ನಕ್ಸಲರ ಶರಣಾಗತಿ (ಸಂಗ್ರಹ ಚಿತ್ರ) 
ದೇಶ

ಛತ್ತೀಸ್​ಗಢ: 11 ಮಾವೋವಾದಿ ನಕ್ಸಲೀಯರ ಶರಣಾಗತಿ

ವಿವಿಧ ಕಾರಣಗಳಿಂದಾಗಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ 11 ಮಂದಿ ನಕ್ಸಲೀಯರು ಭಾನುವಾರ ಶರಣಾಗತರಾಗಿದ್ದಾರೆ...

ರಾಯ್ ಪುರ: ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ 11 ಮಂದಿ ನಕ್ಸಲೀಯರು ಭಾನುವಾರ ಶರಣಾಗತರಾಗಿದ್ದಾರೆ.

ನಕ್ಸಲೀಯರನ್ನು ಸಮಾಜದಲ್ಲಿ ಸೇರಿಸುವ ಛತ್ತೀಸ್​ಗಢ ಸರ್ಕಾರ ಕ್ರಮದಿಂದಾಗಿ ಇಂದು ಕೊಂಡಗಾಂವ್ ಜಿಲ್ಲೆಯಲ್ಲಿ 11 ಮಂದಿ ನಕ್ಸಲೀಯರು ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಛತ್ತೀಸ್  ಗಢ ಸರ್ಕಾರದ ಶರಣಾಗತಿ ನೀತಿಯಿಂದ ಪ್ರಭಾವಿತಗೊಂಡು ಮತ್ತು ಸಂಘಟನೆಯ ಹಿರಿಯರು ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದಕ್ಕೆ ಭ್ರಮನಿರಸನಗೊಂಡು ಅವರು  ಶರಣಾಗತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶರಣಾಗತರಾಗಿರುವವರ ಪೈಕಿ ಗಣೇಶ ಕೊರ್ರಂ (23 ವರ್ಷ) ಮತ್ತು ಲಲಿತ್ ಕಶ್ಯಪ್ (22 ವರ್ಷ) ಪ್ರಮುಖರಾಗಿದ್ದು, ಇವರ ತಲೆಗಳಿಗೆ ಸರ್ಕಾರ ತಲಾ 3 ಲಕ್ಷ ರೂಪಾಯಿಗಳ ಬಹುಮಾನ  ಘೊಷಣೆ ಮಾಡಿತ್ತು. ಈ ಇಬ್ಬರು ನಾಯಕರು ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿ ನಕ್ಸಲೀಯರ ಸಂದೇಶ ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೊಂಡಗಾಂವ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೆ.ಎಸ್. ವಟ್ಟಿ ಅವರು, ಸಂಘಟನೆಯ ಹಿರಿಯ ನಾಯಕರ ಕಿರುಕುಳದಿಂದ ಯುವಕರು  ಭ್ರಮ-ನಿರಸನಗೊಂಡಿದ್ದು, ಛತ್ತೀಸ್​ಗಢ ಸರ್ಕಾರದ ಶರಣಾಗತಿ ನೀತಿಯಿಂದ ಪ್ರಭಾವಿತರಾಗಿದ್ದಾರೆ. ಹೀಗಾಗಿ ಸರ್ಕಾರದ ಮುಂದೆ ಶರಣಾಗಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Trump ಭಾಗಿಯಾಗಲಿರುವ ಗಾಜಾ ಶಾಂತಿ ಶೃಂಗಸಭೆಗೆ ಪ್ರಧಾನಿಗೆ ಈಜಿಪ್ಟ್‌ನ ಸಿಸಿ ಆಹ್ವಾನ: US ಅಧ್ಯಕ್ಷರೊಂದಿಗೆ ವೇದಿಕೆ ಹಂಚಿಕೊಳ್ತಾರಾ ಮೋದಿ?

Bihar election 2025: NDA ಸೀಟು ಹಂಚಿಕೆ ಅಂತಿಮ; ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ಇದೆಂಥಾ ಕ್ರೌರ್ಯ: ಮದ್ಯ ಮಾರಾಟ ನಿಷೇಧ ಉಲ್ಲಂಘಿಸಿದ್ದ ಬ್ರಾಹ್ಮಣನ ಟೀಕಿಸಿ ಪೋಸ್ಟ್; OBC ವ್ಯಕ್ತಿಗೆ ಅದೇ ಬ್ರಾಹ್ಮಣನ ಪಾದ ತೊಳೆದು ನೀರು ಕುಡಿಯುವ ಶಿಕ್ಷೆ!

Tomahawk Missiles: ಅಮೆರಿಕ ಉಕ್ರೇನ್ ಗೆ 'ಟೊಮಾಹಾಕ್ ಕ್ಷಿಪಣಿ' ನೀಡುವ ಸಾಧ್ಯತೆ; ರಷ್ಯಾದ ಬಿಗ್ ವಾರ್ನಿಂಗ್ ಏನು?

SCROLL FOR NEXT