ಅನುರಾಗ್ ಠಾಕೂರ್ (ಸಂಗ್ರಹ ಚಿತ್ರ) 
ದೇಶ

ಅಫ್ಜಲ್ ಗುರು ಹುತಾತ್ಮನಾ?: ಲೋಕಸಭೆಯಲ್ಲಿ ಅನುರಾಗ್ ಠಾಕೂರ್ ಪ್ರಶ್ನೆ

ಲೋಕಸಭೆಯಲ್ಲಿ ಜೆಎನ್ ಯು ವಿವಾದದ ಬಗ್ಗೆ ಮಾತನಾಡಿದ ಅವರು, ಉಗ್ರ ಅಫ್ಜಲ್ ಗುರು ನನ್ನು ಹುತಾತ್ಮ ಎಂದು ಬಣ್ಣಿಸಲು ಹೊರಟಿರುವವರೊಂದಿಗೆ ಕಾಂಗ್ರೆಸ್

ನವದೆಹಲಿ: ಅಫ್ಜಲ್ ಗುರು ಹುತಾತ್ಮನಾ? ಹೀಗೆಂದು ಪ್ರಶ್ನಿಸಿದ್ದು ಬಿಜೆಪಿ ನಾಯಕ ಅನುರಾಗ್ ಠಾಕೂರ್. ಲೋಕಸಭೆಯಲ್ಲಿ ಜೆಎನ್ ಯು ವಿವಾದದ ಬಗ್ಗೆ ಮಾತನಾಡಿದ ಅವರು, ಉಗ್ರ ಅಫ್ಜಲ್ ಗುರು ನನ್ನು ಹುತಾತ್ಮ ಎಂದು ಬಣ್ಣಿಸಲು ಹೊರಟಿರುವವರೊಂದಿಗೆ ಕಾಂಗ್ರೆಸ್ ಗುರುತಿಸಿಕೊಳ್ಳುತ್ತಿದೆ ಎಂದು ಅನುರಾಗ್ ಠಾಕೂರ್ ಆರೋಪಿಸಿದ್ದಾರೆ. 
" ಸಂಸತ್ ಮೇಲೆ ದಾಳಿ ಮಾಡಿದವರನ್ನು ಬೆಂಬಲಿಸುತ್ತೀರೋ ಅಥವಾ ಸಂಸತ್ ನ್ನು ರಕ್ಷಿಸುವವರನ್ನು ಬೆಂಬಲಿಸುತ್ತೀರೋ ಎಂಬುದನ್ನು ನೀವು ನಿರ್ಧರಿಸಬೇಕಿದೆ" ಎಂದಿರುವ ಅನುರಾಗ್ ಠಾಕೂರ್, ಇತ್ತೀಚೆಗಷ್ಟೇ ಹುತಾತ್ಮರಾದ ಕ್ಯಾಪ್ಟನ್ ಪವನ್ ಕುಮಾರ್, ಲ್ಯಾನ್ಸ್ ನಾಯಕ್ ಹನುಮಂತಪ್ಪ ಅವರನ್ನು ಸ್ಮರಿಸುತ್ತ ಬಿಜೆಪಿ ದೇಶವನ್ನು ರಕ್ಷಿಸುವ ಯೋಧರ ಪರವಾಗಿದೆ ಎಂದು ಹೇಳಿದ್ದಾರೆ. 
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಅಫ್ಜಲ್ ಗುರು ನನ್ನು ಹುತಾತ್ಮ ಎಂದು ಹೇಳುವವರೊಂದಿಗೆ ಗುರುತಿಸಿಕೊಳ್ಳುತ್ತಾರೆ. ಅವರಿಗೆ ಕುಟುಂಬ ಮೊದಲು ದೇಶ ನಂತರ, ಆದರೆ ನಮಗೆ ದೇಶವೇ ಮೊದಲು ಎಂದು ಠಾಕೂರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT