ದೆಹಲಿಯ ಬಿಎಸ್ ಎಫ್ ಕೇಂದ್ರ ಕಚೇರಿಯಲ್ಲಿ ನಡೆದ ಬಿಎಸ್ ಎಫ್ ಪ್ರಾಯೋಜಿತ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಬಿಎಸ್ ಎಫ್ ಮಹಾ ನಿರ್ದೇಶಕ ಡ 
ದೇಶ

ಪ್ರತಿಭಟನೆ ವೇಳೆ ಹಾನಿ,ದಾಳಿ ಮಾಡಿದವರಿಗೆ ದಂಡ, ಶಿಕ್ಷೆ

ಪ್ರತಿಭಟನೆ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯನ್ನುಂಟುಮಾಡುವ ಮತ್ತು ಇತರರ ಮೇಲೆ ದಾಳಿ ಮಾಡುವವರಿಗೆ ಅತಿ ಹೆಚ್ಚಿನ ದಂಡ ಹಾಗೂ ದೀರ್ಘಾವಧಿಯವರೆಗೆ ಶಿಕ್ಷೆ...

ನವದೆಹಲಿ: ಪ್ರತಿಭಟನೆ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯನ್ನುಂಟುಮಾಡುವ ಮತ್ತು ಇತರರ ಮೇಲೆ ದಾಳಿ ಮಾಡುವವರಿಗೆ ಅತಿ ಹೆಚ್ಚಿನ ದಂಡ ಹಾಗೂ ದೀರ್ಘಾವಧಿಯವರೆಗೆ ಶಿಕ್ಷೆ ವಿಧಿಸಲಾಗುವುದು ಎಂದು ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ.

ಈ ಸಂಬಂಧ ಅದು ಹೊಸ ಶಾಸನವೊಂದನ್ನು ತರಲು ಮುಂದಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳ ನಷ್ಟವನ್ನು ತಡೆಯುವ ಕಾಯ್ದೆಗೆ ತಿದ್ದುಪಡಿ ತರಲು ಇಲಾಖೆ ಚಿಂತಿಸುತ್ತಿದ್ದು, ಹಾನಿಯನ್ನುಂಟುಮಾಡಿದವರ ವಿರುದ್ಧ ಮತ್ತು ಪ್ರತಿಭಟನೆಯನ್ನು ಸಂಘಟಿಸಿದವರ ವಿರುದ್ಧ ಕೂಡ ಅಪರಾಧ ಪ್ರಕರಣ ದಾಖಲಿಸುವ ಪರಿಣಾಮಕಾರಿ ಕಾನೂನನ್ನು ಇದು ಒಳಗೊಂಡಿರುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಹರ್ಯಾಣದಲ್ಲಿ ಮೊನ್ನೆ ಜಾಟ್ ಸಮುದಾಯದ ಪ್ರತಿಭಟನೆಯಿಂದ ಸುಮಾರು 20 ಸಾವಿರ ಕೋಟಿ ರೂಪಾಯಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಹಾನಿಗೀಡಾದ ಆಸ್ತಿಗೆ ಮಾರುಕಟ್ಟೆ ಮೌಲ್ಯದ ಮೊತ್ತವನ್ನೇ ನೀಡಬೇಕು ಎಂದು ಉದ್ದೇಶಿತ ಕಾನೂನಿನಲ್ಲಿ ಹೇಳಲಾಗಿದೆ.

ಸಾರ್ವಜನಿಕರು ಮತ್ತು ಮಧ್ಯಸ್ಥಿಕೆದಾರರಿಂದ ಪಡೆದ ಸಲಹೆ, ಅಭಿಪ್ರಾಯಗಳನ್ನು ಒಪ್ಪಿಕೊಂಡು ಅದನ್ನು ಆಧರಿಸಿ ಗೃಹ ಸಚಿವಾಲಯ ವರದಿಯೊಂದನ್ನು ತಯಾರಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT