ಸ್ಮೃತಿ ಇರಾನಿ 
ದೇಶ

ರೋಹಿತ್ ವೆಮುಲಾ ಕುಟುಂಬದ ಬಗ್ಗೆ ಸ್ಮೃತಿ ಇರಾನಿಗೆ ಸಂವೇದನೆ ಇಲ್ಲ: ಹೈದರಾಬಾದ್ ವಿವಿ ಪ್ರಾಧ್ಯಾಪಕರು

ಸ್ಮೃತಿ ಇರಾನಿ ರೋಹಿತ್ ವೇಮುಲಾ ಕುಟುಂಬದ ಬಗ್ಗೆ ಸಂವೇದನೆ ಹೊಂದಿಲ್ಲ ಎಂದು ಹೈದರಾಬಾದ್ ವಿವಿ ಪ್ರಾಧ್ಯಾಪಕರು ಆರೋಪಿಸಿದ್ದಾರೆ.

ಹೈದರಾಬಾದ್: ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿರುವ ಹೈದರಾಬಾದ್ ವಿವಿ ಯ ಎಸ್ ಸಿ / ಎಸ್ ಟಿ ಶಿಕ್ಷಕರ ವೇದಿಕೆ ಹಾಗೂ ಪ್ರಾಧ್ಯಾಪಕರು ಸ್ಮೃತಿ ಇರಾನಿ ರೋಹಿತ್ ವೇಮುಲಾ ಕುಟುಂಬದ ಬಗ್ಗೆ ಸಂವೇದನೆ ಹೊಂದಿಲ್ಲ ಎಂದು ಆರೋಪಿಸಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿಯಿಂದ ನ್ಯಾಯ ಹಾಗೂ ಸತ್ಯವನ್ನು ನಿರೀಕ್ಷಿಸುತ್ತಿದ್ದೇವೆ ಹೊರತು ಭಾವಾತಿರೇಕದ ವರ್ತನೆಯನ್ನಲ್ಲ. ಪ್ರಾಧ್ಯಾಪಕರು ಹಾಗೂ ಸಚಿವರು ಸತ್ಯ, ಸಮಾನತೆ, ನ್ಯಾಯ, ಭರವಸೆ, ಮತ್ತು ಸ್ಫೂರ್ತಿಯನ್ನು ನೀಡಬೇಕೆ ಹೊರತು ಭಾವಾತಿರೇಕದ ವರ್ತನೆ ತೋರುವುದು ಸರಿಯಲ್ಲ ಎಂದು  ಶಿಕ್ಷಕರ ವೇದಿಕೆ ಸ್ಮೃತಿ ಇರಾನಿಗೆ ಬರೆದ ಪತ್ರದಲ್ಲಿ ಹೇಳಿದೆ.
ವೇಮುಲ ಪ್ರಕರಣದಲ್ಲಿ ಸ್ಮೃತಿ ಇರಾನಿ ನಿರ್ದೋಷಿಯೆಂದು ಹೇಳಿರುವ ಶಿಕ್ಷಕರ ವೇದಿಕೆ, ಸಂಸತ್ ನ ಭಾಷಣದಲ್ಲಿ ತಪ್ಪು ಮಾಹಿತಿಗಳನ್ನು ಸಮರ್ಥನೆ ಮಾಡಿದ್ದಾರೆ ಎಂದು ಸ್ಮೃತಿ ಇರಾನಿ ವಿರುದ್ಧ ಆರೋಪಿಸಿದೆ. ಭಾಷಣದಲ್ಲಿ ತಪ್ಪು ಮಾಹಿತಿಗಳನ್ನು ಸಮರ್ಥಿಸುವುದು ಮಾತ್ರವಲ್ಲದೇ ಸ್ಮೃತಿ ಇರಾನಿ ಅವರು ಮುಲಾ ಕುಟುಂಬದ ಬಗ್ಗೆ ಸಂವೇದನೆ ಇಲ್ಲದಂತೆ ನಡೆದುಕೊಂಡಿದ್ದಾರೆ ಎಂದು ಎಸ್ ಸಿ / ಎಸ್ ಟಿ ಶಿಕ್ಷಕರ ವೇದಿಕೆ ಪತ್ರದಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT