ಮಧುರೈನಲ್ಲಿರುವ ಕರುವಿತುರೈ ಯೂನಿಯನ್ ಪಂಚಾಯತ್ ಶಾಲೆ 
ದೇಶ

ಈ ಗ್ರಾಮದಲ್ಲಿ ದಲಿತ ಕುಟುಂಬಗಳು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಾರೆ

ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳು, ದಲಿತ ವಿದ್ಯಾರ್ಥಿಗಳು ಎಂದು ತಾರತಮ್ಯ ಮಾಡುತ್ತಾರೆಂಬ ಭಯದಿಂದ ಈ ಕುಟುಂಬದವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ....

ಮಧುರೈ:  ಮಧುರೈ ಜಿಲ್ಲೆಯಿಂದ ಆರು ಕಿಮೀ ದೂರದಲ್ಲಿ ಸೋಲನಂದನಮ್ ಪಟ್ಟಣವಿದೆ, ಈ ಪಟ್ಟಣಕ್ಕೆ ಸೇರಿದ ಕುರುವಿತರೈ ಗ್ರಾಮದಲ್ಲಿ  ಸುಮಾರು 150 ದಲಿತ ಕುಟುಂಬಗಳಿವೆ.

ಈ ಊರಿನಲ್ಲಿ ಪಂಚಾಯಿತಿ ಶಾಲೆಯಿದೆ. ಆದರೆ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳು, ದಲಿತ ವಿದ್ಯಾರ್ಥಿಗಳು ಎಂದು ತಾರತಮ್ಯ ಮಾಡುತ್ತಾರೆಂಬ ಭಯದಿಂದ ಈ ಕುಟುಂಬದವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ.

ಕೆಲ ತಿಂಗಳ ಹಿಂದೆ ದಲಿತ ಯುವಕರು ತಮಿಳು ಹಾಡೊಂದನ್ನು ಜೋರಾಗಿ ಹಾಡಿದ್ದರಿಂದ ಹಿಂದೂಗಳು ಆಕ್ರೋಶಗೊಂಡಿದ್ದರು. ಹೀಗಾಗಿ ಕಳೆದ 20 ವರ್ಷಗಳಿಂದ ದಲಿತ ವಿದ್ಯಾರ್ಥಿಗಳು ಅದೇ ಊರಿನಲ್ಲಿರುವ ಶಾಲೆಗೆ ಹೋಗದೇಸ ಕೀಮೀ ದೂರದಲ್ಲಿರುವ ಪಕ್ಕದ ಮನ್ನದಿಮಂಗಳಂ ಪಂಚಾಯತ್ ನಲ್ಲಿರುವ ಸರ್ಕಾರಿ ಶಾಲೆಗೆ ಹೋಗುತ್ತಾರೆ.

ಇನ್ನು ಮೈನ್ ರೋಡ್ ನಲ್ಲಿ ಶಾಲೆಗೆ ತೆರಳು ದಲಿತ ವಿದ್ಯಾರ್ಥಿಗಳನ್ನು ಅವಹೇಳನ ಮಾಡುವುದರಿಂದ ಇವರು ಬದಲಿ ಮಾರ್ಗದಿಂದ ಸ್ಕೂಲಿಗೆ ತೆರಳುತ್ತಾರೆ.

ಇನ್ನು ಸ್ಥಳೀಯ ಕ್ಷೌರಿಕರು ಕೂಡ ಇವರಿಗೆ ಈ ಊರಿನಲ್ಲಿ ಕ್ಷೌರ ಮಾಡುವುದಿಲ್ಲ. ಹೀಗಾಗಿ ಪಕ್ಕದ ಗ್ರಾಮಕ್ಕೆ ತೆರಳಿ ಹೇರ್ ಕಟಿಂಗ್ ಶೇವಿಂಗ್ ಮಾಡಿಸಿಕೊಳ್ಳಬೇಕಾಗಿದೆ.

ಸರ್ಕಾರ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ ಸೌಲಭ್ಯ ನೀಡಿದ್ದರೂ, ಶಾಲೆಯಲ್ಲಿ ಕೆಲ ಮೇಲ್ಜಾತಿ ವರ್ಗದ ಮಕ್ಕಳು ತಾರತಮ್ಯ ನೀತಿ ಅನುಸರಿಸುವುದರಿಂದ ಇಲ್ಲಿನ ಕುಟುಂಬಸ್ಥರು ತಮ್ಮ ಮಕ್ಕಳನ್ನು ತಮ್ಮ ಹಳ್ಳಿಯಲ್ಲಿರುವ ಶಾಲೆಗೆ ಕಳುಹಿಸಿತ್ತಿಲ್ಲ.

ಇನ್ನೂ ಶಾಲೆಯಲ್ಲಿ  ದಲಿತ ಸಿಬ್ಬಂದಿ ತಯಾರಿಸುವ ಬಿಸಿಯೂಟ ಸೇವಿಸಲು ಹಿಂದೂ ವಿದ್ಯಾರ್ಥಿಗಳ ಪೋಷಕರು ಬಿಡುವುದಿಲ್ಲ. ಜೊತಗೆ ಮೈದಾನದಲ್ಲಿ ಜೊತೆಯಾಗಿ ಆಟವಾಡಲು ಕೂಡ ಹಿಂದೂ ಪೋಷಕರು ಬಿಡುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT