ದಾಳಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಸ್ತಾನಗರ್‌ನಲ್ಲಿ ಹಾದುಹೋಗುತ್ತಿದ್ದಾಗ ಮೂವರು ಯುವಕರು ಸೋನಿ ಸಂಚರಿಸುತ್ತಿದ್ದ ವಾಹನವನ್ನು ನಿಲ್ಲಿಸಿ ಆ್ಯಸಿಡ್ ಎರಚಿದ್ದಾರೆ. ಸೋನಿ ಅವರನ್ನು ಕೂಡಲೇ ಗೀಡಂ ಆಸ್ಪತ್ರೆಗೆ ಸಾಗಿಸಿ, ನಂತರ ಪೊಲೀಸರಿಗೆ ಮಾಹಿತಿ ತಿಳಿಸಲಾಗಿತ್ತು. 
ವೈದ್ಯರ ಪ್ರಕಾರ, ಕೆಮಿಕಲ್‌ನೊಂದಿಗೆ ಗ್ರೀಸ್ ಬೆರೆಸಿ ಸೋನಿ ಅವರ ಮುಖಕ್ಕೆ ಎರಚಲಾಗಿತ್ತು. ಮುಖ ಸುಟ್ಟು ಹೋಗಿದ್ದು, ಅವರನ್ನು ಜುಗ್ದಾಲ್‌ಪುರ್ ಆಸ್ಪತ್ರೆಗೆ ಸಾಗಿಸಿ, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಲ್ಲಮೂಲಗಳು ಹೇಳಿವೆ.
ಸೋನಿ ಅವರಿಗೆ ಮಾವೋವಾದಿಗಳೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಿ ಛತ್ತೀಸ್‌ಗಢ್ ಪೊಲೀಸರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಈ ಕಿರುಕುಳ ಸಹಿಸಲಾರದೆ ಸೋನಿ ಆಮ್ ಆದ್ಮಿ ಪಕ್ಷಕ್ಕೆ ಸೇರಿ ರಾಜಕಾರಣಿಯಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT